ಕನ್ನಡಪ್ರಭ ವಾರ್ತೆ ಮಂಗಳೂರು
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಭಂಡಾರಿ, ಬೆಳ್ತಂಗಡಿ ಮೇಲಂತಬೆಟ್ಟುವಿನ ಗಣಿಗಾರಿಕೆ ಸ್ಥಳಕ್ಕೆ ಪೊಲೀಸರು ಹಾಗೂ ತಹಸೀಲ್ದಾರ್ ತೆರಳಿದಾಗ ಅಕ್ರಮವಾಗಿ ಬಳಕೆ ಮಾಡುತ್ತಿದ್ದ 8 ಡಿಟೊನೇಟರ್ಗಳು ಸಿಕ್ಕಿವೆ. ಈ ಕಾರಣಕ್ಕಾಗಿ ಶಶಿರಾಜ್ ಎಂಬಾತನನ್ನು ಬಂಧಿಸಲಾಗಿದೆ. ಇಂಥವನ ಪರವಾಗಿ ಹರೀಶ್ ಪೂಂಜ ಠಾಣೆಗೆ ಹೋಗಿ ಬೆದರಿಕೆ ಹಾಕಿರೋದು ಖಂಡನೀಯ ಎಂದರು.
ಹಿಂದೂ ಧರ್ಮಕ್ಕೆ ಅವಮಾನ:ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಮ್ ಅವರನ್ನು ಹರೀಶ್ ಪೂಂಜ ಕಾಗೆಗೆ ಹೋಲಿಸಿದ್ದಾರೆ. ಹಿಂದೂ ಧರ್ಮದಲ್ಲಿ ಕಾಗೆಗೆ ಎಷ್ಟು ಬೆಲೆ ಇದೆ ಗೊತ್ತಿದೆಯಾ ಅವರಿಗೆ? ಶನಿ ದೇವರನ್ನು ಪೂಜೆ ಮಾಡಲ್ವಾ? ಪೂಂಜ ನೇರವಾಗಿ ಹಿಂದೂ ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.ಪೂಂಜ ರಾಜೀನಾಮೆ ನೀಡಲಿ:ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಬೆಳ್ತಂಗಡಿ ತಾಲೂಕಿನ ಜನತೆ ಹರೀಶ್ ಪೂಂಜರಂಥ ಶಾಸಕರನ್ನು ಎಂದೂ ನೋಡಿಲ್ಲ. ರತ್ನವರ್ಮ ಹೆಗ್ಗಡೆ ಅವರಿಂದ ಹಿಡಿದು ವೈಕುಂಠ ಬಾಳಿಗರು, ವಸಂತ ಬಂಗೇರರಂಥವರು ಶಾಸಕರಾಗಿ ಕ್ಷೇತ್ರದ ಜನತೆಗೆ ಗೌರವ ತಂದುಕೊಟ್ಟಿದ್ದರು. ವಸಂತ ಬಂಗೇರರು ಭ್ರಷ್ಟಾಚಾರದ ವಿರುದ್ಧ ಹೋರಾಡಿದವರು, ಎಂದೂ ಭ್ರಷ್ಟರು, ರೌಡಿಗಳ ಪರ ಇರಲಿಲ್ಲ. ಕೂಡಲೆ ಅವರು ರಾಜೀನಾಮೆ ನೀಡಿ, ಮರು ಚುನಾವಣೆಗೆ ನಿಂತು ಗೆಲ್ಲಲಿ ನೋಡೋಣ ಎಂದು ಸವಾಲು ಹಾಕಿದರು.