ಉಬ್ಬಲಗುಂಡಿ ಕಬ್ಬಿಣದ ಅದಿರು ಗಣಿಯಲ್ಲಿ ಅರಣ್ಯ ನಾಶ: ಕ್ರಮಕ್ಕೆ ಒತ್ತಾಯ

KannadaprabhaNewsNetwork |  
Published : Jan 24, 2026, 03:30 AM IST
ಸಂಡೂರು ತಾಲೂಕಿನ ತೋರಣಗಲ್ಲಿನ ನಾಡಕಚೇರಿ ನೌಕರರಾದ ಪುಷ್ಪಲತಾ ಅವರಿಗೆ ಸಿಪಿಐ(ಎಂ) ಪಕ್ಷದ ಮುಖಂಡರು ಗುರುವಾರ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ವಿಸ್ತೀರ್ಣದಲ್ಲಿರುವ ಮೆ. ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್‌ನ ಉಬ್ಬಲಗುಂಡಿ ಕಬ್ಬಿಣದ ಅದಿರು ಗಣಿ ಎಂ.ಎಲ್.೦೦೮ರಲ್ಲಿನ ಅರಣ್ಯದ ಮರಗಳನ್ನು ಕಡಿಯಲಾಗಿದೆ ಎಂದು ಮುಖಂಡರು ಆರೋಪಿಸಿದ್ದಾರೆ.

ಸಂಡೂರು: ತಾಲೂಕಿನ ಉಬ್ಬಲಗುಂಡಿಯಲ್ಲಿ ಅದಿರು ಗಣಿ ಪ್ರದೇಶದ ಮರಗಳನ್ನು ಕಡಿದು, ಬೆಂಕಿ ಹಚ್ಚಿ, ಕಾಡು ನಾಶ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ತಾಲೂಕು ಸಮಿತಿ ಮುಖಂಡರು ಗುರುವಾರ ತೋರಣಗಲ್ಲಿನ ನಾಡಕಚೇರಿಯ ಉಪ ತಹಸೀಲ್ದಾರ್ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಗ್ರಾಮದ ದೋಣಿಮಲೈ ಬ್ಲಾಕ್ ಮತ್ತು ಉಬ್ಬಲಗುಂಡಿ ಮೀಸಲು ಅರಣ್ಯದಲ್ಲಿ ೩೨೮೯ರಷ್ಟು ವಿಸ್ತೀರ್ಣದಲ್ಲಿರುವ ಮೆ. ಜೆಎಸ್‌ಡಬ್ಲ್ಯೂ ಸ್ಟೀಲ್ ಲಿಮಿಟೆಡ್‌ನ ಉಬ್ಬಲಗುಂಡಿ ಕಬ್ಬಿಣದ ಅದಿರು ಗಣಿ ಎಂ.ಎಲ್.೦೦೮ರಲ್ಲಿನ ಅರಣ್ಯದ ಮರಗಳನ್ನು ಕಡಿಯಲಾಗಿದೆ ಎಂದು ಮುಖಂಡರು ಆರೋಪಿಸಿದ್ದಾರೆ.

ಮನವಿ ಪತ್ರ ಸಲ್ಲಿಸಿ ಮಾತನಾಡಿದ ಸಿಪಿಐ (ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಜೆ.ಎಂ. ಚನ್ನಬಸಯ್ಯ, ಅರಣ್ಯ ಹಾಗೂ ಬಗರ್ ಹುಕುಂ ಭೂ ಸಾಗುವಳಿದಾರರು ಭೂ ಹಕ್ಕುಪತ್ರ ದೊರೆಯದೆ ಪರದಾಡುತ್ತಿದ್ದಾರೆ. ಅಕ್ರಮ ಅದಿರು ಸಾಗಣೆ ಹಾಗೂ ಗಣಿಗಳ ಅರಣ್ಯ ಒತ್ತುವರಿ ಪ್ರಕರಣಗಳು ಮಾಸುವ ಮುನ್ನವೇ ಅರಣ್ಯ ಕಡಿದು ಬೆಂಕಿ ಹಚ್ಚುವ ಗಂಭೀರ ಪ್ರಕರಣ ನಡೆದರೂ, ಸಂಬಂಧಪಟ್ಟ ಸರ್ಕಾರದ ಇಲಾಖೆಗಳು ಮೌನವಾಗಿವೆ ಎಂದು ದೂರಿದರು.

ಉಬ್ಬಲಗುಂಡಿ ಕಬ್ಬಿಣದ ಅದಿರು ಗಣಿಯಲ್ಲಿನ ಅರಣ್ಯ ಪ್ರದೇಶದಲ್ಲಿ ಜ. ೧೮ರಂದು ಮಧ್ಯಾಹ್ನದ ಸಮಯದಲ್ಲಿ ಮರ ಕತ್ತರಿಸುವ ಮಿಷನ್ ಬಳಸಿ ಹಲವಾರು ಮರಗಳನ್ನು ನಾಶ ಮಾಡಿದ್ದಾರೆ. ಸಣ್ಣಪುಟ್ಟ ಮುಳ್ಳುಗಿಡಗಳು ಹಾಗೂ ಹುಲ್ಲು ತಮ್ಮ ಕೆಲಸಕ್ಕೆ ಅಡ್ಡಿ ಬರುತ್ತವೆ ಎಂದು ಅವುಗಳಿಗೆ ಬೆಂಕಿ ಹಚ್ಚಿ, ಹಲವಾರು ಎಕರೆಯಷ್ಟು ಅರಣ್ಯವನ್ನು ಸುಟ್ಟು ನಾಶ ಮಾಡಿದ್ದಾರೆ. ಇದುವರೆಗೂ ಸರ್ಕಾರದ ಅರಣ್ಯ ಇಲಾಖೆಯ ಅಧಿಕಾರಿಗಳಾಗಲಿ, ಸಿಬ್ಬಂದಿಯಾಗಲಿ ಸ್ಥಳ ಪರಿಶೀಲನೆಗೆ ಬರಲಿಲ್ಲ ಹಾಗೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಮಾಹಿತಿ ನೀಡಿದವರನ್ನು ಬೆದರಿಸಲಾಗುತ್ತಿದೆ. ಅರಣ್ಯಕ್ಕೆ ಬೆಂಕಿ ಹಚ್ಚುವುದು ಗಂಭೀರ ಅಪರಾಧವಾಗಿದೆ ಎಂದು ಹೇಳಿದರು.

ಮರಗಳನ್ನು ಕಡಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೂಡಲೆ ಗಣಿಗೆ ಸಂಬಂಧಿಸಿದ ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧ ದಾವೆ ಹೂಡಿ, ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ವಿ.ಎಸ್. ಶಿವಶಂಕರ್, ಪಂಪನಗೌಡ ಕುರೆಕುಪ್ಪ, ಎ. ಸ್ವಾಮಿ, ಎಂ. ಖಲಂದರಬಾಷಾ, ಎಸ್. ಕಾಲುಬಾ, ವಿ. ದೇವಣ್ಣ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅನನ್ಯ
ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರ ಹಿತ ಕಾಪಾಡಿ