ಮಳೆಯ ಅಬ್ಬರ: ಬೆಳ್ಳಾರೆ ಗೌರಿ ಹೊಳೆ ಸಮೀಪ ಪ್ರವಾಹ

KannadaprabhaNewsNetwork |  
Published : Jun 02, 2025, 12:30 AM IST
ಬೆಳ್ಳಾರೆ ಗೌರಿ ಹೊಳೆ ಸಮೀಪ ಪ್ರವಾಹ ಸ್ಥಿತಿ ನಿರ್ಮಾಣವಾಯಿತು. | Kannada Prabha

ಸಾರಾಂಶ

ಭಾರಿ ಮಳೆಯಿಂದ ನದಿ ನೀರು ಹೆಚ್ಚಳವಾಗಿ ನಾಗಪಟ್ಟಣ ಅಣೆಕಟ್ಟು ತುಂಬಿತ್ತು. ಆದ್ದರಿಂದ ಅಣೆಕಟ್ಟಿನ ೧೦ ಗೇಟುಗಳನ್ನು ತೆಗೆಯಲಾಗಿದೆ. ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಅರಂತೋಡು- ತೊಡಿಕಾನ ಸಂಪರ್ಕಿಸುವ ರಸ್ತೆಯ ಅಡ್ಯಡ್ಕ ಬಳಿ ಬರೆ ಕುಸಿದಿದ್ದು, ರಸ್ತೆ ಸಂಪರ್ಕ ಕಡಿತದ ಭೀತಿಯಲ್ಲಿದೆ.

ಐದು ಮನೆಯವರ ಸ್ಥಳಾಂತರ, ರಕ್ಷಣೆಗೆ ಧಾವಿಸಿದ ಅಗ್ನಿಶಾಮಕ ದಳ

ಕನ್ನಡಪ್ರಭ ವಾರ್ತೆ ಸುಳ್ಯ

ಶುಕ್ರವಾರ ಸಂಜೆಯಿಂದ ಸುರಿದ ಭಾರಿ ಮಳೆಗೆ ಬೆಳ್ಳಾರೆ - ಗೌರಿಹೊಳೆ - ಪಡ್ಪು ಭಾಗದ ತಗ್ಗು ಪ್ರದೇಶದಲ್ಲಿನ ೫ ಮನೆಗಳಿಗೆ ನೀರು ನುಗ್ಗಿ ಮನೆಯವರನ್ನು ಸ್ಥಳಾಂತರ ಮಾಡಲಾಯಿತು.ರಾತ್ರಿ ವಿಷಯ ತಿಳಿದ ತಹಸೀಲ್ದಾರ್ ಮಂಜುಳಾ, ಕಂದಾಯ ನಿರೀಕ್ಷ ಅವಿನ್ ರಂಗತ್ತಮಲೆಯವರ ನೇತೃತ್ವದಲ್ಲಿ ಪಿಡಿಒ, ವಿ.ಎ., ಅಗ್ನಿಶಾಮಕ ಸಹಿತ ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ತಗ್ಗು ಪ್ರದೇಶವಾದುದರಿಂದ ಭಾರಿ ಪ್ರಮಾಣದ ನೀರು ಬಂದಿತ್ತು.ಮೂರು ಮನೆಯವರು ನೀರು ಬರುವ ಮೊದಲೇ ಸ್ಥಳಾಂತಗೊಂಡಿದ್ದರು. ಎರಡು ಮನೆಯವರನ್ನು ಶಿಫ್ಟ್ ಮಾಡಲಾಯಿತು.

ಐವರ್ನಾಡು ಗ್ರಾಮದ ಬಾಂಜಿಕೋಡಿ ಎಂಬಲ್ಲಿ ಒಂದು ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ.

ಭಾರಿ ಮಳೆಯಿಂದ ನದಿ ನೀರು ಹೆಚ್ಚಳವಾಗಿ ನಾಗಪಟ್ಟಣ ಅಣೆಕಟ್ಟು ತುಂಬಿತ್ತು. ಆದ್ದರಿಂದ ಅಣೆಕಟ್ಟಿನ ೧೦ ಗೇಟುಗಳನ್ನು ತೆಗೆಯಲಾಗಿದೆ.

ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಅರಂತೋಡು- ತೊಡಿಕಾನ ಸಂಪರ್ಕಿಸುವ ರಸ್ತೆಯ ಅಡ್ಯಡ್ಕ ಬಳಿ ಬರೆ ಕುಸಿದಿದ್ದು, ರಸ್ತೆ ಸಂಪರ್ಕ ಕಡಿತದ ಭೀತಿಯಲ್ಲಿದೆ. ವೃದ್ಧೆಯನ್ನು ರಕ್ಷಿಸಿದ ಸ್ಥಳೀಯರು:

ಪೆರುವಾಜೆ ಗೌರಿಹೊಳೆ ಸಮೀಪ ನಾಗನಮಜಲು ಎಂಬಲ್ಲಿ ಮನೆಯೊಳಗೆ ಮಳೆ ನೀರು ನುಗ್ಗಿದ್ದು, ಮನೆಯೊಳಗಿದ್ದ ವೃದ್ಧೆಯೊಬ್ಬರನ್ನು ಸ್ಥಳೀಯರು ರಕ್ಷಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ನಾಗನಮಜಲು ಎಂಬಲ್ಲಿ ಮನೆಯಲ್ಲಿ ವೃದ್ಧ ಮಹಿಳೆಯೊಬ್ಬರೇ ವಾಸಿಸುತ್ತಿದ್ದು, ರಾತ್ರಿ ಸುರಿದ ವಿಪರೀತ ಮಳೆಗೆ ಮಳೆ ನೀರು ಮನೆಯೊಳಗೆ ನುಗ್ಗಿತ್ತು. ಈ ಮಾಹಿತಿ ತಿಳಿದ ಸ್ಥಳೀಯರು, ವೃದ್ಧೆಯನ್ನು ಬೇರೆ ಮನೆಗೆ ಸ್ಥಳಾಂತರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!