೧೪ರಂದು ಗಜೇಂದ್ರಗಡದಲ್ಲಿ ಹಿಂದೂ ಸಮ್ಮೇಳನ: ರವೀಂದ್ರಸಾ ಶಿಂಗ್ರಿ

KannadaprabhaNewsNetwork |  
Published : Feb 09, 2026, 02:30 AM IST
ಗಜೇಂದ್ರಗಡ ಹಿಂದೂ ಸಮ್ಮೇಳನ ಹಿನ್ನಲೆ ಸಮಿತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ರವೀಂದ್ರಸಾ ಶಿಂಗ್ರಿ ಮಾತನಾಡಿದರು. | Kannada Prabha

ಸಾರಾಂಶ

ಸಮ್ಮೇಳನದಲ್ಲಿ ರೋಣ ಬೂದೀಶ್ವರ ಮಠದ ಡಾ. ವಿಶ್ವನಾಥ ಸ್ವಾಮೀಜಿ ಹಿರೇಮಠ ಸಾನ್ನಿಧ್ಯ ವಹಿಸುವರು. ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ವಕ್ತಾರರಾಗಿ ಭಾಗವಹಿಸಲಿದ್ದಾರೆ.

ಗಜೇಂದ್ರಗಡ: ಸನಾತನ ಧರ್ಮದ ಆಚಾರ, ವಿಚಾರಗಳ ಉಳಿವು ಮತ್ತು ಬೆಳವಣಿಗೆ ಉದ್ದೇಶವಾಗಿಸಿಕೊಂಡು ಪಟ್ಟಣದಲ್ಲಿ ಫೆ. ೧೪ರಂದು ಅದ್ಧೂರಿಯಾಗಿ ಹಿಂದೂ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ರವೀಂದ್ರಸಾ ಶಿಂಗ್ರಿ ತಿಳಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಮಸ್ತ ಹಿಂದೂಗಳ ಸಹಯೋಗದೊಂದಿಗೆ ಹಿಂದೂ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಮ್ಮೇಳನ ಹಿನ್ನೆಲೆ ಫೆ. ೧೩ರಂದು ಬೆಳಗ್ಗೆ ೧೦ ಗಂಟೆಗೆ ಜಗದಂಬಾ ದೇವಸ್ಥಾನದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‍್ಯಾಲಿ ನಡೆಯಲಿದೆ.

ಫೆ. ೧೪ರಂದು ಮಧ್ಯಾಹ್ನ ೨.೩೦ಕ್ಕೆ ಬಜರಂಗದಳ ಸರ್ಕಲ್‌ನಿಂದ ಸಾಂಪ್ರದಾಯಿಕ ಮಂಗಳ ಶೋಭಾಯಾತ್ರೆ ಆರಂಭವಾಗಲಿದೆ. ವಾದ್ಯಮೇಳಗಳೊಂದಿಗೆ ಸಂಜೆ ೫.೩೦ಕ್ಕೆ ರೋಣ ರಸ್ತೆಯಲ್ಲಿನ ತೋಂಟದಾರ್ಯ ಆಂಗ್ಲ ಮಾಧ್ಯಮ(ಸಿಬಿಎಸ್‌ಇ) ಶಾಲಾ ಆವರಣ ತಲುಪಲಿದೆ. ಸಂಜೆ ಅಲ್ಲಿಯೇ ೫.೩೦ಕ್ಕೆ ಸಮ್ಮೇಳನದ ಸಾರ್ವಜನಿಕ ಸಮಾರಂಭ ನಡೆಯಲಿದೆ ಎಂದರು.

ಸಮ್ಮೇಳನಕ್ಕೆ ರೋಣ ಬೂದೀಶ್ವರ ಮಠ, ಡಾ. ವಿಶ್ವನಾಥ ಸ್ವಾಮೀಜಿ ಹಿರೇಮಠ ಸಾನ್ನಿಧ್ಯ ವಹಿಸುವರು. ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ವಕ್ತಾರರಾಗಿ ಭಾಗವಹಿಸಲಿದ್ದಾರೆ ಎಂದರು.

ಉಮೇಶ ಮಲ್ಲಾಪೂರ ಮಾತನಾಡಿ, ಭಾರತ ಉಳಿಯಬೇಕಾದರೆ ಹಿಂದೂ ಸಂಸ್ಕೃತಿ ಉಳಿಯಬೇಕು. ಅದನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದರು.ಪ್ರಚಾರ ಸಮಿತಿ ಸದಸ್ಯ ಸಂಜೀವ ಜೋಷಿ ಮಾತನಾಡಿ, ಹಿಂದೂಗಳು ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಜಾತಿ, ಮತ, ಪಂಥ ಭೇದವಿಲ್ಲದೆ ನಡೆಯುವ ಶ್ರೇಷ್ಠ ಸಮಾವೇಶವೇ ಹಿಂದೂ ಸಮ್ಮೇಳನವಾಗಿದೆ. ಫೆ. ೧೩ರಂದು ಬೈಕ್ ರ್ಯಾಲಿ, ಫೆ. ೧೪ರಂದು ಸಮ್ಮೇಳನದ ಅಂಗವಾಗಿ ಮಜಲು, ಚಂಡೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಾದ್ಯಗಳು, ಆಯಾ ಸಮಾಜದ ವೇಷಭೂಷಣ, ಸಾಧು- ಸಂತರ ಹಾಗೂ ಮಹಾಪುರುಷರ ಭಾವಚಿತ್ರ ಪ್ರದರ್ಶನ ನಡೆಯಲಿದೆ ಎಂದ ಅವರು, ಸಮ್ಮೇಳನದಲ್ಲಿ ದೇಶದ ಆಂತರಿಕ ಸುರಕ್ಷತೆ, ಸಂಘಟನಾ ಕಾರ್ಯ, ಪಂಚ ಪರಿವರ್ತನೆ, ಗ್ರಾಮ ಸುರಕ್ಷೆ, ಸಾಮರಸ್ಯ, ವ್ಯಸನಮುಕ್ತಿ, ಸ್ವಾವಲಂಬನೆ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ಎಲ್ಲ ಸಮಾಜದವರು, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಸಿಬ್ಬಂದಿ, ವಿದ್ಯಾರ್ಥಿಗಳು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸುವಂತೆ ವಿನಂತಿಸಿದರು. ಈ ವೇಳೆ ನಿವೃತ್ತ ಶಿಕ್ಷಕ ಎಸ್.ಎಸ್. ಶಿವಳ್ಳಿ, ರವಿ ಕಲಾಲ, ರಾಜೇಂದ್ರ ಘೋರ್ಪಡೆ, ಚಂದ್ರಕಾಂತ ಮಹೇಂದ್ರಕರ, ಉಮೇಶ ನಾವಡೆ, ಸಂತೋಷ ವಸ್ತ್ರದ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’