ಡಾ.ಅರವಿಂದ ಜತ್ತಿ ದಂಪತಿಗೆ ಡಾ.ಬಸವಲಿಂಗ ಪಟ್ಟದ್ದೇವರಿಂದ ಸನ್ಮಾನ

KannadaprabhaNewsNetwork |  
Published : May 15, 2024, 01:41 AM IST
ಚಿತ್ರ 13ಬಿಡಿಆರ್59 | Kannada Prabha

ಸಾರಾಂಶ

ಭಾಲ್ಕಿ ಹಿರೇಮಠ ಸಂಸ್ಥಾನಕ್ಕೆ ಆಗಮಿಸಿದ ಬೆಂಗಳೂರು ಬಸವ ಸಮಿತಿ ಅಧ್ಯಕ್ಷರಾದ ಡಾ.ಅರವಿಂದ ಜತ್ತಿ ಹಾಗೂ ಶಾರದಾಬಾಯಿ ಜತ್ತಿ ದಂಪತಿಗಳಿಗೆ ಪೂಜ್ಯ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸನ್ಮಾನಿಸಿ ಆಶೀರ್ವದಿಸಿದರು.

ಭಾಲ್ಕಿ: ಹಿರೇಮಠ ಸಂಸ್ಥಾನಕ್ಕೆ ಆಗಮಿಸಿದ ಬೆಂಗಳೂರು ಬಸವ ಸಮಿತಿ ಅಧ್ಯಕ್ಷರಾದ ಡಾ.ಅರವಿಂದ ಜತ್ತಿ ಹಾಗೂ ಶಾರದಾಬಾಯಿ ಜತ್ತಿ ದಂಪತಿಗಳಿಗೆ ಪೂಜ್ಯ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸನ್ಮಾನಿಸಿ ಆಶೀರ್ವದಿಸಿದರು.

ಡಾ.ಅರವಿಂದ ಜತ್ತಿ ಅವರು ಬಸವ ಸಮಿತಿ ಅಧ್ಯಕ್ಷರಾಗಿ ಬಸವಾದಿ ಶರಣರ ತತ್ವಪ್ರಸಾರದ ಕಾರ್ಯ ನಿರಂತರವಾಗಿ ಮಾಡುತ್ತಿದ್ದಾರೆ. ಶರಣರ ವಚನ ಸಾಹಿತ್ಯವನ್ನು ದೇಶ-ವಿದೇಶದ 36 ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸುವ ಮೂಲಕ ಶರಣರ ಸಂದೇಶವನ್ನು ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ತಲುಪಿಸುತ್ತಿದ್ದಾರೆ.

ಶರಣ ಸಾಹಿತ್ಯ ಕುರಿತು ಅನೇಕ ಭಾಷೆಗಳಲ್ಲಿ ನಿಯತಕಾಲಿಕೆ ಪ್ರಕಟಿಸುವ ಮೂಲಕ ಬಸವಪ್ರಜ್ಞೆ ಬೆಳೆಸುತ್ತಿದ್ದಾರೆ.

ಇವರ ಈ ಕಾರ್ಯ ಗುರುತಿಸಿ, ಧಾರವಾಡ ವಿಶ್ವವಿದ್ಯಾಲಯದಿಂದ ಹಾಗೂ ಶರಣಬಸವೇಶ್ವರ ವಿಶ್ವವಿದ್ಯಾಲಯದ ಕಲಬುರಗಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ನಮಗೆ ಅತ್ಯಂತ ಸಂತೋಷವನ್ನುಂಟು ಮಾಡಿದೆ ಎಂದು ಪೂಜ್ಯರು ನುಡಿದರು. ಪೂಜ್ಯ ಗುರುಬಸವ ಪಟ್ಟದ್ದೇವರು, ಡಾ.ಕಲ್ಯಾಣರಾವ ಪಾಟೀಲ, ಡಾ.ಶಿವರಾಜ ಶಾಸ್ತ್ರಿ ಹೆರೂರು, ಡಾ. ಲಕ್ಷ್ಮಿಕಾಂತ ಪಾಂಚಾಳ ಬಾಗಲಕೋಟ, ಸಿದ್ಧಯ್ಯ ಕಾವಡಿಮಠ ಬೀದರ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!