ನರಗುಂದ: ಬಸವರಾಜ ಬೊಮ್ಮಾಯಿ ಅಧಿಕಾರವಧಿಯಲ್ಲಿ ₹ 6.79 ಕೋಟಿ ಅನುದಾನದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಬಾಲಕರ ವಸತಿ ನಿಲಯ ಕಟ್ಟಡದ ಭೂಮಿ ಪೂಜೆ ನೆರವೇರಿಸಲಾಯಿತು. ಈಗ ₹ 4 ಕೋಟಿ ವೆಚ್ಚದಲ್ಲಿ ವಸತಿ ನಿಲಯ ಕಟ್ಟಡ ನಿರ್ಮಾಣಗೊಂಡಿದೆ.ಉಳಿದ ಅನುದಾನ ವಿದ್ಯಾರ್ಥಿಗಳ ಬೇಡಿಕೆಗೆ ಅನುಸಾರ ಬಳಕೆ ಮಾಡಲಾಗುವುದು ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ವಸಂತ ಜೋಗಣ್ಣವರ ಮಾತನಾಡಿ, ವಿದ್ಯೆಯೇ ನಮ್ಮ ಶಕ್ತಿಯಾಗಿದೆ. ಮೊದಲು ಶಿಕ್ಷಣ ಆ ಮೇಲೆ ಹೋರಾಟ. ಸರ್ಕಾರದ ಅನುಕೂಲತೆ ಸದುಪಯೋಗ ಮಾಡಿಕೊಳ್ಳದಿರುವುದು ದುಃಖಕರ ಸಂಗತಿಯಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕಂಪೌಂಡ, ಗೇಟ್, ಸೆಕ್ಯುರಿಟಿ ಗಾರ್ಡ್ ಅವಶ್ಯಕತೆ ಇದೆ ಎಂದರು.
ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠ ಹಾಗೂ ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು ಮಾತನಾಡಿ, ಸಂವಿಧಾನದಲ್ಲಿ ಸರ್ವರಿಗೂ ಸಮಬಾಳು, ಸಮಪಾಲು ನೀಡಲಾಗಿದೆ. ಶಿಕ್ಷಣದ ಜತೆಗೆ ಭಾರತೀಯ ಸಂಸ್ಕೃತಿ ರಕ್ಷಣೆಗೆ ಅಂಬೇಡ್ಕರ್ ಬದ್ಧತೆ ಒದಗಿಸಿದ್ದಾರೆ. ನಾವು ಮಾಡುತ್ತಿರುವ ಪ್ಯಾಷನ್ ಸಂಸ್ಕೃತಿಗೆ ಧಕ್ಕೆ ತರದಿರಲಿ ಎಂದು ಹೇಳಿದರು.ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಹೇಶ ಪೋತದಾರ,ತಹಸೀಲ್ದಾರ ಶ್ರೀಶೈಲ ತಳವಾರ, ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಯಲಿಗಾರ, ಉಪಾಧ್ಯಕ್ಷೆ ಕಾಶವ್ವ ಮಳಗಿ, ಸಿ.ಕೆ. ಪಾಟೀಲ, ದೇವಣ್ಣ ಕಲಾಲ, ಭಾವನಾ ಪಾಟೀಲ, ಪ್ರಶಾಂತ ಜೋಶಿ, ಸುನೀಲ ಕುಷ್ಟಗಿ, ಚಂಬಣ್ಣ ವಾಳದ, ಬಾಪುಗೌಡ ತಿಮ್ಮನಗೌಡ್ರ, ಬಿ.ಎಂ. ಬಡಿಗೇರ, ಕ್ರೈಸ್ ಎಇಇ ಚಂದ್ರಶೇಖರ, ಚಂದ್ರು ದಂಡಿನ, ಮಲ್ಲಪ್ಪ ಮೇಟಿ, ಶರಣು ಪೂಜಾರ, ಭೀಮಣ್ಣವರ ಸೇರಿದಂತೆ ಮುಂತಾದವರು ಇದ್ದರು.