-ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಅವಿಸ್ಮರಣೀಯ ಸೇವೆ ಪರಿಗಣಿಸಿ ಪುರಸ್ಕಾರ
ಕನ್ನಡಪ್ರಭ ವಾರ್ತೆ ಹರಿಹರ80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ, ಶ್ರೀಕೃಷ್ಣ ಜನ್ಮಾಷ್ಠಮಿ ಹಾಗೂ ಶಿಕ್ಷಕರ ದಿನಾಚರಣೆ ಪ್ರಯುಕ್ತ ವಂದೇಮಾತರಂ ಸಾಂಸ್ಕೃತಿಕ ವೇದಿಕೆಯಿಂದ, ಬೆಂಗಳೂರು ನಗರದ ಲಲಿತಕಲಾ ಆಡಿಟೋರಿಯಂನಲ್ಲಿ, ನಾಡಿನ ಸಾಧಕರಿಗೆ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಸಂಗೀತ ಕ್ಷೇತ್ರದಲ್ಲಿ ಸಲ್ಲಿಸಿದ ಅವಿಸ್ಮರಣೀಯ ಸೇವೆ ಪರಿಗಣಿಸಿ ಹರಿಹರ ನಗರದ ನಿವಾಸಿ, ಗಾಯಕ ಅಣ್ಣಪ್ಪ ಅಜ್ಜೇರ ಅವರಿಗೆ ಭಕ್ತ ಶ್ರೇಷ್ಠ ಕನಕಶ್ರೀ ಪ್ರಶಸ್ತಿ ಹಾಗೂ ಸಮಾಜ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಜನನಿ ಜನ್ಮದಾತ ಸಾಂಸ್ಕೃತಿಕ ಕಲಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಗಾಯಕ, ಅಣ್ಣಪ್ಪ ಅಜ್ಜೇರ ಅವರು ಕಳೆದ 22 ವರ್ಷಗಳಿಂದ ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿಯ ಉಳಿವಿಗಾಗಿ ತಮ್ಮ ಜೀವಮಾನ ಸಾಧನೆ ಮಾಡಿದ್ದಾರೆ.ಜನಪದ ಹಾಡು, ಭಜನೆ, ಸುಗಮಸಂಗೀತ, ಹಾಗೂ ಜನ ಜಾಗೃತಿ ಬೀದಿ ನಾಟಕ, ಕಲೆಗಳ ಮೂಲಕ ಸಮಾಜದ ಜನ ಮನದಲ್ಲಿ ಉಳಿಯುವ ಕಲೆಯನ್ನು ಪ್ರದರ್ಶನದೊಂದಿಗೆ ಸಲ್ಲಿಸಿದ ಸೇವೆಗೆ, ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ದಾರಿ ದೀಪ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷೆ ಸುಜಾತ ಮಾತನಾಡಿ, ಕಲೆಯನ್ನು ಉಳಿಸಿ ಬೆಳೆಸುವ ಕಲಾವಿದ ಎಂದಿಗೂ ಬಡವನೇ ಹೊರತು ಶ್ರೀಮಂತನಲ್ಲ, ಕಲೆ ಕಲಾವಿದನಿಂದಲ್ಲ ಕಲೆಯಿಂದ ಕಲಾವಿದನೆಂದು, ತಮ್ಮ ಕಲೆಯ ಮೂಲಕ ಜನಮಾನಸದಲ್ಲಿ ಉಳಿದ ಕಲಾವಿದನಿಗೆ ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದರು.
ಪೋಟೊ