ಮಂಜುನಾಥ ಕೆ.ಎಂ.
ಇದು ನಗರದ ಹೊರ ವಲಯದ ಗುಗ್ಗರಹಟ್ಟಿಯ ವೃತ್ತದಲ್ಲಿ ಕಳೆದ ಎರಡು ದಶಕಗಳಿಂದ ಪಂಚರ್ ಶಾಪ್ ನಡೆಸುತ್ತಿರುವ ಎಂ. ಪುರುಷೋತ್ತಮ ಅವರ ಶಿಕ್ಷಣ ಪ್ರೀತಿಯ ಯಶೋಗಾಥೆ.
ವೃತ್ತಿ ಪಂಚರ್ ಹಾಕುವುದು ಆಗಿದ್ದರೂ ಸಮಯ ಬಿಡುವು ಮಾಡಿಕೊಂಡು ಸಮೀಪದ ಸರ್ಕಾರಿ ಶಾಲೆಯಲ್ಲಿ ಆಸಕ್ರತಿಯಿಂದ ಪಾಠ ಮಾಡುತ್ತಾರೆ. ಬಿಎ ಪದವೀಧರ ಆಗಿರುವ ಪುರುಷೋತ್ತಮ ಕನ್ನಡ ವಿಷಯಗಳಲ್ಲಿ ಹಿಡಿತ ಸಾಧಿಸಿದ್ಧಾರೆ. ಹಾಗಾಗಿ ಕಳೆದ 10 ವರ್ಷಗಳಿಂದ 4ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಾಠ ಮಾಡುತ್ತಾರೆ. ಆಟ ಆಡಿಸುತ್ತಾರೆ, ಕರಾಟೆ ಕಲಿಸುತ್ತಾರೆ. ಮಕ್ಕಳೊಂದಿಗೆ ಬೆರೆಯುವುದು ಇವರಿಗೆ ಸಂತಸದ ಸಂಗತಿ.ಶಾಲೆಯಲ್ಲಿ ದೈಹಿಕ ಶಿಕ್ಷಕರ ಕೊರತೆಯಿದ್ದು, ಮಕ್ಕಳನ್ನು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವೆ. ಮಕ್ಕಳಿಗೆ ಪಾಠ ಹೇಳಿಕೊಡುವುದರ ಜೊತೆಗೆ, ಜೀವನಶಿಸ್ತು, ಜನಮುಖಿ ಮೌಲ್ಯಗಳು ಮತ್ತು ಆತ್ಮವಿಶ್ವಾಸ ಕುರಿತು ತಿಳಿಸಿಕೊಡುವೆ ಎನ್ನುತ್ತಾರೆ ಪುರುಷೋತ್ತಮ.
ಹೀಗೆ ಪಾಠ ಮಾಡುವ ಎಂ. ಪುರುಷೋತ್ತಮ ತಮ್ಮ ಸ್ವಂತ ಮಗಳನ್ನೇ ಇಂಗ್ಲಿಷ್ ಮಾಧ್ಯಮದಿಂದ ಹೊರತಂದು ಈ ಸರ್ಕಾರಿ ಶಾಲೆಗೆ ಸೇರಿಸಿದ್ದಾರೆ. ಇವರ ಮೂವರು ಮಕ್ಕಳ ಪೈಕಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನನ್ನು ಕನ್ನಡ ಮಾಧ್ಯಮದಲ್ಲಿಯೇ ಓದಿಸುತ್ತಿದ್ದಾರೆ.
ಪಂಚರ್ ಹಾಕುವ ಪುತ್ರಿ
50 ಬಾರಿ ರಕ್ತದಾನ
ಗುಗರಹಟ್ಟಿಯ ಭಜನಾ ಮಂಡಳಿ ಸದಸ್ಯರಾಗಿ ನಿತ್ಯ ರಾತ್ರಿ ದೇವಸ್ಥಾನದಲ್ಲಿ ನಡೆಯುವ ಭಜನೆಯಲ್ಲಿ ಪಾಲ್ಗೊಳ್ಳುತ್ತಾರೆ.
ನಾನು ಸರ್ಕಾರಿ ಶಾಲೆಯಲ್ಲಿಯೇ ಓದಿದ್ದು. ಹೀಗಾಗಿ ನನಗೆ ನಮ್ಮೂರ ಶಾಲೆಯ ಬಗ್ಗೆ ಬಹಳ ಅಭಿಮಾನ. ಶಿಕ್ಷಕರ ಕೊರತೆಯಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೆಟ್ಟು ಬೀಳಬಾರದು ಎಂದು ಕಳೆದ 10 ವರ್ಷಗಳಿಂದ ಪಠ್ಯ ಬೋಧನೆ ಮಾಡುತ್ತಿದ್ದೇನೆ ಎಂದು ಗುಗ್ಗರಹಟ್ಟಿಯ ಪಂಚರ್ ಅಂಗಡಿ ಮಾಲೀಕ ಎಂ. ಪುರುಷೋತ್ತಮ ತಿಳಿಸಿದರು.