ಶಿವಾನಂದ ಗೊಂಬಿ
ಹುಬ್ಬಳ್ಳಿ-ಧಾರವಾಡದಲ್ಲಿ ಎಲ್ಲಿಯೇ ಹೊಸ ಲೇಔಟ್ ಆದರೂ ಇನ್ಮುಂದೆ ಅದರಲ್ಲಿ ಶೇ.1 ಅಥವಾ ಶೇ. 2ರಷ್ಟಾದರೂ ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲ್ಯೂಎಸ್) ಮೀಸಲಿಡುವಂತಹ ನಿಯಮ ಜಾರಿಗೊಳಿಸಲು ಹುಡಾ (ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ) ಚಿಂತನೆ ನಡೆಸಿದೆ. ಈ ಸಂಬಂಧ ನಿಯಮ ರೂಪಿಸುವ ಕೆಲಸದಲ್ಲಿ ಹುಡಾ ನಿರತವಾಗಿದೆ. ಇದು ಜಾರಿಯಾದರೆ ರಾಜ್ಯದಲ್ಲೇ ಪ್ರಥಮ ಪ್ರಯೋಗವೆನಿಸಲಿದೆ.
ಏನಿದು ಯೋಚನೆ:ಹುಡಾದಲ್ಲಿ ಪ್ರತಿವರ್ಷ ಹತ್ತಾರು ಹೊಸ ಲೇಔಟ್ ಪರವಾನಗಿ ಪಡೆಯಲು ಡೆವಲಪರ್ಸ್ ಬರುತ್ತಾರೆ. ಒಂದೆರಡು ಎಕರೆಯಿಂದ ಹಿಡಿದು ನೂರಾರು ಎಕರೆ ವರೆಗೂ ಹೊಸ ಲೇಔಟ್ಗೆ ಪರವಾನಗಿ ನೀಡಲಾಗುತ್ತದೆ. ಆದರೆ ಎಲ್ಲವೂ ಮಾರುಕಟ್ಟೆ ದರದಂತೆಯೇ ಮಾರಾಟ ಮಾಡಲಾಗುತ್ತದೆ. ಈಗ ಭೂಮಿ ದರ ಏರಿಕೆ ಆಗುತ್ತಿರುವುದನ್ನು ನೋಡಿದರೆ ಆರ್ಥಿಕವಾಗಿ ದುರ್ಬಲವಾದ ವರ್ಗ (ಇಕಾನಮಿಕಲಿ ವೀಕರ್ಸ್ ಸೆಕ್ಷನ್) ಅವರಿಗೆ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ. ಅಷ್ಟೊಂದು ಗಗನಕ್ಕೆ ಏರುತ್ತಿದೆ. ಆದರೆ ಎಲ್ಲರಿಗೂ ಸ್ವಂತ ಸೂರು ಮಾಡಿಕೊಳ್ಳಬೇಕು ಎಂಬ ಆಸೆಯಂತೂ ಇದ್ದೆ ಇರುತ್ತದೆ. ಹಾಗಂತ ಸರ್ಕಾರ ಏನೂ ಮಾಡುತ್ತಿಲ್ಲ ಅಂತೇನೂ ಅಲ್ಲ. ಸರ್ಕಾರವೂ ಆಶ್ರಯ ಮನೆ ಸೇರಿದಂತೆ ವಿವಿಧ ಆವಾಸ ಯೋಜನೆಗಳಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಡುತ್ತಿದೆ. ಆದರೂ ಎಲ್ಲರಿಗೂ ಸೂರು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಹೊಸ ಲೇಔಟ್ಗಳಲ್ಲಿ ಈಗಿನ ದರ ನೋಡಿದರೆ ಮಧ್ಯಮ ವರ್ಗಕ್ಕೂ ನಿವೇಶನ ಖರೀದಿಸುವುದು ಅಸಾಧ್ಯದ ಮಾತು ಎಂಬಂತಾಗಿದೆ.
ಸಿದ್ಧತೆ:
ಯಾರ ಯೋಚನೆಯಿದು:
ಒಟ್ಟಿನಲ್ಲಿ ಎಲ್ಲರಿಗೂ ಸೂರು ಎಂಬ ಕಲ್ಪನೆಯ ಕನಸು ಸಾಕಾರಗೊಳಿಸಲು ಹುಡಾ ಈ ಬಗೆಯ ವಿನೂತನ ಪ್ರಯೋಗ ಮಾಡಲು ಮುಂದಾಗಿರುವುದು ಮೆಚ್ಚುಗೆಗೆ ಪಾತ್ರವಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ.ಹೊಸ ಲೇಔಟ್ಗಳಲ್ಲಿ ಇಡಬ್ಲ್ಯೂಎಸ್ಗೆ ಶೇ.1ರಿಂದ 2 ನಿವೇಶನ ಮೀಸಲಿಡುವಂತಾಗಬೇಕು ಎಂಬ ಯೋಚನೆ ಮಾಡಲಾಗುತ್ತಿದೆ. ಹಾಗಂತ ಡೆವಲಪರ್ಸ್ ಹುಡಾಕ್ಕೆ ನಿವೇಶನ ನೀಡುವುದು ಬೇಡ. ಅವರೇ ನೇರವಾಗಿ ಮಾರಾಟ ಮಾಡಲಿ. ಆದರೆ ಅದು ಎಸ್ಆರ್ ದರದಂತೆ ಇರಬೇಕು ಅಷ್ಟೇ. ಇದು ಚಿಂತನೆ. ಈ ಸಂಬಂಧ ಹುಡಾದಲ್ಲಿ ನಿಯಮ ರೂಪಿಸಿದ ಬಳಿಕ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹುಡಾ ಅಧ್ಯಕ್ಷ ಶಾಕೀರ ಸನದಿ ಹೇಳಿದರು.