ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಭವನದಲ್ಲಿ ದಲಿತ ಸಾಹಿತ್ಯ ವೇದಿಕೆ, ಕ್ರಿಯಾ ಮಾಧ್ಯಮ ಮತ್ತು ಬಹಿಷ್ಕೃತ ಹಿತಕಾರಿಣಿ ಸಭಾ ಆಶ್ರಯ ದಲ್ಲಿ ಆಯೋಜಿಸಿದ್ದ ಡಾ. ಸದಾಶಿವ ಮರ್ಜಿ ಅವರ ಬರಿದೆ ಬಾರಿಸದಿರು ಲಲಿತ ಪ್ರಬಂಧಗಳ ಸಂಕಲನ ಲೋಕಾರ್ಪಣೆ ವೇಳೆ ಕೃತಿ ಪರಿಚಯಿಸಿದರು.
ಈ ಕೃತಿಯ ಎಲ್ಲ ಲಲಿತ ಪ್ರಬಂಧಗಳಲ್ಲಿ ಸಾಂಸ್ಕೃತಿಕ ಹಾಗೂ ದಲಿತ ಸಮುದಾಯದ ಅಸ್ಮಿತೆಯ ಹುಡುಕಾಟವಿದೆ. ಸಮಾಜದಲ್ಲಿಯ ಅಮಾನವೀಯತೆ, ಅಸಮಾನತೆಯಂತಹ ತಾರತಮ್ಯಗಳಿಂದ ಬಾಧಿತವಾದ ಶೋಷಿತ ಸಮುದಾಯಗಳು ಅನುಭವಿಸುವ ಜಾತಿ, ಕೀಳರಿಮೆಯ ನೋವು ಮತ್ತು ಸಂಕಟಗಳ ಸಹಜವಾಗಿ ಇಲ್ಲಿ ವ್ಯಕ್ತಗೊಂಡಿವೆ. ಹೀಗೆ ಬಾಧಿತವಾದ ಸಮುದಾಯದ ಹಿನ್ನೆಲೆಯಿರುವ ಡಾ. ಮರ್ಜಿಯವರ ಲಲಿತ ಪ್ರಬಂಧಗಳಲ್ಲಿ ದಲಿತ ಲೋಕದ ಒಳಿತು-ಕೆಡುಕು, ಅಸಡ್ಡೆ-ಅನಾಧಾರಗಳು ಸಹಜ ನಿರೂಪಣೆಯಿಂದ ಸಶಕ್ತವಾಗಿವೆ ಎಂದು ಅವರು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಬಸವರಾಜ ಕಟ್ಟಿಮನಿ ಟ್ರಸ್ಟ್ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ, ತಮ್ಮ ಶಿಷ್ಯ ಮರ್ಜಿಯವರ ಸಾಹಿತ್ತಿಕ ಪಯಣಕ್ಕೆ ಸಂತಸ ವ್ಯಕ್ತಪಡಿಸಿದರು. ಕೃತಿ ಲೋಕಾರ್ಪಣೆಗೊಳಿಸಿದ ಪ್ರೊ. ಮಹೇಶ ತಿಪ್ಪಶೆಟ್ಟಿ ತಮ್ಮ ಮತ್ತು ಡಾ. ಮರ್ಜಿಯವರ ಗುರು-ಶಿಷ್ಯ ಸಂಬಂಧವನ್ನು ಮೆಲುಕು ಹಾಕಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಚೆನ್ನಪ್ಪ ಅಂಗಡಿ, ಸಾಂದರ್ಭಿಕವಾಗಿ ಲಘು ಧಾಟಿಯ ಲಲಿತ ಪ್ರಬಂಧಗಳು ಗಂಭೀರ ವಿಷಯವನ್ನು ಲಾಲಿತ್ಯದ ಧಾಟಿಯಲ್ಲಿ ವಿಷಯ ಪ್ರಸ್ತುತಪಡಿಸುವಿಕೆಯ ಕಲೆ ಲೇಖಕರಿಗೆ ಕರಗತವಾಗಿದೆ ಎಂದರು.