ಮನುಷ್ಯನಿಗೆ ಜಾತಿಗಿಂತ ಪ್ರೀತಿ ಮುಖ್ಯ

KannadaprabhaNewsNetwork |  
Published : May 25, 2026, 01:15 AM IST
57 | Kannada Prabha

ಸಾರಾಂಶ

ನಾನು ನಿಮ್ಮ ಮುಂದೆ ನಿಂತು ಶಾಸಕರಾಗಿ ಬಂದಿರುವುದೇ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕೊಟ್ಟ ಕೊಡುಗೆಯಿಂದ ಮುಖ್ಯ ಕಾರಣದಿಂದ ನಾನು ಶಾಸಕರಾಲು ಸಾಧ್ಯ.

ಕನ್ನಡಪ್ರಭ ವಾರ್ತೆ ಸರಗೂರು

ಯಾವತ್ತೂ ಮನುಷ್ಯನಿಗೆ ಜಾತಿ ಮುಖ್ಯವಲ್ಲ ಪ್ರೀತಿ ಮುಖ್ಯ ಎನ್ನುವುದನ್ನು ಗ್ರಾಮಸ್ಥರು ತೋರಿಸಿಕೊಟ್ಟಿದ್ದೀರಿ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ತಾಲೂಕು ಸಮೀಪದ ಹುಲಿಕುರ ಗ್ರಾಮದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ 135ನೇ ಜಯಂತಿ ಹಾಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಭವನವನ್ನು ಸುಂದರವಾಗಿ ನಿರ್ಮಿಸಲಾಗಿದೆ. ಅದರೆ ಭವನದ ಒಳಗಡೆ ಅಂಬೇಡ್ಕರ್ ಅವರ ಹೇಳಿದ ತತ್ವ ಪದಗಳು ಬರೆದಿರುವುದನ್ನು ನಾನು ಎಲ್ಲಿಯೂ ಕೂಡ ನೋಡಿಲ್ಲ. ಹುಲಿಕುರ ಯುವಕರು ಬರಸಿಕೊಂಡಿರುವುದನ್ನು ಕಂಡು ತುಂಬಾ ಖುಷಿಯಾಯಿತು ಎಂದರು.

ನಾನು ನಿಮ್ಮ ಮುಂದೆ ನಿಂತು ಶಾಸಕರಾಗಿ ಬಂದಿರುವುದೇ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಕೊಟ್ಟ ಕೊಡುಗೆಯಿಂದ ಮುಖ್ಯ ಕಾರಣದಿಂದ ನಾನು ಶಾಸಕರಾಲು ಸಾಧ್ಯ. ಅಂಬೇಡ್ಕರ್ ಅವರು ಎಸ್ಸಿ ಎಸ್ಟಿಗೆ ಮೀಸಲಾತಿ ಕೊಡದಿದ್ದರೆ ನಾವು ಗ್ರಾಪಂನಿಂದ ವಿಧಾನಸಭೆವರೆಗೂ ಅತ್ತಲು ಸಾಧ್ಯವಾಗುತ್ತಿರಲಿಲ್ಲ. ಅವರ ಕೊಡುಗೆಯಿಂದ ಶಾಸಕನಾಗಿ ನಿಮ್ಮ ಮುಂದೆ ನಿಂತು ಮಾತನಾಡುತ್ತಿದ್ದೇನೆ ಎಂದು ಅವರು ಹೇಳಿದರು.

ದೇಶದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಹಿಂದೆ ಚಹಾ ಮಾರಿಕೊಂಡು ಜೀವನ ಮಾಡುತ್ತಿದ್ದರು. ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದಿಂದಲೇ ದೇಶದ ಅವರು ಪ್ರಧಾನಿಯಾಗಿದ್ದಾರೆ. ಅವರು ಹಾಗಿದ್ದಾರೆ ಅಂದರೆ ನಾವು ನೀವುಗಳು ಹಾಗುವುದು ಸಾಧ್ಯ ಎಂದು ಹೇಳಿದರು.

ಇಡೀ ಪ್ರಪಂಚದಾದ್ಯಂತ ಯಾರದದ್ದಾರೂ ಭಾವಚಿತ್ರ ಇದೆ ಎಂದರೆ ಅದು ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿತ್ರ ಮಾತ್ರ. ಅಮೆರಿಕ, ಲಂಡನ್ ಹಾಗೂ ವಿಧಾನಸೌಧ, ಗ್ರಾಪಂ ಎಲ್ಲಾ ಕಡೆಯಲ್ಲೂ ಇರುವುದೇ ಬಾಬಾ ಸಾಹೇಬ್ ಅಂಬೇಡ್ಕರ್ ಫೋಟೋ ಮಾತ್ರ. ಸರ್ಕಾರಿ ಕಟ್ಟಡಗಳಲ್ಲದೆ ವಿದೇಶಗಳಲ್ಲಿ ಇವೆ ಎಂದರು.

