ವಾಸವಿ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ

KannadaprabhaNewsNetwork |  
Published : Apr 27, 2026, 02:30 AM IST
ಫೋಟೋವಿವರ- (26ಎಚ್‌ಪಿಟಿ8) ಹೊಸಪೇಟೆಯಲ್ಲಿ ಭಾನುವಾರ ಆರ್ಯವೈಶ್ಯ ಸಮಾಜದಿಂದ ವಾಸವಿ ಜಯಂತಿಯಲ್ಲಿ ನಗರೇಶ್ವರ ದೇವಸ್ಥಾನದಿಂದ ಆರ್ಯವೈಶ್ಯ ಸಮಾಜ ಮಹಿಳೆಯರು ಪೂರ್ಣಕುಂಭದೊಂದಿಗೆ ಕುಲದೇವತೆ ಶ್ರೀ ವಾಸವಿಯ ಭವ್ಯ ಮೆರವಣಿಗೆಯಲ್ಲಿ ಭಾವಹಿಸಿರುವುದು | Kannada Prabha

ಸಾರಾಂಶ

ರಕ್ತದಾನ ಶಿಬಿರದಲ್ಲಿ 38 ಜನರು ರಕ್ತದಾನ ನೀಡಿದರು.

ಹೊಸಪೇಟೆ: ಇಲ್ಲಿನ ಆರ್ಯವೈಶ್ಯ ಸಂಘದಿಂದ ನಗರದಲ್ಲಿ ವಾಸವಿ ಜಯಂತಿಯನ್ನು ಭಾನುವಾರ ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು.

ಬೆಳಿಗ್ಗೆ ನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ವಾಸವಿ ಮಾತೆಗೆ ವಿಶೇಷ ಹೂವಿನಿಂದ ಅಲಂಕಾರಗೊಳಿಸಲಾಗಿತ್ತು. ನಗರದ ಮೇನ್ ಬಜಾರ್‌ನ ನಗರೇಶ್ವರ ದೇವಸ್ಥಾನದಿಂದ ಆರ್ಯವೈಶ್ಯ ಸಮಾಜ ಮಹಿಳೆಯರು ಪೂರ್ಣಕುಂಭದೊಂದಿಗೆ ಕುಲದೇವತೆ ವಾಸವಿಯ ಭವ್ಯ ಮೆರವಣಿಗೆಯಲ್ಲಿ ಆರ್ಯವೈಶ್ಯ ಸಮಾಜದ ಮಹಿಳೆಯರು ಭಾಗವಹಿಸಿದ್ದರು.

ವಾಸವಿ ಮಾತೆಗೆ ತುಲಾಭಾರ ಸೇವೆ, ಕನ್ನಿಕಾ ಪೂಜೆ ಹಾಗೂ ಹಾಗೂ ಧಾರ್ಮಿಕ ಸಭೆ ನಡೆಯಿತು. ದಾನಿಗಳು ಹಾಗೂ ವಿವಿಧ ಬಗೆಯಲ್ಲಿ ಸೇವೆ ಸಲ್ಲಿಸಿದವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಹಂಪಿ ರಸ್ತೆಯ ಮಲ್ಲಿಗೆ ಹೋಟೆಲ್‌ಗೆ ತಿರುವಿನ ಸ್ಥಳದಲ್ಲಿ ವಾಸವಿ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಸಂಘದ ಅಧ್ಯಕ್ಷ ಕಾಕುಬಾಳು ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಪ್ರಹ್ಲಾದ್ ಭೂಪಾಳ್‌, ನಗರಸಭೆ ಮಾಜಿ ಉಪಾಧ್ಯಕ್ಷ ರಮೇಶ್ ಗುಪ್ತ ಹಾಗೂ ಇತರ ಸಮಾಜದ ಮುಖಂಡರು ವಾಸವಿ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

ವೃತ್ತಕ್ಕೆ ಹೆಸರು ಇಡಲು ಕಾರಣಿಕರ್ತರಾದ ನಗರಸಭಾ ಸದಸ್ಯ ರಮೇಶ್ ಗುಪ್ತ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ನಂತರ ಆರ್ಯವೈಶ್ಯ ಸಂಘವು ರೋಟರಿ ಕ್ಲಬ್ ಸಹಯೋಗದಲ್ಲಿ ನಡೆಸಿದ ರಕ್ತದಾನ ಶಿಬಿರದಲ್ಲಿ 38 ಜನರು ರಕ್ತದಾನ ನೀಡಿದರು. ಸಂಜೆ ವಾಸವಿ ದೇವಿಯ ಭವ್ಯ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯಲ್ಲಿ ಆರ್ಯವೈಶ್ಯ ಸಮಾಜದ ಮುಖಂಡರು, ಸಮಾಜದ ಪದಾಧಿಕಾರಿಗಳು, ವಾಸವಿ ಮಹಿಳಾ ಮಂಡಳಿಯ ಸದಸ್ಯರು ಸೇರಿದಂತೆ ಆರ್ಯವೈಶ್ಯ ಸಮಾಜದ ಸಾವಿರಾರು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಹೊಸಪೇಟೆಯಲ್ಲಿ ಭಾನುವಾರ ಆರ್ಯವೈಶ್ಯ ಸಮಾಜದಿಂದ ವಾಸವಿ ಜಯಂತಿಯಲ್ಲಿ ನಗರೇಶ್ವರ ದೇವಸ್ಥಾನದಿಂದ ಆರ್ಯವೈಶ್ಯ ಸಮಾಜ ಮಹಿಳೆಯರು ಪೂರ್ಣಕುಂಭದೊಂದಿಗೆ ಕುಲದೇವತೆ ವಾಸವಿಯ ಭವ್ಯ ಮೆರವಣಿಗೆಯಲ್ಲಿ ಭಾವಹಿಸಿರುವುದು.

ಹೊಸಪೇಟೆಯಲ್ಲಿ ಭಾನುವಾರ ಆರ್ಯವೈಶ್ಯ ಸಮಾಜದಿಂದ ವಾಸವಿ ಜಯಂತಿಯ ಅಂಗವಾಗಿ ನಗರೇಶ್ವರ ದೇವಸ್ಥಾನದ ವಾಸವಿ ಮಾತೆಗೆ ವಿಶೇಷ ಹೂವಿನಿಂದ ಅಲಂಕಾರಗೊಳಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡವೂರು ದೇವಸ್ಥಾನ: ಮಹಾರುದ್ರಯಾಗದ ಅಮಂತ್ರಣ ಪತ್ರಿಕೆ ಬಿಡುಗಡೆ
ಯುವ ಸಮುದಾಯಯ ದೇಶದ ಭವಿಷ್ಯ