ಕನ್ನಡಪ್ರಭ ವಾರ್ತೆ ಸುತ್ತೂರು
ಸುತ್ತೂರು ಶ್ರೀಕ್ಷೇತ್ರದಲ್ಲಿ ಶ್ರಾವಣಮಾಸದ 28ನೇ ದಿನದ ಪ್ರವಚನದಲ್ಲಿ ಅವರು ಮಾತನಾಡಿದರು.
ಭಗವಂತ ಸರ್ವಾಂತರ್ಯಾಮಿ, ಜಗತ್ತಿನ ಪ್ರತಿ ಅಣುರೇಣುತೃಣಗಳಲ್ಲೂ ಅವನಿದ್ದಾನೆ. ಅವನನ್ನು ಕಾಣಲು ಜ್ಞಾನದ ಬೆಳಕು ಬೇಕು. ಸೂರ್ಯ ಹಗಲಿನಲ್ಲಿ ಬೆಳಗಿದರೆ. ಚಂದ್ರ ರಾತ್ರಿಯಲ್ಲಿ ಬೆಳಗುತ್ತಾನೆ. ಮೋಡದಿಂದ ಬೆಳಕು ಮಂಕಾಗಬಹುದು. ಸದ್ಗರುವಿನಿಂದ ಪಡೆದ ಜ್ಞಾನದ ಬೆಳಕನ್ನು ಮರೆಮಾಚಲು ಯಾವುದರಿಂದಲೂ ಸಾಧ್ಯವಿಲ್ಲ. ಭೌತಿಕ ಬೆಳಕಿಗಿಂತ ಜ್ಞಾನದ ಬೆಳಕು ಹೃದಯವನ್ನು ಪರಿಶುದ್ಧಗೊಳಿಸಿ ಮುಕ್ತಿಯೆಡೆಗೆ ಸಾಗಲು ನೆರವಾಗುತ್ತದೆ.ಕಲ್ಯಾಣದಲ್ಲಿ ಬಾಚರಸರೆಂಬ ಮಹಾಶರಣರಿದ್ದರು, ಮಹಾ ಶಿವಭಕ್ತರಾಗಿದ್ದರು. ಜಗತ್ತಿನಲ್ಲಿ ಶಿವನಲ್ಲದೆ ಬೇರೆ ದೈವವಿಲ್ಲ ಎಂದು ನಂಬಿ ಶಿವನ ಧ್ಯಾನದಲ್ಲಿ ಜೀವನ ಕಳೆಯುತ್ತಿದ್ದರು. ಅವರಿಗೆ ಶರಣರನ್ನು ಕಂಡರೆ ಬಹಳ ಪ್ರೀತಿ, ಬಸವಣ್ಣನೆಂದರೆ ಪ್ರಾಣ. ಅವರಲ್ಲಿ ನಂದೀಶ್ವರನ ತಿಳುವಳಿಕೆ, ಭೃಂಗೀಶ್ವರನ ಲಿಂಗನಿಷ್ಠೆ, ಗೌತಮ ಮುನಿಯ ತರ್ಕಶಾಸ್ತ್ರದ ಪ್ರಾವೀಣ್ಯತೆ ಇತ್ತು. ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಉಗ್ರಾಣದ ಧಾನ್ಯ ಅಳೆಯುವ ಕಾಯಕ ಮಾಡುತ್ತಿದ್ದರು. ಪ್ರತಿ ವರ್ಷ ಮಹಾಶಿವರಾತ್ರಿ ವೇಳೆ ಸೌರಾಷ್ಟ್ರಕ್ಕೆ ಹೋಗಿ ಜಾಗರಣೆ ಇದ್ದು, ಶಿವಪೂಜೆ ಮಾಡಿ ಬರುವುದು ಅವರ ವಾಡಿಕೆಯಾಗಿತ್ತು. ಒಂದು ಬಾರಿ ಬಿಜ್ಜಳನು ಶಿವರಾತ್ರಿಯ ಸಮಯದಲ್ಲಿ ತಾನು ನಿರ್ಮಿಸಿರುವ ವಿಷ್ಣು ದೇವಾಲಯದ ಉದ್ಘಾಟನೆಗೆ ಸಂಬಂಧಿಸಿದ ಸಭೆ ಕರೆದು ಬಾಚರಸರಿಗೆ ಈ ಬಾರಿ ಸೌರಾಷ್ಟ್ರಕ್ಕೆ ಹೋಗದಂತೆ ತಿಳಿಸಿದರು.
ಆಗ ಬಾಚರಸರಯ್ಯ ಅವರು ಕಾಯಕ ಮಾಡುತ್ತಿದ್ದ ಕಣಜದಲ್ಲಿ ಲಿಂಗ ಒಡೆದು ಮೂಡುತ್ತದೆ. ಅದರ ಪ್ರಖರತೆಯನ್ನು ನೋಡಿ ಬಿಜ್ಜಳ ಬೆರಗಾಗುತ್ತಾನೆ. ಭಕ್ತನ ಶಕ್ತಿಯನ್ನು ಕಂಡು ಬಾಚರಸರಯ್ಯ ಅವರಿಗೆ ನಮಿಸುವುದಾಗಿ ಅವರು ಹೇಳಿದರು.
ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಕ್ತಾಧಿಗಳು ಮತ್ತು ಆಧ್ಯಾತ್ಮಿಕ ಜಿಜ್ಞಾಸುಗಳು ಪಾಲ್ಗೊಂಡಿದ್ದರು.