ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಗುರುವಾರ ರಾಷ್ಟ್ರಿಯ ಹೆದ್ದಾರಿ ೭೫ರಿಂದ ಹಿಡಿದು ಪುತ್ತೂರು, ಮಂಗಳೂರು, ಬೆಳ್ತಂಗಡಿ ಕಡೆಗಳಿಗೆ ಹಾಗೂ ಸ್ಥಳೀಯ ಪೋಲಿಸ್ ಠಾಣೆ ಮುಂದೆಯು ವಾಹನದ ದಟ್ಟಣೆಯಿಂದ ರಸ್ತೆಯ ಉದ್ದಗಲಕ್ಕೂ ವಾಹನಗಳು ದಾರಿ ತೋಚದೇ ಉದ್ದಕ್ಕೂ ಕಾಯುವಂತಾಗಿತ್ತು. ಸ್ಥಳೀಯ ಉದ್ಯಮಿಗಳ ವ್ಯವಹಾರ ಕೇಂದ್ರವಾದ ಬ್ಯಾಂಕ್ ರಸ್ತೆ ಹಳೆ ಬಸ್ ನಿಲ್ದಾಣ ಮುಂತಾದ ಕಡೆ ಪಾದಚಾರಿಗಳು ಕೂಡಾ ರಸ್ತೆ ದಾಟುವಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿ ಉದ್ಯಮಿಗಳು ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ದೂರುಗಳ ಸರಮಾಲೆ ಕೇಳಿ ಬಂತು.
ಸ್ಥಳೀಯ ಪೊಲೀಸರು ಸಂಚಾರ ನಿಯಂತ್ರಣಕ್ಕೆ ನಿಯೋಜಿತರಾಗಿದ್ದರೂ, ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳು ಸುಲಲಿತವಾಗಿ ಸಂಚರಿಸಲಾಗದೆ ಉಂಟಾದ ಸಮಸ್ಯೆ ನಿವಾರಿಸಲು ಬಹಳಷ್ಟು ವಿಳಂಬವಾಯಿತು.ತರಾತುರಿಯ ಕಾಮಗಾರಿ:
ಪುತ್ತೂರು ಡಿವೈಎಸ್ಪಿ ಅವರಿಗೆ ಫೋನಾಯಿಸಿ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಲು ಮುಂದಾದರು. ಈ ವೇಳೆ ಪ್ರಶಾಂತ್ ಡಿಕೋಸ್ಟಾ ಅವರಿಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ, ಸಮರ್ಪಕವಾಗಿ ಉತ್ತರಿಸಿಲ್ಲ ಎಂದು ಪ್ರಶಾಂತ್ ಡಿಕೋಸ್ಟಾ ಮಾಧ್ಯಮ ಪ್ರತಿನಿಧಿಗಳಲ್ಲಿ ದೂರಿದ್ದಾರೆ.
ಈ ಬೆಳವಣಿಗೆಯನ್ನು ಖಂಡಿಸಿರುವ ಛೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್ , ಸಾರ್ವಜನಿಕರ ಹಿತಾಸಕ್ತಿಯನ್ನು ಮುಂದಿರಿಸಿ ಸಂಘದ ಅಧ್ಯಕ್ಷರು ಪೊಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕನಿಷ್ಠ ಸೌಜನ್ಯದಿಂದ ವರ್ತಿಸಬೇಕು. ಸಾರ್ವಜನಿಕರ ಹಿತಕ್ಕಾಗಿ ಸಂಪರ್ಕಿಸಿದ್ದಾಗ ಕೆಟ್ಟದಾಗಿ ವರ್ತಿಸಿದರೆ ಸಹಿಸಲು ಅಸಾಧ್ಯ. ಪ್ರಕರಣವನ್ನು ಸರ್ಕಾರದ ಗಮನಕ್ಕೆ ತರಲಾಗುವುದೆಂದು ತಿಳಿಸಿದ್ದಾರೆ.