ಗುಡ್ಮಿಂಟನ್ ಪ್ರೀಮಿಯಂ ಲೀಗ್: ಸುಂಟಿಕೊಪ್ಪ ಸೂಪರ್ ಕಿಂಗ್ ಚಾಂಪಿಯನ್

KannadaprabhaNewsNetwork |  
Published : Jun 23, 2025, 11:48 PM IST
ಚತ್ರ : 22ಎಂಡಿಕೆ4 :ಸುಂಟಿಕೊಪ್ಪ ಸೂಪರ್ ಕಿಂಗ್ ಚಾಂಪಿಯನ್ ಪ್ರಶಸ್ತಿ ಗಳಿಸಿತು. ಚಿತ್ರ :22ಎಂಡಿಎ4 :ಸುಂಟಿಕೊಪ್ಪ ಸೂಪರ್ ಕಿಂಗ್ ಚಾಂಪಿಯನ್ ಪ್ರಶಸ್ತಿ ಗಳಿಸಿತು.  | Kannada Prabha

ಸಾರಾಂಶ

ಮಡಿಕೇರಿಯ ಮುಂಜಾನೆ ಬ್ಯಾಡ್ಮಿಂಟನ್‌ ಆಟಗಾರರ ತಂಡ ಆಯೋಜಿಸಿದ್ದ ಗುಡ್ಮಿಂಟನ್‌ ಪ್ರೀಮಿಯಂ ಲೀಗ್‌ - 2025 ಟೂರ್ನಿಯಲ್ಲಿ ಸುಂಟಿಕೊಪ್ಪ ಸೂಪರ್‌ಕಿಂಗ್‌ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿಯ ಮುಂಜಾನೆ ಬ್ಯಾಡ್ಮಿಂಟನ್ ಆಟಗಾರರ ತಂಡ ಆಯೋಜಿಸಿದ್ದ ಗುಡ್ಮಿಂಟನ್ ಪ್ರೀಮಿಯಂ ಲೀಗ್-2025 ಟೂರ್ನಿಯಲ್ಲಿ ಸುಂಟಿಕೊಪ್ಪ ಸೂಪರ್ ಕಿಂಗ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಮಡಿಕೇರಿ ರಾಯಲ್ ಚಾಲೆಂಜ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಚೆಟ್ಟಿಮಾನಿ ಡೇರ್ ಡೆವಿಲ್ ತಂಡ ಮೂರನೇ ಸ್ಥಾನ ಹಾಗೂ ಭಾಗಮಂಡಲ ನೈಟ್ ರೈಡರ್ಸ್ ತಂಡ ನಾಲ್ಕನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಶ್ರೇಷ್ಠ ಆಟಗಾರಾಗಿ ಅರುಣ್ ಕುಮಾರ್ ಪ್ರಶಸ್ತಿ ಪಡೆದುಕೊಂಡರು.ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳ ಒಟ್ಟು 24 ಆಟಗಾರರು ಸ್ಪರ್ಧಿಸಿದ್ದರು. ವಿನ್ನರ್ಸ್ ರೋಲಿಂಗ್ ಟ್ರೋಫಿಯನ್ನು ವೃಂದಾವನ ಕೂರ್ಗ್ ರೆಸಾರ್ಟ್ ಪ್ರಾಯೋಜಿಸಿತ್ತು.ಸಮಾರೋಪ ಸಮಾರಂಭ:

ಬಹುಮಾನ ವಿತರಣಾ ಸಮಾರಂಭದಲ್ಲಿ ಕೊಡವ ವೆಲ್ಫೇರ್ ಆ್ಯಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಬ್ಯಾಡ್ಮಿಂಟನ್ ಆಟದ ಮಹತ್ವವನ್ನು ಹಂಚಿಕೊಂಡರು.ಕ್ರೀಡೆ ದೈಹಿಕ ಆರೋಗ್ಯ, ಮಾನಸಿಕ ಶಾಂತಿ ಮತ್ತು ಸಾಮಾಜಿಕ ಸಂಬಂಧಗಳನ್ನು ಬೆಳೆಸುವಲ್ಲಿ ಸಹಾಯವಾಗುತ್ತದೆ ಎಂದು ಹೇಳಿದರು.ವೈದ್ಯ ಡಾ.ಕೋಲೆಯಂಡ ಮೊಹನ್ ಅಪ್ಪಾಜಿ ಮಾತನಾಡಿ, ಇತರ ಆಟಗಾರರನ್ನು ಆಹ್ವಾನಿಸಿ ಮತ್ತಷ್ಟು ಪಂದ್ಯಾವಳಿಗಳನ್ನು ಆಯೋಜಿಸುವಂತಾಗಬೇಕು ಎಂದರು.ಮತ್ತೊಬ್ಬ ವೈದ್ಯ ಡಾ.ಚೌರೀರ ಶ್ಯಾಮ್ ಅಪ್ಪಣ್ಣ ಮಾತನಾಡಿ, ಕ್ರೀಡೆಯ ಅವಶ್ಯಕತೆ ಮತ್ತು ಆಟದ ವೇಳೆ ಪಾಲಿಸಬೇಕಾದ ಕ್ರಮದ ಕುರಿತು ಮಾಹಿತಿ ನೀಡಿದರು.ಪ್ರಮುಖರಾದ ಗುಡ್ಡಂಡ್ರ ಪವನ್ ಹಾಗೂ ಶಮ್ಮಿ ಸುಬ್ಬಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೆದಂಬಾಡಿ ಕವಿ ಪ್ರಸಾದ್ ನಿರ್ವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