ನಾಗೇನಳ್ಳಿ ಸೊಸೈಟಿ ಅಧ್ಯಕ್ಷರಾಗಿ ಹಿರಿಗದ್ದೆ ಮಂಜುನಾಥ್ ಆಯ್ಕೆ

KannadaprabhaNewsNetwork |  
Published : May 11, 2025, 01:17 AM IST
10ಎಚ್ಎಸ್ಎನ್8 : -ತಾಲೂಕಿನ ನಾಗೇನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹಿರಿಗದ್ದೆ ಮಂಜುನಾಥ್‌ರನ್ನು ಅಭಿನಂದಿಸಿದ ಷೇರುದಾರರು ಮತ್ತು ಮುಖಂಡರು. | Kannada Prabha

ಸಾರಾಂಶ

ನಾಗೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೫ರಿಂದ ೨೦೩೦ರ ಅವಧಿಗೆ ನಿರ್ದೇಶಕರ ಸ್ಥಾನಕ್ಕೆ ಮೇ ೧ ರಂದು ಚುನಾವಣೆ ನಡೆದಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಮೇ ೯ರಂದು ಶುಕ್ರವಾರ ಚುನಾವಣೆ ನಿಗದಿಯಾಗಿದ್ದರಿಂದ, ಅಧ್ಯಕ್ಷ ಸ್ಥಾನಕ್ಕೆ ಹಿರಿಗದ್ದೆ ಮಂಜುನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭಾಸ್ಕರ್‌ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ರಿಟರ್ನಿಂಗ್‌ ಅಧಿಕಾರಿ ಲೀಲಾ, ಅಧ್ಯಕ್ಷರಾಗಿ ಹಿರಿಗದ್ದೆ ಮಂಜುನಾಥ್, ಉಪಾಧ್ಯಕ್ಷರಾಗಿ ಭಾಸ್ಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ನಾಗೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹಿರಿಗದ್ದೆ ಮಂಜುನಾಥ್, ಉಪಾಧ್ಯಕ್ಷರಾಗಿ ಭಾಸ್ಕರ್ ಅವಿರೋಧವಾಗಿ ಆಯ್ಕೆಯಾದರು. ನಾಗೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೫ರಿಂದ ೨೦೩೦ರ ಅವಧಿಗೆ ನಿರ್ದೇಶಕರ ಸ್ಥಾನಕ್ಕೆ ಮೇ ೧ ರಂದು ಚುನಾವಣೆ ನಡೆದಿತ್ತು. ಆದರೆ ಅಧ್ಯಕ್ಷ ಸ್ಥಾನಕ್ಕೆ ಮೇ ೯ರಂದು ಶುಕ್ರವಾರ ಚುನಾವಣೆ ನಿಗದಿಯಾಗಿದ್ದರಿಂದ, ಅಧ್ಯಕ್ಷ ಸ್ಥಾನಕ್ಕೆ ಹಿರಿಗದ್ದೆ ಮಂಜುನಾಥ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭಾಸ್ಕರ್‌ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯ ರಿಟರ್ನಿಂಗ್‌ ಅಧಿಕಾರಿ ಲೀಲಾ, ಅಧ್ಯಕ್ಷರಾಗಿ ಹಿರಿಗದ್ದೆ ಮಂಜುನಾಥ್, ಉಪಾಧ್ಯಕ್ಷರಾಗಿ ಭಾಸ್ಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ನಾಗೇನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾತನಾಡಿದ ಹಿರಿಗದ್ದೆ ಮಂಜುನಾಥ್, ನಮ್ಮ ನಾಗೇನಹಳ್ಳಿಯ ಪ್ರಾಥಮಿಕ ಸಹಕಾರ ಸಂಘವು ಈ ಹಿಂದೆ ಉತ್ತಮ ವಹಿವಾಟಿನೊಂದಿಗೆ ಮುಂಚೂಣಿ ಸಂಘವೆಂದು ಹೆಸರು ಪಡೆದಿತ್ತು. ಆದರೆ ನಂತರದ ದಿನಗಳಲ್ಲಿ ನಿರ್ದೇಶಕರ ಇಚ್ಛಾಶಕ್ತಿಯ ಕೊರತೆ ಕಾರಣ ಹಿಂದುಳಿಯಲು ಕಾರಣವಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಎಲ್ಲ ನಿರ್ದೇಶಕರ ಹಾಗೂ ಗ್ರಾಮಸ್ಥರು ಮತ್ತು ಷೇರುದಾರರ ಸಹಕಾರ ಪಡೆದು ಉತ್ತಮ ಆಡಳಿತದೊಂದಿಗೆ ಸಹಕಾರ ಸಂಘವನ್ನು ಪುನಃ ಮೇಲ್ಮಟ್ಟಕ್ಕೆ ಕೊಂಡೊಯ್ಯುವ ಕೆಲಸವನ್ನು ಮಾಡಲಾಗುವುದು. ಇಲ್ಲಿ ಆಡಳಿತ ಮಂಡಳಿಯವರೊಂದಿಗೆ ಅಧಿಕಾರಿ, ಸಿಬ್ಬಂದಿಗೆ ಚರ್ಚಿಸಿ ಈ ಭಾಗದ ರೈತರ ಅನುಕೂಲಕ್ಕಾಗಿ ಏನೇನು ಅಗತ್ಯ ವಸ್ತುಗಳು ಹಾಗೂ ಪರಿಕರಗಳು ಬೇಕು ಎಂಬುದನ್ನು ತಿಳಿದು ಎಲ್ಲವೂ ನಮ್ಮ ಸಂಘದಲ್ಲೆ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ನಾಗೇನಹಳ್ಳಿ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ತೇಜಪಾಲ್, ನಂದೀಶ್, ಹೊನ್ನೇಗೌಡ, ಚಂದ್ರೇಗೌಡ, ಪ್ರಫುಲ್ಲ ಎನ್.ಆರ್‌.ಪುಟ್ಟಸ್ವಾಮಿಗೌಡ, ಎಂ.ಎಂ.ಸುಧಾ ವೀರಭದ್ರೇಗೌಡ, ಸತೀಶ್‌ ಚಂದ್ರ ಹೆಗಡೆ, ರಾಜಯ್ಯ, ಭೋಜ, ರಜತ್‌ ಕುಮಾರ್, ಟಿಎಪಿಸಿಎಂಎಸ್ ನಿರ್ದೇಶಕ ಮಲ್ಲೇಗೌಡ, ಮುಖಂಡರಾದ ಅಭಿಗೌಡ, ನಂದಕುಮಾರ್, ಸೇರಿದಂತೆ ಗ್ರಾಮಸ್ಥರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!