ಗನ್‌ ತೋರಿಸಿ ಚಿನ್ನದಂಗಡಿ ದರೋಡೆ:30 ಗ್ರಾಂ ಚಿನ್ನ, 50 ಸಾವಿರ ದೋಚಿದರು

KannadaprabhaNewsNetwork |  
Published : Jan 28, 2026, 02:30 AM IST
robbery 2 | Kannada Prabha

ಸಾರಾಂಶ

ಕಿವಿಯೋಲೆ ಕೇಳಿಕೊಂಡು ಬೈಕಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಜ್ಯುವೆಲ್ಲರಿ ಅಂಗಡಿಯದ್ದ ಮಾಲೀಕರ ಮಕ್ಕಳಿಗೆ ಗನ್‌ ತೋರಿಸಿ ಸುಮಾರು 30 ಗ್ರಾಂ ಚಿನ್ನಾಭರಣ ಮತ್ತು 50 ಸಾವಿರ ರು. ನಗದು ಎತ್ತಿಕೊಂಡು ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಿವಿಯೋಲೆ ಕೇಳಿಕೊಂಡು ಬೈಕಿನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಜ್ಯುವೆಲ್ಲರಿ ಅಂಗಡಿಯದ್ದ ಮಾಲೀಕರ ಮಕ್ಕಳಿಗೆ ಗನ್‌ ತೋರಿಸಿ ಸುಮಾರು 30 ಗ್ರಾಂ ಚಿನ್ನಾಭರಣ ಮತ್ತು 50 ಸಾವಿರ ರು. ನಗದು ಎತ್ತಿಕೊಂಡು ಪರಾರಿಯಾಗಿರುವ ಘಟನೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ದಾಸನಪುರ ಬಸ್‌ ನಿಲ್ದಾಣದ ಬಳಿ ರಾಮ್‌ದೇವ್‌ ಹೆಸರಿನ ಜ್ಯುವೆಲ್ಲರಿ ಶಾಪ್‌ನಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್‌ ನಾಗೇಶ್‌ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಜ್ಯುವೆಲ್ಲರಿ ಶಾಪ್‌ನ ಮಾಲೀಕ ಮಾಣಿಕ್‌ ರಾಮ್‌ ಎಂಬುವರು ನೀಡಿದ ದೂರಿನನ್ವಯ ರಾಬರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಮವಾರ ಸಂಜೆ 5.30 ರ ಸುಮಾರಿಗೆ ದಾಸನಪುರ ಬಸ್‌ ನಿಲ್ದಾಣದ ಬಳಿ ರಾಮ್‌ದೇವ್‌ ಜ್ಯುವೆಲ್ಲರಿ ಶಾಪ್‌ಗೆ ಬೈಕಿನಲ್ಲಿ ಬಂದಿದ್ದ ಮೂವರು ಆರೋಪಿಗಳು ಅಂಗಡಿಯಲ್ಲಿದ್ದ ಇಬ್ಬರು ಬಾಲಕ ಪೈಕಿ ಒಬ್ಬನ ಬಳಿ ಕಿವಿಯೊಲೆ ತೋರಿಸುವಂತೆ ಕೇಳಿದ್ದಾರೆ. ಈ ರೀತಿ ಡಿಸೈನ್ ನಮ್ಮಲ್ಲಿ ಇಲ್ಲ ಎಂದು ಬಾಲಕ ಹೇಳುತ್ತಿದಂತೆ ಗನ್ ತೋರಿಸಿ ಬೆದರಿಸಿ 30 ಗ್ರಾಂ ಚಿನ್ನಾಭರಣ ಮತ್ತು 50 ಸಾವಿರ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ. ಒಬ್ಬ ಬಾಲಕನಿಗೆ ಕಿರುಚದಂತೆ ಮುಖ ಪರಚಿ ಗಾಯಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳು ಜ್ಯುವೆಲ್ಲರಿ ಶಾಪ್‌ನ ಮಾಲೀಕರ ಮಕ್ಕಳನ್ನು ಹೆದರಿಸಿ 30 ಗ್ರಾಂಗೂ ಹೆಚ್ಚು ಚಿನ್ನಾಭರಣ, 50 ಸಾವಿರ ನಗದು ದೋಚಿಕೊಂಡು ಪರಾರಿ ಆಗಿದ್ದಾರೆ. ಆರೋಪಿಗಳ ಸುಲಿವು ಸಿಕ್ಕಿದ್ದು ಆದಷ್ಟು ಬೇಗ ಅವರನ್ನು ಬಂಧಿಸಲಾಗುವುದು. ತನಿಖೆ ನಂತರ ಕೃತ್ಯಕ್ಕೆ ಬಳಸಿದ ಗನ್‌ ಅಸಲಿಯೋ ಅಥವಾ ನಕಲಿಯೋ ತಿಳಿದು ಬರಲಿದೆ.

-ಡಿ.ಎಲ್‌ ನಾಗೇಶ್‌, ವಾಯುವ್ಯ ವಿಭಾಗದ ಡಿಸಿಪಿಕಿವಿಯೋಲೆ ಕೇಳಿಕೊಂಡು ಬೈಕಿನಲ್ಲಿ ಮೂವರು ಬಂದಿದ್ದರು. ಈ ರೀತಿ ಡಿಸೈನ್ ನಮ್ಮಲ್ಲಿ ಇಲ್ಲ ಎನ್ನುತ್ತಿದಂತೆ ಗನ್ ತೋರಿಸಿ ಬೆದರಿಸಿದರು. ನಗದು ಚಿನ್ನಾಭರಣ ಓಡಿಹೋದರು. ಕಿರುಚದಂತೆ ನನ್ನ ಮುಖ ಪರಚಿ, ಬಾಯಿ ಮುಚ್ಚಿಸಿದರು. ನಂತರ ಬೈಕಿನಲ್ಲಿ ನೆಲಮಂಗಲದ ಕಡೆ ಓಡಿ ಹೋದರು.

-ಗೌತಮ್, ಜ್ಯುವೆಲ್ಲರಿ ಶಾಪ್‌ ಮಾಲೀಕನ ಮಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