ಮಾನಸಿಕ ಅಸ್ವಸ್ಥ ಮಹಿಳೆಯಿಂದ ಆಸ್ತಿ ಬರೆಸಿಕೊಂಡು ವಂಚನೆ

KannadaprabhaNewsNetwork |  
Published : Mar 31, 2026, 01:45 AM IST
೩೦ಕೆಎಂಎನ್‌ಡಿ-೪ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾನಸಿಕ ಅಸ್ವಸ್ಥೆ ಮಹಿಳೆ ಸುಧಾ ಪರ ಸಹೋದರ ಕೃಷ್ಣೇಗೌಡ ಮಾತನಾಡಿದರು. | Kannada Prabha

ಸಾರಾಂಶ

ಮಾನಸಿಕ ಅಸ್ವಸ್ಥೆ ಮದ್ದೂರು ತಾಲೂಕು ತರೀಕೆರೆ ಗ್ರಾಮದ ಸುಧಾ ಅವರ ಆಸ್ತಿ, ಹಣವನ್ನು ಅದೇ ಗ್ರಾಮದ ವಾಣಿ ಅಲಿಯಾಸ್ ಹೊನ್ನೇಗೌಡ ಮತ್ತು ಎಚ್.ಬಿ.ಸ್ಮಿತಾ, ಮಹಿಳಾ ಅಧಿಕಾರಿ ಸೋಗಿನಲ್ಲಿದ್ದ ಶಾಂತಮ್ಮ, ರಾಮಕೃಷ್ಣ, ಶಶಿಕುಮಾರ್, ಶಿವಬೋರಯ್ಯ ಎಂಬುವರು ಸಂಚು ರೂಪಿಸಿ ವಂಚಿಸಿದ್ದಾರೆ ಎಂದು ವಂಚನೆಗೊಳಗಾದ ಸುಧಾಳ ಸಹೋದರ ಕೃಷ್ಣೇಗೌಡ ಆರೋಪ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳಾ ಆಯೋಗದ ಅಧಿಕಾರಿ ಎಂದು ಹೇಳಿಕೊಂಡು ಭಾಗಶಃ ಮಾನಸಿಕ ಅಸ್ವಸ್ಥ ಮಹಿಳೆಗೆ ಹೊನ್ನೇಗೌಡ, ಶಾಂತಮ್ಮ ಸೇರಿದಂತೆ ಇತರೆ ಆರು ಮಂದಿ ಜಮೀನು ಮತ್ತು ನಿವೇಶವನ್ನು ತಮ್ಮ ಹೆಸರಿಗೆ ನೋಂದಾವಣೆ ಮಾಡಿಕೊಂಡಿರುವ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಮಾನಸಿಕ ಅಸ್ವಸ್ಥೆ ಮದ್ದೂರು ತಾಲೂಕು ತರೀಕೆರೆ ಗ್ರಾಮದ ಸುಧಾ ಅವರ ಆಸ್ತಿ, ಹಣವನ್ನು ಅದೇ ಗ್ರಾಮದ ವಾಣಿ ಅಲಿಯಾಸ್ ಹೊನ್ನೇಗೌಡ ಮತ್ತು ಎಚ್.ಬಿ.ಸ್ಮಿತಾ, ಮಹಿಳಾ ಅಧಿಕಾರಿ ಸೋಗಿನಲ್ಲಿದ್ದ ಶಾಂತಮ್ಮ, ರಾಮಕೃಷ್ಣ, ಶಶಿಕುಮಾರ್, ಶಿವಬೋರಯ್ಯ ಎಂಬುವರು ಸಂಚು ರೂಪಿಸಿ ವಂಚಿಸಿದ್ದಾರೆ ಎಂದು ವಂಚನೆಗೊಳಗಾದ ಸುಧಾಳ ಸಹೋದರ ಕೃಷ್ಣೇಗೌಡ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ತರೀಕೆರೆ ಗ್ರಾಮದ ಲಿಂಗಯ್ಯ ಅವರು ಸುಧಾಳನ್ನು ಎರಡನೇ ಪತ್ನಿಯಾಗಿ ಮದುವೆ ಮಾಡಿಕೊಂಡಿದ್ದರು. ಈ ವಿಚಾರ ತಿಳಿದ ಶ್ರೀರಂಗಪಟ್ಟಣ ತಾಲೂಕು ಶಾಂತಿಕೊಪ್ಪಲು ಗ್ರಾಮದ ಶಾಂತಮ್ಮ ಮತ್ತು ಇತರರು ಸುಧಾಗೆ ಗಂಡನಿಂದ ಬರಬೇಕಾದ ಜಮೀನು ಮತ್ತು ಇತರೆ ಆಸ್ತಿಯನ್ನು ಬರೆಸಿಕೊಡುವುದು, ಸರ್ಕಾರದ ವಿವಿಧ ಸವಲತ್ತುಗಳನ್ನು ಕೊಡಿಸುವುದಾಗಿ ನಂಬಿಸಿ ತರೀಕೆರೆ ಗ್ರಾಮದಲ್ಲಿದ್ದ ೧.೧೪ ಎಕರೆ ಜಮೀನನ್ನು ಶಿವಬೋರಯ್ಯ ಎಂಬುವರ ಹೆಸರಿಗೆ ಮದ್ದೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಸಿದ್ದಾರೆ ಎಂದು ದೂರಿದರು.

