ಬಡ ಕುಟುಂಬಕ್ಕೆ ಕಣ್ಣಾದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಹಣ

KannadaprabhaNewsNetwork |  
Published : Sep 03, 2024, 01:37 AM ISTUpdated : Sep 03, 2024, 12:53 PM IST
ಕಕಕಕಕ | Kannada Prabha

ಸಾರಾಂಶ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಬೆಳಗಾವಿಯ ಬಡ ಮಹಿಳೆಯೊಬ್ಬರು ಪತಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಯೋಜನೆ ವೃದ್ಧೆಯ ಪತಿ ಬಾಳಿಗೆ ಬೆಳಕು ತಂದಿದೆ.

  ಬೆಳಗಾವಿ :  ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮೀ ಯೋಜನೆಯ ಹಣದಿಂದ ಬೆಳಗಾವಿಯ ಬಡ ಮಹಿಳೆಯೊಬ್ಬರು ಪತಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದು, ಯೋಜನೆ ವೃದ್ಧೆಯ ಪತಿ ಬಾಳಿಗೆ ಬೆಳಕು ತಂದಿದೆ.

ನಗರದ ಅನಗೋಳದ ನಿವಾಸಿ ಚಂದ್ರಶೇಖರ ಬಡಿಗೇರ (61) ನೇತ್ರ ಶಸ್ತ್ರಚಿಕಿತ್ಸೆಗೆ ಒಳಗಾದವರು. ಬಡಕುಟುಂಬವಾಗಿದ್ದರಿಂದ ಶಸ್ತ್ರಚಿಕಿತ್ಸೆ ಮುಂದೂಡತ್ತಾ ಬಂದಿದ್ದರು. ಆದರೆ, ಮನೆ ಒಡತಿಗೆ ಪ್ರತಿ ತಿಂಗಳು ₹2000 ನೀಡುವ ರಾಜ್ಯ ಸರ್ಕಾರದ ಭಾಗ್ಯಲಕ್ಷ್ಮೀ ಯೋಜನೆಯಿಂದ 9 ತಿಂಗಳ ಹಣವನ್ನು ಕೂಡಿಟ್ಟ ಪತ್ನಿ ಅನಿತಾ ಯೋಜನೆಯಿಂದ ಬಂದ ₹18 ಸಾವಿರ ಮತ್ತು ತನ್ನ ಬಳಿಯಿದ್ದ ₹10 ಸಾವಿರ ಸೇರಿಸಿ ಪತಿಯ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ. ಅನಿತಾ ಅವರು ಭಾಗ್ಯಲಕ್ಷ್ಮೀ ಯೋಜನೆ ತನಗೆ ಸಹಕಾರಿ ಆದ ಬಗ್ಗೆ ವಿಡಿಯೋ ಮಾಡಿ ಸಿಎಂ ಸಿದ್ದರಾಮಯ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರಗೆ ಧನ್ಯವಾದ ತಿಳಿಸಿದ್ದು, ಸಾಮಾಜಿಕ ತಾಣದಲ್ಲಿ ಈಗ ವಿಡಿಯೋ ವೈರಲ್‌ ಆಗಿದೆ.

ಸವಾಲಾಗಿದ್ದ ನೇತ್ರಚಿಕಿತ್ಸೆ:

ದೃಷ್ಟಿದೋಷದಿಂದ ಬಳಲುತ್ತಿದ್ದ ಪತಿ ಚಂದ್ರಶೇಖರ ಅವರನ್ನು ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಅದು ಯಶಸ್ವಿಯಾಗಿರಲಿಲ್ಲ. ಸಕ್ಕರೆ ಕಾಯಿಲೆಯಿಂದಲೂ ಬಳಲುತ್ತಿದ್ದರು. ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವುದು ಸವಾಲಾಗಿತ್ತು. ಬೆಳಗಾವಿಯ ನಂದಾದೀಪ ನೇತ್ರಾಲಯದಲ್ಲಿ ಜೂ.13 ರಂದು ಮಾಡಲಾದ ಕಣ್ಣಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಇದರಿಂದಾಗಿ ಕಣ್ಣುಗಳು ಸ್ಪಷ್ಟವಾಗಿ ಕಾಣುತ್ತಿವೆ ಎಂದು ಅನಿತಾ ಬಡಿಗೇರ ಸಂತಸ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು