ಕನ್ನಡಪ್ರಭ ವಾರ್ತೆ ಮೈಸೂರು
ಕಾಲೇಜಿನ ಮಕ್ಕಳಿಗೆ ಪ್ರತಿಜ್ಞಾ ವಿಧಿಯ ಪತ್ರಗಳನ್ನು ವಿತರಿಸಿ, ಅವರ ವಿವರಗಳನ್ನು ಅರ್ಜಿಯ ನಮೂನೆಯಲ್ಲಿ ಭರ್ತಿ ಮಾಡಿ ಸಹಿ ಪಡೆಯುವ ಮೂಲಕ ನೀರಿನ ಬಳಕೆಯ ಮಹತ್ವವನ್ನು ತಿಳಿಸಲಾಯಿತು.
ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮುನ್ನ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಸಮರ್ಪಕವಾಗಿ ಪೋಷಿಸಲು, ನಾಗರೀಕ ಸಮಾಜ ವಿಫಲವಾಗಿದ್ದು, ಅನೇಕ ಪ್ರಕೃತಿ ವಿಕೋಪದಿಂದಾಗಿ ಇಂದು ಮಾನವಕುಲ ನಲುಗಿಹೋಗಿದೆ. ಮುಂದೊಂದು ದಿನ ಕುಡಿಯುವ ನೀರಿಗಾಗಿ ತತ್ತರಿಸುವಂತ ಸಂದರ್ಭ ರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಾದ ನಾವು ಪರಿಸರ ಪೋಷಿಸಿ, ಬೆಳಸುವುದರ ಮೂಲಕ ಸುಸ್ಥಿರ ಅಭಿವೃದ್ಧಿಯತ್ತ ಮುಖ ಮಾಡಬೇಕಿದೆ. ಹಾಗಾಗಿ ನಾವು ನೀರಿನ ಮಿತವಾದ ಬಳಕೆ, ಕೆರೆಗಳ ಶುದ್ಧೀಕರಣ, ಜಲಮೂಲಗಳ ರಕ್ಷಣೆ, ನೀರಿನ ಹಿಂಗುವಿಕೆ ಮತ್ತು ಮಳೆ ನೀರಿನ್ನು ಸಹ ಸಮರ್ಪಕವಾಗಿ ಬಳಸಿಕೊಳ್ಳುವ ಜೊತೆಗೆ ನೀರನ್ನು ಬಹಳ ಜತನವಾಗಿ ಉಪಯೋಗಿಸಿಕೊಂಡು ಎಲ್ಲಾ ಜೀವಸಂಕುಲಗಳ ಉಳಿವಿಗೆ ಶ್ರಮಿಸಬೇಕಿದೆ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಶೈಕ್ಷಣಿಕ ಡೀನ್ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಚ್. ಶ್ರೀಧರ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಜಿ. ದೊಡ್ಡರಸಯ್ಯ, ಡಾ.ಸಿ.ಎಸ್. ಸಿದ್ದರಾಜು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ಎನ್. ವೆಂಕಟಲಕ್ಷ್ಮಿ, ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಕೆ. ಸೋಮಶೇಖರ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪಿ.ಜಿ. ಪುಷ್ಪಾರಾಣಿ, ಆರ್. ಸಿದ್ದಪ್ಪ, ಎ.ಆರ್. ನಂದೀಶ ಇದ್ದರು.