ಕನ್ನಡಪ್ರಭ ವಾರ್ತೆ ತರೀಕೆರೆ
ವಿಶ್ವ ಹಿಂದೂ ಪರಿಷತ್, ಭಜರಂಗದಳ, ಹಿಂದೂ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಇಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರ ನೀಡಿದ ಪ್ರತ್ಯುತ್ತರ ಸಿಂದೂರ ಆಪರೇಷನ್ ಜನರು ಮೆಚ್ಚಿದ್ದಾರೆ, ಸಿಂದೂರ ಅಪರೇಶನ್ ಕಲ್ಪನೆಯಲ್ಲೇ ಮಂಟಪವನ್ನು ರಚಿಸಲಾಗಿದ್ದು, ಸೆ.3 ರಂದು ಮಧ್ಯಾಹ್ನ 12.15ಕ್ಕೆ ಪುತ್ಥಳಿಯೊಂದಿಗೆ ಪಟ್ಟಣದ ಎಲ್ಲ ರಾಜಹಬೀದಿಗಳಲ್ಲಿ ಬೃಹತ್ ಶೋಭಾಯಾತ್ರೆಯನ್ನು ಆಯೋಜಿಸಲಾಗಿದೆ, ಶೋಭಾಯಾತ್ರೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿದ್ದು, ಪಟ್ಟಣದಲ್ಲಿ ಪ್ರಥಮ ಬಾರಿಗೆ ನಾಸಿಕ್ ಡೋಲು ನಾದ ಸ್ವರ, ಶ್ರೀರಾಮನ ಮೂರ್ತಿಯೊಂದಿಗೆ ಭಜನಾ ತಂಡಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.ಶೋಬಾಯಾತ್ರೆಯಲ್ಲಿ ಮುಖಂಡರು, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಜಿ.ಎಚ್.ಶ್ರೀನಿವಾಸ್, ಚೆನ್ನಬಸಪ್ಪ, ಮಾಜಿ ಶಾಸಕರಾದ ಡಿ.ಎಸ್.ಸುರೇಶ್, ಎಸ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿಸಲಾಗಿದೆ, ಸ್ತ್ರೀಶಕ್ತಿ ಸಂಘಗಳು, ದಾನಿಗಳು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪುರಸಭೆ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್, ವಿಶ್ವ ಹಿಂದೂ ಪರಿಷತ್ ತರೀಕೆರೆ ತಾಲೂಕು ನಗರ ಅಧ್ಯಕ್ಷರು ಆನಂದ (ಗುಂಡ) ಜಿಲ್ಲಾ ಭಜರಂಗದಳ ಸುರಕ್ಷಾ ಪ್ರಮುಖ್ ಜಗದೀಶ್, ಭಜರಂಗದಳ ತಾಲೂಕು ಸಂಯೋಜಕರು ಚಂದ್ರಶೇಖರ್ (ಚಂದು) ನಗರ ಸಂಯೋಜಕರು ಸಂತೋಷ್ ಕೆ, ವಿಶ್ವ ಹಿಂದೂ ಪರಿಷತ್ ತರೀಕೆರೆ ಘಟಕದ ಸದಸ್ಯರು, ಭಜರಂಗದಳ ತರೀಕೆರೆ ತಾಲೂಕು ಸದಸ್ಯರು ಮತ್ತಿತರರು ಇದ್ದರು.