ಶಿವಾನಂದ ಗೊಂಬಿ
ಇದಷ್ಟೇ ಕಳೆದ ಸಲ ಸಿದ್ದರಾಮಯ್ಯ ಬಜೆಟ್ನಲ್ಲಿ ನೀಡಿದ್ದರಲ್ಲಿ ಈಡೇರಿಕೆಯಾಗಿರುವುದು. ಉಳಿದ ಯಾವ ಘೋಷಣೆಗಳು ಈಡೇರಿಲ್ಲ. ಬೇರೆ ಯಾವ ಅಭಿವೃದ್ಧಿ ಕೆಲಸಗಳು ಆಗಿಲ್ಲ.
ಹೀಗಾಗಿ ಸಿದ್ದರಾಮಯ್ಯ ಕಳೆದ ಜುಲೈನಲ್ಲಿ ಮಂಡಿಸಿದ ಬಜೆಟ್ನಿಂದ ಜಿಲ್ಲೆಗೆ ಹೆಚ್ಚಿನ ನಿರೀಕ್ಷೆಗಳೇನೂ ಈಡೇರಿರಲಿಲ್ಲ. ಇನ್ನು ಘೋಷಣೆಯಾಗಿದ್ದರಲ್ಲೂ ಕೆಲವೊಂದಿಷ್ಟೇ ಸರ್ಕಾರ ಈಡೇರಿಸಿದೆ. ಅದು ಕೂಡ ಅಪೂರ್ಣವಾಗಿದೆ. ಹೀಗಾಗಿ, ಕೊಂಚ ಸಿಹಿ ಕೊಂಚ ಕಹಿಯಾದಂತಾಗಿದೆ.ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿದ್ದರಾಮಯ್ಯ ಜುಲೈನಲ್ಲಿ ಬಜೆಟ್ ಮಂಡಿಸಿದ್ದರು. ಆಗ ಡಾ. ಎಂ.ಎಂ. ಕಲಬುರ್ಗಿ ಹೆಸರಲ್ಲಿ ಟ್ರಸ್ಟ್ ರಚಿಸುವುದಾಗಿ ಹೇಳಿತ್ತು. ಅದರಂತೆ ಟ್ರಸ್ಟ್ ಕೂಡ ರಚನೆಯಾಗಿದೆ. ಅದಕ್ಕೆ ವೀರಣ್ಣ ರಾಜೂರ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಈಡೇರದ ಭರವಸೆ
ಹಾಗೆ ನೋಡಿದರೆ ಸಿದ್ದರಾಮಯ್ಯ ಹೊಸ ಕೈಗಾರಿಕಾ ವಸಾಹತು ಘೋಷಿಸಿದ ವೇಳೆ ಕೈಗಾರಿಕೋದ್ಯಮಿಗಳು ಬಹಳಷ್ಟು ಖುಷಿ ಪಟ್ಟಿದ್ದರು. ಯುವಸಮೂಹ ಮತ್ತಷ್ಟು ಕೈಗಾರಿಕೆಗಳು ಬಂದರೆ ಕೆಲಸಕ್ಕೆ ದೂರದ ಊರುಗಳಿಗೆ ಅಲೆದಾಡುವುದು ತಪ್ಪುತ್ತದೆ ಎಂಬ ಭಾವನೆ ಹೊಂದಿದ್ದರು. ಆದರೆ, ಈವರೆಗೂ ಕೈಗಾರಿಕಾ ವಸಾಹತು ಪ್ರಾರಂಭವಾಗುವುದು ಒತ್ತಟ್ಟಿಗಿರಲಿ, ಎಫ್ಎಂಸಿಜಿ ಕ್ಲಸ್ಟರ್ನಂತಹ ಬೃಹತ್ ಘಟಕಗಳು ಬರಲು ಸಿದ್ಧವಾಗಿದ್ದರೂ ನಿವೇಶನ ದರ ಹೆಚ್ಚಿಸಿರುವುದು ಕೈಗಾರಿಕೆಗಳು ಹಿನ್ನಡೆಯಾದಂತಾಗಿದೆ.
ರಾಜೀವ ಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ವತಿಯಿಂದ ಏಳು ಜಿಲ್ಲೆಗಳಲ್ಲಿ ಅತ್ಯಾಧುನಿಕ ಲ್ಯಾಬ್ ಹಾಗೂ ಸಂಶೋಧನೆ ಕೇಂದ್ರ ಸ್ಥಾಪಿಸುವುದಾಗಿ ಭರವಸೆ ನೀಡಿತ್ತು. ಇದರಿಂದ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲು ನೆರವಾಗುತ್ತಿತ್ತು. ಆದರೆ ಆ ಕೆಲಸವೂ ಆಗಿಲ್ಲ. ಈ ವರೆಗೂ ಈ ವಿಷಯದಲ್ಲೂ ಎಳ್ಳಷ್ಟು ಕೆಲಸಗಳಾಗಿಲ್ಲ. ಮಹದಾಯಿ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪವಾಗಿತ್ತಷ್ಟೇ. ಅದರಿಂದಲೂ ಏನು ಪ್ರಯೋಜನವಾಗಿಲ್ಲ.