ವಿದ್ಯುತ್ ಲೈನ್ ಕಿತ್ತು ಹಾಕಿದ ರೈತನ ವಿರುದ್ಧ ಕ್ರಮಕ್ಕೆ ಮುಂದಾದ ಹೆಸ್ಕಾಂ

KannadaprabhaNewsNetwork |  
Published : Jan 07, 2024, 01:30 AM ISTUpdated : Jan 07, 2024, 05:00 PM IST
ಮುಂಡಗೋಡ: ವಿದ್ಯುತ್ ಇಲಾಖೆಯಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ವಿದ್ಯುತ್ ಲೈನ್ ತೆಗೆದು ಬೋರವೆಲ್ ಕೊರೆಸಿ ಇತರೇ ರೈತರಿಗೆ ತೊಂದರೆ ಮಾಡಿದ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿದ ಮುಂಡಗೋಡ ಹೆಸ್ಕಾಂ ಅಧಿಕಾರಿಗಳು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. | Kannada Prabha

ಸಾರಾಂಶ

ನಾಲ್ಕೈದು ದಿನಗಳ ಹಿಂದೆ ತಾಲೂಕಿನ ಇಂದೂರ (ಕೊಪ್ಪ) ಗ್ರಾಮದಲ್ಲಿ ಮಂಜುನಾಥ ಎಂಬ ರೈತರೊಬ್ಬರು ತಮ್ಮ ಗದ್ದೆಯಲ್ಲಿ ಬೋರ್‌ವೆಲ್ ಕೊರೆಸುವ ಸಂದರ್ಭದಲ್ಲಿ ವಿದ್ಯುತ್ ಇಲಾಖೆಗೆ ಯಾವುದೇ ರೀತಿ ಮಾಹಿತಿ ನೀಡದೆ ಗದ್ದೆಯಲ್ಲಿ ಅಡ್ಡಲಾಗಿದ್ದ ವಿದ್ಯುತ್ ಲೈನ್ ತೆಗೆದು ಹಾಕಿದ್ದಾರೆ.

ಮುಂಡಗೋಡ:

ವಿದ್ಯುತ್ ಇಲಾಖೆಯಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ವಿದ್ಯುತ್ ಲೈನ್ ತೆಗೆದು ಬೋರ್‌ವೆಲ್ ಕೊರೆಸಿ ಇತರೇ ರೈತರಿಗೆ ತೊಂದರೆ ಮಾಡಿದ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿದ ಮುಂಡಗೋಡ ಹೆಸ್ಕಾಂ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ನಾಲ್ಕೈದು ದಿನಗಳ ಹಿಂದೆ ತಾಲೂಕಿನ ಇಂದೂರ (ಕೊಪ್ಪ) ಗ್ರಾಮದಲ್ಲಿ ಮಂಜುನಾಥ ಎಂಬ ರೈತರೊಬ್ಬರು ತಮ್ಮ ಗದ್ದೆಯಲ್ಲಿ ಬೋರ್‌ವೆಲ್ ಕೊರೆಸುವ ಸಂದರ್ಭದಲ್ಲಿ ವಿದ್ಯುತ್ ಇಲಾಖೆಗೆ ಯಾವುದೇ ರೀತಿ ಮಾಹಿತಿ ನೀಡದೆ ಗದ್ದೆಯಲ್ಲಿ ಅಡ್ಡಲಾಗಿದ್ದ ವಿದ್ಯುತ್ ಲೈನ್ ತೆಗೆದು ಹಾಕಿದ್ದಾರೆ. 

ಇದರಿಂದ ಸುತ್ತಮುತ್ತಲಿನ ಇತರೆ ರೈತರ ಗದ್ದೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗದ್ದೆಗಳಿಗೆ ನೀರು ಹಾಯಿಸಲಾಗದೆ ತೀವ್ರ ತೊಂದರೆಯಾಗಿದೆ. ಈ ಬಗ್ಗೆ ಮಾಹಿತಿ ಪಡೆದುಕೊಂಡ ಹೆಸ್ಕಾಂ ಅಧಿಕಾರಿ ಮತ್ತು ಸಿಬ್ಬಂದಿ ಶನಿವಾರ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದು, ತೆಗೆದು ಹಾಕಲಾದ ವಿದ್ಯುತ್ ಲೈನ್ ಸರಿಪಡಿಸಿದ್ದಾರಲ್ಲದೇ, ತಪ್ಪಿತಸ್ಥ ರೈತನಿಂದ ದಂಡ ವಸೂಲಿ ಮಾಡಲು ಸಜ್ಜಾಗಿದ್ದಾರೆ.

ಇಲಾಖೆಗೆ ಮಾಹಿತಿ ನೀಡದೆ ವಿದ್ಯುತ್ ಲೈನ್ ಕಿತ್ತೆಸೆದು ಅನಧಿಕೃತವಾಗಿ ಬೋರ್‌ವೆಲ್ ಕೊರೆಸಿದ್ದಲ್ಲದೇ, ಇತರೆ ರೈತರಿಗೆ ತೊಂದರೆ ಮಾಡಿರುವ ರೈತ ಮಂಜುನಾಥಗೆ ನೋಟಿಸ್ ನೀಡಲಾಗುವುದು. ಯಾವುದೇ ಮುಲಾಜಿಲ್ಲದೇ ವಿದ್ಯುತ್ ಇಲಾಖೆಗೆ ಆದ ನಷ್ಟವನ್ನು ಅವರಿಂದ ಭರಿಸಿಕೊಳ್ಳಲಾಗುವುದು ಎಂದು ಹೆಸ್ಕಾಂ ಎಇಇ ವಿನಾಯಕ ಪೇಟಕರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!