ಕನ್ನಡಪ್ರಭ ವಾರ್ತೆ, ಚಾಮರಾಜನಗರ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜನಪರ ಸಾಹಿತ್ಯ ಪರಿಷತ್ತು, ಕರ್ನಾಟಕ ರಾಜ್ಯ ಕಾಲೇಜು ಶಿಕ್ಷಣ ಇಲಾಖೆ, ಚಾಮರಾಜನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಬೆಂಗಳೂರು ಇನ್ಸೈಟ್ ಐಎಸ್ ತರಬೇತಿ ಕೇಂದ್ರ , ಮಂಡ್ಯದಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್ ಮಂಡ್ಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಮತ್ತು ಸ್ಪರ್ಧಾ ಪರೀಕ್ಷೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗುರಿ ಇಲ್ಲದ ವ್ಯಕ್ತಿ ಶವಕ್ಕೆ ಸಮನಾಗಿರುತ್ತಾನೆ, ಪ್ರತಿಯೊಬ್ಬರು ದೊಡ್ಡ ಗುರಿ ಇಟ್ಟುಕೊಂಡು, ಪಠ್ಯದ ಜೊತೆಗೆ ಪಠ್ಯತರ ವಿಷಯ ಬಗ್ಗೆ ಗಮನಹರಿಸಬೇಕು, ಏನಾಗಬೇಕು ಅಂದುಕೊಂಡಿರುತ್ತೇವೆ ಅದನ್ನು ನಾವು ಮನಸ್ಸಿನಲ್ಲಿ ಚಿತ್ರಿಕರಿಸಿಕೊಳ್ಳಬೇಕು ಆಗ ಏನುಮಾಡಬೇಕು ಎಂದು ಕಲ್ಪನೆ ಬರಲಿದೆ ಎಂದರು.ಮನುಷ್ಯನಲ್ಲಿ ಸೂಪ್ತ ಮನಸ್ಸು ಮತ್ತು ಜಾಗೃತ ಮನಸ್ಸುಗಳಿದ್ದು, ಸೂಪ್ತ ಮನಸ್ಸನ್ನು ಜಾಗೃತ ಮನಸ್ಸು ಜಾಗೃತಗೊಳಿಸಿ ಗುರಿ ತಲುಪಿಸುತ್ತದೆ. ಗುರಿ ತಲುಪುವುದರೊಂದಿಗೆ ನಾವು ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಸಕರಾತ್ಮಕ ಚಿಂತನೆಯನ್ನು ಮಾಡಬೇಕು ಎಂದರು.
ಶಿಕ್ಷಣವು ಸಮಾಜವನ್ನು ಸಮಾನತೆ ಸ್ಥಿತಿಗೆ ತಲುಪಿಸುತ್ತದೆ. ಶಿಕ್ಷಣ ಕಲಿತವರು ಮಾನವೀಯ ಮೌಲ್ಯಗಳ ವಿಚಾರಕ್ಕೂ ಮಹತ್ವವನ್ನು ನೀಡಬೇಕು, ಶಿಕ್ಷಕರಿಗೆ ಗೌರವ ನೀಡಬೇಕು ಎಂದರು.
ಬೆಂಗಳೂರಿನ ಇನ್ಸೈಟ್ ಐಎಎಸ್ ತರಬೇತಿ ಸಂಸ್ಧೆಯ ಸಂಪನ್ಮೂಲ ವ್ಯಕ್ತಿ ಶಮಂತ್ಕುಮಾರ್ ಮಾತನಾಡಿ,
ಬೆಂಗಳೂರಿನ ಇನ್ಸೈಟ್ ಐಎಎಸ್ ತರಬೇತಿ ಸಂಸ್ಧೆಯ ಸಂಪನ್ಮೂಲ ವ್ಯಕ್ತಿ ಪ್ರದೀಪ್ ಮಾತನಾಡಿ, ವಿದ್ಯಾರ್ಥಿಗಳು ದೊಡ್ಡ ದೊಡ್ಡ ಕನಸು ಕಾಣುವ ಮೂಲಕ ಸಿಕ್ಕ ಸಮಯವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡರೆ ಹಾಕಿಕೊಂಡ ಗುರಿ ಮುಟ್ಟಲು ಸಾಧ್ಯ ಎಂದು ತಿಳಿಸಿದರು.
ಹಿರಿಯ ಪತ್ರಕರ್ತರು ನಮ್ಮ ಕಾಲೇಜಿಗೆ ಆಗಮಿಸಿ ಸಾಕಷ್ಟು ವಿಚಾರವನ್ನು ತಿಳಿಸಿಕೊಟ್ಟಿದ್ದಾರೆ. ಇಂತಹ ಅವಕಾಶವನ್ನುಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು