ಕನ್ನಡಪ್ರಭ ವಾರ್ತೆ ಹೊಸನಗರ
ತಾಲೂಕು ಗಡಿಗ್ರಾಮ ಪುರಪ್ಪೆಮನೆಯಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರವನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿ ತಾಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ‘ಜನಜಾಗೃತಿ ಅಭಿಯಾನ’ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ವಿಂಗಡಣೆ ಹೊಸನಗರ ಕ್ಷೇತ್ರದ ಮಟ್ಟಿಗೆ ವೈಜ್ಞಾನಿಕವಾಗಿಲ್ಲ. ಶರಾವತಿ, ವಾರಾಹಿ, ಚಕ್ರಾ ಹಾಗೂ ಸಾವೆಹಕ್ಕಲು ಜಲವಿದ್ಯುತ್ ಯೋಜನೆಯಲ್ಲಿ ಇಲ್ಲಿನ ಜನರನ್ನು ಸ್ಥಾನಪಲ್ಲಟ ಮಾಡಲಾಗಿದೆ ಎಂದು ಹೇಳಿದರು.6 ದಶಕಗಳಿಂದ ಸಾವಿರಾರು ಕುಟುಂಬಗಳು ವಲಸೆಹೋಗಿವೆ. ಈ ಹಿಂದಿನ ಜನಗಣತಿ ಆಧಾರದ ಮೇಲೆ ಮುಳುಗಡೆ ಆಗದೇ ಇದ್ದಿದ್ದರೆ ಈಗಿನ ಜನಸಂಖ್ಯೆ 3 ಲಕ್ಷಕ್ಕೂ ಹೆಚ್ಚು ಮೀರುತ್ತಿತ್ತು. ದೇಶದ ವಿದ್ಯುತ್ಗಾಗಿ ತ್ಯಾಗ ಮಾಡಿದ ಈ ತಾಲೂಕಿನ ಜನರಿಗೆ ಅನ್ಯಾಯ ಆಗಿದೆ ಎಂದರು.
ಪುರಪ್ಪಮನೆ ಗ್ರಾಪಂ ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷ ರಾಘವೇಂದ್ರ, ಸಂತೋಷ, ಜಯಪ್ರಕಾಶ ಶೆಟ್ಟಿ, ಒಕ್ಕೂಟದ ಕಾರ್ಯದರ್ಶಿ ಚಿದಂಬರ್, ಮಂಜುನಾಥ ಬ್ಯಾಣದ್, ಬಿ.ಎಸ್. ಸುರೇಶ ಮತ್ತಿತರರು ಇದ್ದರು.
ಹೊಸನಗರ ವಿಧಾನಸಭಾ ಕ್ಷೇತ್ರ ಮರುಸ್ಥಾಪನೆಗೆ ಒತ್ತಾಯಿಸಿ ಜನಜಾಗೃತಿ ಅಭಿಯಾನ ರಥಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಚಾಲನೆ ನೀಡಿದರು.