ಹೊಸಪೇಟೆ: ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಅಂಬಿಗೇರ್ ಬರ್ಬರ ಹತ್ಯೆಗೈದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಮೃತಳ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ವಿಜಯನಗರ ಜಿಲ್ಲಾ ಗಂಗಾಮತ ಸಮಾಜದಿಂದ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.ಗಂಗಾಮತ ಸಂಘದ ಗೌರವಾಧ್ಯಕ್ಷ ವೈ.ಯಮುನೇಶ್ ಮಾತನಾಡಿ, ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣದ ನೆನಪು ಮಾಸುವ ಮುನ್ನವೇ ಪ್ರೀತಿ ನಿರಾಕರಣೆ ಕಾರಣಕ್ಕೆ ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ನೆತ್ತರ ಹರಿದಿರುವುದು ಇಡೀ ರಾಜ್ಯವೇ ಬೆಚ್ಚಿ ಬೀಳುವಂತಾಗಿದೆ. ಗಿರೀಶ್ ಸಾವಂತ್ ಎಂಬ ಯುವಕ ಅಂಜಲಿ ಅಂಬಿಗೇರ್ ಎಂಬ ಯುವತಿಯನ್ನು ಬೆಳ್ಳಂಬೆಳಗ್ಗೆ ಆಕೆಯ ಮನೆಯಲಿ ಹತ್ಯೆ ಮಾಡಿದ್ದಾನೆ. ಅಂಜಲಿಯನ್ನು ಕೊಲೆ ಮಾಡುವುದಾಗಿ ಈ ಯುವಕನಿಂದ ಬೆದರಿಕೆ ಬಂದ ಬಗ್ಗೆ ಕುಟುಂಬದವರು ಪೊಲೀಸರ ಗಮನಕ್ಕೆ ತಂದಾಗಲೂ ಇದೊಂದು ಸಾಮಾನ್ಯ ಪ್ರಕರಣ ಎನ್ನುವಂತೆ ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಪೊಲೀಸರು ಎಚ್ಚೆತ್ತು ಆರೋಪಿಯನ್ನು ಪತ್ತೆ ಹಚ್ಚಿ ಜೈಲುಪಾಲು ಮಾಡಿದ್ದರೆ ಈ ಕೃತ್ಯ ನಡೆಯುತ್ತಿರಲಿಲ್ಲ ಎಂದರು.
ಸಂಘಟನೆಯ ಪದಾಧಿಕಾರಿಗಳಾದ ಅಂಬಿಗೇರ ಮಂಜುನಾಥ, ಮೇಘನಾಥ, ಸೂರ್ಯನಾರಾಯಣ, ಮುತ್ಕೂರು ರಾಮಣ್ಣ, ಬಾರಕೀರ ನೀಲಪ್ಪ, ಪ್ರೊ. ಉಮಾಮಹೇಶ್ವರ್, ಎಸ್.ನಾಗರಾಜ, ಸುರೇಶ, ಜೆ.ಎಂ.ಅಶೋಕ, ಶ್ರೀಧರ್, ವಿ.ಹೊನ್ನೂರಪ್ಪ, ಎಂ.ರೇಣೇಶ್, ಕಂಪ್ಲಿಅಶೋಕ, ರಾಜೇಶ್, ವರುಣ್, ಮಡ್ಡೇರ್ ದಾನಪ್ಪ, ನೀಲಪ್ಪ, ಶಶಿಧರ, ಮಲ್ಲಯ್ಯ, ವಿಜಯಕುಮಾರ್ ಮತ್ತಿತರರಿದ್ದರು.