- ರೈತ ಸಂಘ-ಹಸಿರು ಸೇನೆ ಅಸಮಾಧಾನ: ತಹಸೀಲ್ದಾರ್ಗೆ ಮನವಿ - - - ಚನ್ನಗಿರಿ: ತಾಲೂಕಿನಲ್ಲಿ ಅರಣ್ಯ ಮತ್ತು ಸರ್ಕಾರಿ ಭೂ ಪ್ರದೇಶವನ್ನು ಲೀಜ್ ಆಧಾರದಲ್ಲಿ ಖಾಸಗಿಯವರಿಗೆ ನೀಡುವ ಹುನ್ನಾರ ನಡೆಯುತ್ತಿದೆ. ಹಾಗೇನಾದರೂ ಲೀಜ್ಗೆ ನೀಡಿದರೆ ತಾಲೂಕು ರೈತ ಸಂಘಟನೆಗಳಿಂದ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ್ ಬಣ ಎಚ್ಚರಿಸಿದೆ. ಸಂಘಟನೆ ಮುಖಂಡ ಎಸ್.ಆರ್.ರವಿಕುಮಾರ್ ಮತ್ತು ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ತಹಸೀಲ್ದಾರರಿಗೆ ಈ ಸಂಬಂಧ ಮನವಿಯನ್ನೂ ಸಲ್ಲಿಸಿದರು.
ಸರ್ಕಾರ ಈ ಸಂಬಂಧ ಯಾವುದೇ ಒತ್ತಡಗಳಿಗೆ ಮಣಿಯದೇ ಬಡರೈತರನ್ನು ಒಕ್ಕಲೆಬ್ಬಿಸಬಾರದು. ಯಾವುದೇ ಇಲಾಖೆಗಳಿಗೂ ಸರ್ಕಾರಿ ಭೂಮಿಯನ್ನು ಲೀಜ್ ನೀಡಬಾರದು. ಈಗಾಗಲೇ ಬಸವಾಪಟ್ಟಣ ಹೋಬಳಿಯ ಮೋಹಿಹುದ್ದಿನ್ ಪುರ ಗ್ರಾಮದ ಸರ್ವೆ ನಂಬರ್: 74, 28, ರಾಮಸಾಗರದ 10 ಮತ್ತು 6 ಸರ್ವೆ ನಂಬರ್, ಕಂಚುಗಾರ್ತಿಕಟ್ಟಿ 17, 18, ಶೃಂಗಾರಬಾಗ್ 18 ಈ ಸರ್ವೆ ನಂಬರ್ಗಳಲ್ಲಿ ರೈತರಿಗೆ ಗೊತ್ತಿಲ್ಲದಂತೆ ಲೀಜ್ ಪ್ರಕ್ರಿಯೆ ನಡೆಯುತ್ತಿದೆ. ಈ ಕ್ರಮವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ತಹಸೀಲ್ದಾರರಿಗೆ ಒತ್ತಾಯಿಸಿದರು.
- - - -25ಕೆಸಿಎನ್ಜಿ1:ಸರ್ಕಾರಿ ಭೂಮಿ, ಅರಣ್ಯ ಪ್ರದೇಶ ಖಾಸಗಿಯವರಿಗೆ ಲೀಜ್ ಆಧಾರದಲ್ಲಿ ನೀಡದಂತೆ ಒತ್ತಾಯಿಸಿ ರೈತ ಸಂಘದ ಮುಖಂಡರು ಚನ್ನಗಿರಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.