ಈ ಬಗ್ಗೆ ವಿಚಾರ ತಿಳಿದಾಗ ನಾವು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ರಾಮಕೃಷ್ಣ, ವಾಣಿ, ಸ್ಮಿತಾ, ಶಾಂತಮ್ಮ, ಶಶಿಕುಮಾರ್, ಶಿವಬೋರಯ್ಯ ಅವರ ಬಳಿ ಮಾತುಕತೆ ನಡೆಸಿದಾಗ ಮತ್ತೆ ವಾಪಸ್ಸು ಸುಧಾಳ ಹೆಸರಿಗೆ ಬರೆಸಿಕೊಡುವುದಾಗಿ ತಿಳಿಸಿ ಎಲ್ಲೂ ದೂರು ದಾಖಲು ಮಾಡದಂತೆ ತಿಳಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಂಬಂಧಿಯಿಂದ ೩೮ ಸಾವಿರ ರು. ಡಿಡಿ ಪಡೆದುಕೊಂಡಿದ್ದಾರೆ. ನಂತರ ಜಮೀನು ವಾಪಸ್ಸು ಬರೆಸಿಕೊಡುವಂತೆ ಕೇಳಿದರೆ ನಾವು ಯಾರಿಗೂ ಜಮೀನು ನೋಂದಣಿ ಮಾಡಿಕೊಡುವುದಿಲ್ಲ ಎಂದು ಉದ್ಧಟತನದ ಮಾತುಗಳನ್ನಾಡಿದ್ದಾರೆ ಎಂದು ತಿಳಿಸಿದರು.

ಇದರಿಂದ ಬೇರೆ ವಿಧಿ ಇಲ್ಲದೆ ನಾವು ಸಂಬಂಧಿಸಿದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನೂ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ನೊಂದ ನನ್ನ ಸಹೋದರಿ ಸುಧಾಳಿಗೆ ನ್ಯಾಯ ಕೊಡಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕ ರಾಜ್ಯ ರೈತಪರ ಹೋರಾಟಗಾರರ ಸಂಘದ ಅಧ್ಯಕ್ಷ ಹೆಮ್ಮಿಗೆ ಚಂದ್ರಶೇಖರ್ ಮಾತನಾಡಿ, ನೊಂದ ಮಾನಸಿಕ ಅಸ್ವಸ್ಥ ಮಹಿಳೆ ಎನ್ನುವುದನ್ನೂ ನೋಡದೆ ಅವರ ಆ ಕುಟುಂಬದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಜಮೀನು ಮತ್ತು ನಿವೇಶನವನ್ನು ನೋಂದಣಿ ಮಾಡಿಸಿಕೊಂಡಿದ್ದೂ ಅಲ್ಲದೆ, ಆಕೆಯ ಪತಿಯನ್ನು ಬೆದರಿಸಿ ಲಕ್ಷಾಂತರ ರೂ. ವಸೂಲಿ ಮಾಡಿದ್ದಾರೆ. ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನೊಂದ ಮಹಿಳೆ ಸುಧಾ, ಆಕೆಯ ಸಹೋದರ ನಾಗಣ್ಣ, ರೈತಪರ ಹೋರಾಟಗಾರರ ಸಂಘದ ಸಿದ್ದರಾಜು, ಬಿ. ರಮೇಶ, ಇಂಡುವಾಳು ಬಸವರಾಜು ಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚನ್ನರಾಯಪಟ್ಟಣದಲ್ಲಿ ಬೇಸಿಗೆ ಶಿಬಿರಕ್ಕೆ ಚಾಲನೆ
ಸಬ್ಬಮ್ಮ ದೇವಿ ದರ್ಶನಕ್ಕೆ ಸದಾನಂದ ಗೌಡರ ಕುಟುಂಬ