ಹಾಸ್ಟೇಲ್‌ ನಿರ್ಮಾಣ ಕನಸು ಈಗ ನನಸು

KannadaprabhaNewsNetwork |  
Published : Dec 28, 2025, 03:45 AM IST
ಜನವರಿ 30 ರಂದು ಕನ್ನಡಪ್ರಭ ಪ್ರಕಟಿಸಿದ ವರದಿ | Kannada Prabha

ಸಾರಾಂಶ

ಪಟ್ಟಣದಲ್ಲಿ ಬಹು ವರ್ಷಗಳ ಗಂಡು ಮಕ್ಕಳ ಹಾಸ್ಟೆಲ್ ನಿರ್ಮಾಣದ ಕನಸು ಈಗ ನನಸಾಗುತ್ತಿದೆ.

ಕುಷ್ಟಗಿ: ಪಟ್ಟಣದಲ್ಲಿ ಮೆಟ್ರಿಕ್ ನಂತರದ ಗಂಡು ಮಕ್ಕಳ ಹಾಸ್ಟೆಲ್ ನಿರ್ಮಾಣ ಸಾರ್ವಜನಿಕರ ಬಹು ವರ್ಷಗಳ ಕನಸು ಈಗ ನನಸಾಗಲಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಕ್ರೀಡಾಂಗಣದ ಹತ್ತಿರ ಇರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿರುವ ಜಾಗದಲ್ಲಿ ಕೆಕೆಆರ್‌ಡಿಬಿ ಅನುದಾನ ₹2ಕೋಟಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅನುದಾನ ₹3ಕೋಟಿ ಒಟ್ಟು ಐದು ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿರುವ ಕುಷ್ಟಗಿ ನಗರದ ಮೆಟ್ರಿಕ್ ನಂತರದ ಗಂಡು ಮಕ್ಕಳ ನರ್ಸಿಂಗ್ ಹಾಸ್ಟೇಲ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಪಟ್ಟಣದಲ್ಲಿ ಬಹು ವರ್ಷಗಳ ಗಂಡು ಮಕ್ಕಳ ಹಾಸ್ಟೆಲ್ ನಿರ್ಮಾಣದ ಕನಸು ಈಗ ನನಸಾಗುತ್ತಿದೆ. ಕಟ್ಟಡ ಕಾಮಗಾರಿ ಕರ್ನಾಟಕ ರಾಜ್ಯ ಪೊಲೀಸ್‌ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮದವರು ಅನುಷ್ಠಾನ ಮಾಡುತ್ತಿದ್ದು, ಹೊಸ ತಾಂತ್ರಿಕತೆ ಉಪಯೋಗಿಸಿಕೊಂಡು ಉತ್ತಮ ಹಾಗೂ ಗುಣಮಟ್ಟ ಕಾಪಾಡುವಂತೆ ಸೂಚಿಸಲಾಗಿದೆ. ಸುಮಾರು 13 ಕೊಠಡಿಗಳು ನಿರ್ಮಾಣವಾಗುತ್ತಿದ್ದು ಅದಕ್ಕಾಗಿ ಈ ಜಾಗದಲ್ಲಿ ಇರುವಂತಹ ಹಳೆ ಕಟ್ಟಡಗಳನ್ನು ಈಗಾಗಲೆ ನೆಲಸಮಗೊಳಿಸಲು ಮುಂದಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮವಾದ ಹಾಸ್ಟೇಲ್ ನಿರ್ಮಾಣವಾಗಲಿದೆ ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ನೆಲಗಣಿ, ಜಿ.ಎಂ. ಅಡವಿ, ಬಸವರಾಜ ಕಮತರ, ಮುತ್ತಣ್ಣ ಹಾವಿನಾಳ, ಮೈಬುಬಸಾಬ್‌ ಕಟಗಿ, ಸರೋಜಿನಿ ಮಹಡಿ, ಶಾಂತಮ್ಮ,ಮಲ್ಲಯ್ಯ, ಶರಣಬಸವ, ಇಂಜಿನಿಯರ್‌ ಭನರಾಜ. ವಾದಿರಾಜ ಶ್ಯಾಟಿ, ಶುಕಮುನಿ ಕೊರಡಕೇರಿ ಸೇರಿದಂತೆ ಅನೇಕರು ಇದ್ದರು.

ಕನ್ನಡಪ್ರಭ ವರದಿ ಸ್ಮರಣೆ: ಜ.30ರ 2025ರಂದು ಅನೈತಿಕ ಚಟುವಟಿಕೆ ತಾಣವಾದ ಹಾಸ್ಟೇಲ್‌ನ ನಿರುಪಯುಕ್ತ ಕೊಠಡಿ ಎಂಬ ತಲೆಬರಹದಡಿಯಲ್ಲಿ ಸಮಗ್ರವಾದ ವರದಿ ಬಿತ್ತರಿಸಲಾಗಿತ್ತು.ಈಗ ಹಳೆಯ ಕೊಠಡಿಗಳನ್ನು ತೆರವುಗೊಳಿಸುವ ಮೂಲಕ ಹೊಸ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದು ಕನ್ನಡಪ್ರಭ ವರದಿಯನ್ನು ಸ್ಮರಿಸಬಹುದಾಗಿದೆ.

ಕುಷ್ಟಗಿ ಪಟ್ಟಣದಲ್ಲಿ ಬಹು ವರ್ಷಗಳ ಹಾಸ್ಟೇಲ್ ನಿರ್ಮಾಣದ ಕನಸು ಈಗ ನನಸಾಗುತ್ತಿದೆ.ಅಂದಾಜು ₹5ಕೋಟಿ ಅನುದಾನದಲ್ಲಿ ನಿರ್ಮಾಣವಾಗಲಿದೆ ಉತ್ತಮ ಕಟ್ಟಡ ನಿರ್ಮಿಸಿಕೊಡುವಂತೆ ಅನುಷ್ಟಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪದ ಉಳಿಯಲು ಸಂಘ-ಸಂಸ್ಥೆಗಳಿಂದ ಸಾಧ್ಯ
ಪ್ರವಾಸಿಗರಿಂದ ತುಂಬಿದ ಗೋಕರ್ಣ