ಕನ್ನಡಪ್ರಭ ವಾರ್ತೆ ಚಳ್ಳಕೆರೆನಗರದ ನರಹರಿ ನಗರದಲ್ಲಿ ನರಹರಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸುಮಾರು ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ 5,000 ಲೀಟರ್ ಸಾಮರ್ಥ್ಯದ ನೂತನ ಬಿ.ಎಂ.ಸಿ ಕಟ್ಟಡ ಹಾಗೂ ಯಂತ್ರೋಪಕರಣಗಳನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಚೇತನ್ ಎಸ್. ನಾಡಿಗರ ಉಪಾಧ್ಯಕ್ಷರು ಶಿಮುಲ್ ಶಿವಮೊಗ್ಗ ಹಾಗೂ ಡಾ.ಎಸ್ಟಿ.ಸುರೇಶ್ ಕರ್ನಾಟಕ ಮಹಾಮಂಡಳಿ, ಶಿಮುಲ್ ವ್ಯವಸ್ಥಾಪಕ ನಿರ್ದೇಶಕರು ಡಾ. ಬಿ.ಆರ್.ಮಂಜೇಶ್ ಹಾಗೂ ಡಾ. ಎಚ್.ಶರತ್, ಮಾರ್ಕೆಟಿಂಗ್ ವ್ಯವಸ್ಥಾಪಕರಾದ ಬಿ.ಎಮ್. ಹನುಮಂತಪ್ಪ ಹಾಗೂ ಸಿಬ್ಬಂದಿ ವರ್ಗದವರು, ಮಾರ್ಗ ವಿಸ್ತಾರಣಾಧಿಕಾರಿಗಳು ಒಕ್ಕೂಟದ ಅಧಿಕಾರಿ ವರ್ಗದವರಿದ್ದರು ಇದೇ ಸಂದರ್ಭದಲ್ಲಿ ಬಿ.ಜಿ.ಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಬಿಲ್ಡಿಂಗ್ ಅನುದಾನ 2,25,000 ರು. ಚೆಕ್ಕನ್ನು ಕರ್ನಾಟಕ ಮಹಾಮಂಡಳಿ ವತಿಯಿಂದ ರಘುಮೂರ್ತಿಯವರು ಹಾಗೂ ಜಿಲ್ಲಾ ನಿರ್ದೇಶಕರು ಸಂಘದ ಅಧ್ಯಕ್ಷರಿಗೆ ವಿತರಿಸಿದರು. ಮೂರ್ತಿ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ. ವೆಂಕಟೇಶ್ ಮೂರ್ತಿ ಹಾಗೂ ಲಕ್ಷ್ಮಿಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಬಿ ಸಿ.ಸತೀಶ್ ಕುಮಾರ್ ಹಾಗೂ ಪಶು ವೈದ್ಯರುಗಳಾದ ಡಾ. ತಿಪ್ಪೇಸ್ವಾಮಿ, ಡಾ.ಶ್ರೀನಿವಾಸ್ ಬಾಬು, ಡಾ. ನರೇಶ್, ಡಾ.ಸತ್ಯನಾರಾಯಣ ಚೌದರಿ, ಡಾ. ಪ್ರದೀಪ್, ಡಾ. ನರೇಶ್ ಹಾಗೂ ಜಿಲ್ಲಾ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ನರಹರಿನಗರ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.