ಕನ್ನಡಪ್ರಭ ವಾರ್ತೆ ಸಿದ್ದಾಪುರ
ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದಲ್ಲಿ ಅ.ಭಾ. ವೀರಶೈವ ಮಹಾಸಭಾದ ತಾಲೂಕು ಘಟಕ ಹಾಗೂ ಸ್ಥಳೀಯ ವೀರಶೈವ ಕ್ಷೇಮಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಜರುಗಿದ ಶ್ರೀ ಬಸವೇಶ್ವರ ಜಯಂತಿ ಉದ್ಘಾಟಿಸಿ ಮಾತನಾಡಿದರು.
ನಿಜ ಜೀವನದಲ್ಲಿ ಕಂಡದ್ದರಲ್ಲಿ ದೇವರನ್ನು ಕಂಡವರು ಬಸವಣ್ಣ. ಸಮಾಜದ ಕೆಳಸ್ತರದಲ್ಲಿದ್ದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಅವರು ಸಮಾಜದ ಕಟ್ಟುಪಾಡುಗಳ ವಿರುದ್ಧ ಹೋರಾಡಿದವರು. 8 ಶತಮಾನಗಳ ಹಿಂದೆಯೇ ಸಂವಿಧಾನದ ರೀತಿಯಲ್ಲಿ ಸಾಮಾಜಿಕ ಅಭಿವೃದ್ಧಿಗೆ ವಿಚಾರಗಳನ್ನು ಅವರು ರೂಪಿಸಿದ್ದರು ಎಂದರು.ನಮ್ಮದು ಸನಾತನ ಧರ್ಮ. ಬಹುತೇಕ ಧರ್ಮಗಳು ಉಗಮವಾದದ್ದು ಹಿಂದೂ ಧರ್ಮದ ಮೂಲಕ. ಜಗತ್ತಿನ ಬಹುತೇಕ ಎಲ್ಲ ಧರ್ಮಗಳು ಇರುವ ಭಾರತ ಸಂಸ್ಕೃತಿಯ ವಿಶಾಲ ದೃಷ್ಟಿಯಿಂದ ಜಗತ್ತಿಗೆ ಕೊಟ್ಟ ಕೊಡುಗೆ ದೊಡ್ಡದು. ಆದರೆ ನಮ್ಮ ಸನಾತನದಲ್ಲಿ ಒಗ್ಗಟ್ಟಿಲ್ಲ. ನಮ್ಮ ಧರ್ಮ ಬೆಳೆಯಲು ಸೌಹಾರ್ದತೆ ಅಗತ್ಯ ಎಂದರು.
ಪಿ.ಎಸ್.ಐ. ನಾಗಪ್ಪ, ಪಪಂ ಮುಖ್ಯಾಧಿಕಾರಿ ಮಹ್ಮದ್ ಯಾಕೂಬ್ ಶೇಖ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹಾರ್ಸಿಮನೆ, ಸಾಮಾಜಿಕ ಕಾರ್ಯಕರ್ತ ಗುರುರಾಜ ಶಾನಭಾಗ, ಅ.ಭಾ.ವೀ. ಮಹಾಸಭಾ ಜಿಲ್ಲಾ ನಿರ್ದೇಶಕ ವೇ. ಪರಮೇಶ್ವರಯ್ಯ ಕಾನಳ್ಳಿಮಠ ಮುಂತಾದವರು ಮಾತನಾಡಿದರು. ಅಕ್ಕಮಹಾದೇವಿ ಸಂಘದ ಅಧ್ಯಕ್ಷೆ ಕಾವ್ಯಾ ಅಶೋಕ ಮೆರವಣಿಗೆ ಉಪಸ್ಥಿತರಿದ್ದರು.