ಕನ್ನಡಪ್ರಭ ವಾರ್ತೆ ವಿಜಯಪುರ
ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಪ್ರಗತಿಪರ ರೈತ ರಾಜೇಂದ್ರ ಕೋರಡ್ಡಿ ಅವರ ಹೊಲದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕೃಷಿ ಇಲಾಖೆ ಹಾಗೂ ಶ್ರೀ ಬನಶಂಕರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಧಾರಿತ ಜಿಆರ್ಜಿ ೧೫೨ ತೊಗರಿ ತಳಿಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈತರು ಹಿಂದೆ ಸಾಂಪ್ರದಾಯಿಕ ತೊಗರಿ ತಳಿ ಬಿತ್ತನೆ ಮಾಡುತ್ತಿದ್ದರು. ಇದು ಗೊಡ್ಡುರೋಗಕ್ಕೆ ತುತ್ತಾಗಿ ಇಳುವರಿ ಕುಂಠಿತವಾಯಿತು. ಈಗ ಸುಧಾರಿತ ತಳಿ ಬೆಳೆಯುವುದರಿಂದ ರೋಗನಿರೋಧಕ ಶಕ್ತಿ ಹೊಂದಿದೆ. ಅಲ್ಲದೇ ಅಧಿಕ ಇಳುವರಿ ಕೊಡುತ್ತದೆ. ಬರುವ ಜನವರಿ ೮ ರಿಂದ ೧೦ ರ ವರೆಗೆ ಹಿಟ್ಟಿನಹಳ್ಳಿ ಫಾರ್ಮನಲ್ಲಿ ಕೃಷಿಮೇಳ ಜರುಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಮಾಹಿತಿ ಪಡೆಯಬೇಕು ಎಂದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಸ್.ಎಂ.ವಸ್ತ್ರದ ಮಾತನಾಡಿ, ಹಿಂದೆ ರೈತರು ಮುಂಗಾರಿಯಲ್ಲಿ ಸೂರ್ಯಕಾಂತಿ ಬೆಳೆಯುತ್ತಿದ್ದರು. ಕ್ರಮೇಣ ಈ ಬೆಳೆಗೆ ಕಂಬಳಿ ಹುಳು ಹಾಗೂ ಬೂದಿರೋಗಕ್ಕೆ ತುತ್ತಾಗಿದ್ದರಿಂದ ತೊಗರಿ ಬೆಳೆ ಬೆಳೆಯಲು ಪ್ರಾರಂಭಿಸಿದರು. ಈಗ ಜಿಲ್ಲೆಯಲ್ಲಿ ೧೧ ಲಕ್ಷ ಎಕರೆ ಪ್ರದೇಶದಲ್ಲಿ ರೈತರು ತೊಗರಿ ಬೆಳೆಯುತ್ತಿದ್ದಾರೆ. ತೊಗರಿ ಬೆಳೆಗೆ ಬರುವ ವಿವಿಧ ಕೀಟ, ರೋಗಗಳು, ಜೈವಿಕ ನಿಯಂತ್ರಣ ಕ್ರಮ ಬಗೆ ತಿಳಿಬೇಕು ಎಂದರು.ಕೃಷಿ ಅಧಿಕಾರಿ ಜಯಪ್ರದಾ ದಶವಂತ ಮಾತನಾಡಿ, ರೈತರಿಗೆ ಕೃಷಿಯಲ್ಲಿ ಆಧುನಿಕ ತಾಂತ್ರಿಕತೆ ಅಳವಡಿಸಿ, ಇಲಾಖೆಯಿಂದ ಹಮ್ಮಿಕೊಂಡ ಪ್ರಾತ್ಯಕ್ಷಿಕೆಯನ್ನು ಕ್ಷೇತ್ರೋತ್ಸವ ಮೂಲಕ ಮಾಹಿತಿ ನೀಡಲಾಗುತ್ತಿದೆ. ರೈತರು ಕೃಷಿಭಾಗ್ಯ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಕೃಷಿ ಸಂಜೀವಿನಿ ಯೋಜನೆಯಡಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ರೈತರಿಗೆ ತಿಳಿಸಿದರು.
ಈ ವೇಳೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶಿವಪ್ಪ ಮುದೂರ, ಪಿ.ಕೆ.ಪಿ.ಎಸ್ ವ್ಯವಸ್ಥಾಪಕ ಎಂ.ಆರ್.ನಾಗಶೆಟ್ಟಿ, ಕೃಷಿ ಇಲಾಖೆ ಸಿಬ್ಬಂದಿ ಆರ್.ವಿ.ನಾಯಕ, ಸಂತೋಷ ರಾಠೋಡ, ಮುದಕಪ್ಪ ಯಾಳವಾರ, ಪ್ರಗತಿಪರ ರೈತ ಮುದುಕಾ ಚಿತ್ತಾಪೂರ, ಗೌಡಪ್ಪ ಬಬಲೇಶ್ವರ, ಮುರಳೀದರ ಭಾವಿಕಟ್ಟಿ, ಸುಭಾಶ ಚಂದ್ರ ಯಂಬತ್ನಾಳ, ಅಪ್ಪಾಸಾಹೇಬ ಹೊಸೂರ, ಸದಾಶಿವ ಸಿಂಗೆಗೋಳ, ಶ್ರೀವಾಣಿ ಕುಲಕರ್ಣಿ, ಶ್ರೀ ದೇಶಪಾಂಡೆ, ಕ್ಷೇತ್ರೋತ್ಸವದಲ್ಲಿ ಹಿಟ್ಟಿನಹಳ್ಳಿ, ಉತ್ನಾಳ ಗ್ರಾಮದ ರೈತರು ಇದ್ದರು.