ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ಹಳ್ಳಿಮೈಸೂರಿನ ಕಸ್ತೂರಿ ಬಾ ಗಾಂಧಿ ಬಾಲಿಕಾ ವಿದ್ಯಾಲಯದಲ್ಲಿ ಅತ್ರಿ ಏಜೆನ್ಸಿಸ್ ವತಿಯಿಂದ ನೋಟ್ಬುಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಸ್ತೂರಿ ಬಾ ಗಾಂಧಿ ಬಾಲಿಕ ವಿದ್ಯಾಲಯದಲ್ಲಿ ಹೆಣ್ಣುಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಶಿಕ್ಷಕ ವೃಂದದವರಿಗೆ ಮತ್ತು ಪೋಷಕರಿಗೆ ಹೆಸರು ತರಬೇಕು ಎಂದು ತಿಳಿಸಿದರು. ನಂತರ 65 ಹೆಣ್ಣು ಮಕ್ಕಳಿಗೆ ಟೀ ಶರ್ಟ್ ಮತ್ತು 200 ಪುಟಗಳ 6 ನೋಟ್ಬುಕ್ಗಳನ್ನು ವಿತರಿಸಿ, ಈ ಅವಕಾಶ ಕಲ್ಪಿಸಿಕೊಟ್ಟ ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸಿದರು.
ತಾಪಂ ಮಾಜಿ ಅಧ್ಯಕ್ಷ ಲಕ್ಕೂರು ಬಸವರಾಜ್, ಬಿಆರ್ಸಿ ಕಾಳೇಗೌಡ, ಸಿಆರ್ಪಿ ನಟೇಶ್, ಮುಖ್ಯ ಶಿಕ್ಷಕಿ ಲತಕುಮಾರಿ, ಕೆಜಿಬಿವಿ ಶಾಲೆಯ ವಾರ್ಡನ್ ಕೆ.ಎನ್.ಪ್ರೇಮ, ಸಿಆರ್ಪಿ ನಟೇಶ್, ಬಿಆರ್ಪಿ ಪ್ರಶಾಂತ್, ಇತರರು ಇದ್ದರು.