ಅಂಬೇಡ್ಕರ್ ಅವರು ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಅವರು ಎಲ್ಲಾರಿಗೂ ಸೀಮಿತವಾದರೂ ದೇಶಕ್ಕೆ ಮಾದರಿ ವ್ಯಕ್ತಿ. ನಮ್ಮ ಪ್ರಪಂಚದಲ್ಲಿ 32 ಡಿಗ್ರಿ ತೆಗೆದುಕೊಳ್ಳಲು ಯಾರಿಂದಲೂ ಸಾಧ್ಯವಾಗಲಿಲ್ಲ. ಹುಲಿಕರ ಗ್ರಾಮದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಹೆಚ್ಚಾಗಿ ಇದ್ದಾರೆ ಇವಾಗ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಇದ್ದಾರೆ ಎಂದರು.

ಅಂಬೇಡ್ಕರ್ ಭವನಕ್ಕೆ ಸುತ್ತ ಕಾಂಪೌಂಡ್ ಹಾಗೂ ಗ್ರಂಥಾಲಯ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಭವನ ಖಾಲಿಯಾಗುವುದು ಬೇಡ ಪುಸ್ತಕವನ್ನು ತೆಗೆದುಕೊಂಡು ಯುವಕರು ಓದಬೇಕು. ಮಕ್ಕಳನ್ನು ಎಲ್ಲಾರನ್ನು ಕುರಿಸಿಕೊಂಡು ಟ್ಯೂಷನ್ ಎಂದು ಅವರು ಕಿವಿಮಾತು ಹೇಳಿದರು.

ಪುರಸಭೆ ಸದಸ್ಯ ಹಾಗೂ ಧ್ರುವನಾರಾಯಣ್ ಅಭಿಮಾನಿಗಳ ಬಳಗದ ಅಧ್ಯಕ್ಷ ಎಚ್.ಸಿ. ನರಸಿಂಹಮೂರ್ತಿ ಮಾತನಾಡಿ, ಕ್ಷೇತ್ರದಲ್ಲಿ 152 ಗ್ರಾಮಗಳಿವೆ, 58000 ಮತದಾರರಿದ್ದಾರೆ. ತಾಲೂಕು ಹಿಂದುಳಿದ ವರ್ಗದ ಪಟ್ಟಿಯಲ್ಲಿತ್ತು. ಅನುದಾನವೂ ಕಡಿಮೆ ಇತ್ತು.. ಚಿಕ್ಕಮಾದು ದ್ರುವನಾರಾಯಣ ಅವರು ತಾಲುಕಿನ ಇತಿಹಾಸ ಬದಲಾಯಿಸಲು ಬಂದಿದ್ದಾಗಿ ಹೇಳಿದರು.

ಮಾಜಿ ಶಾಸಕ ಎಸ್ ಚಿಕ್ಕಮಾದು ಸಚಿವರಾಗುತ್ತಿದ್ದರು. ಆರ್‌. ಧ್ರುವನಾರಾಯಣ್‌ ಸಚಿವರಾಗುತ್ತೇವೆ ಎಂದು ಹೇಳುತ್ತಿದ್ದರು. ಈಗ ಚಿಕ್ಕಮಾದು ಅವರ ಪುತ್ರ ಅನಿಲ ಚಿಕ್ಕಮಾದು ಅವರು ತಾಲೂಕಿಗೆ 250 ಕೋಟಿ ರೂ. ‌ಕೊಟ್ಟು ರಸ್ತೆ ಅಭಿವೃದ್ಧಿ ಪಡಿಸಿದ್ದಾರೆ.

ತಾಲೂಕಿನಲ್ಲಿ 480 ಹಳ್ಳಿಗಳಿವೆ. ನಾಯಕ ಸಮಾಜದವರಿಗೂ ದಲಿತರಿಗೂ ಅಗುವುದಿಲ್ಲ. ಎಂಬ ಅಪವಾದ ಇದೆ. ಆದರೆ, ನಾಯಕ ಸಮಾಜದವರು ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ನೀಡಿರುವುದು ತುಂಬಾ ಖುಷಿಯಾಗಿದೆ ಎಂದರು.

ಗ್ರಾಮದ ಮುಖಂಡ ಮೋಹನ್ ರಾಜ್ ಮಾತನಾಡಿ, ರಸ್ತೆ ಡಾಂಬರೀಕರಣ.

ಗ್ರಂಥಾಲಯ, ಸಿಸಿ ರಸ್ತೆ, ಚರಂಡಿ, ಕಬಿನಿ ನಾಲೆ ಸೇತುವೆ ನಿರ್ಮಾಣ, ಸ್ಮಶಾನ ಜಾಗ ನೀಡಬೇಕು, ಗ್ರಾಮ ಠಾಣ ಜಾಗ ವಿಸ್ತರಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷ ನಂಜುಂಡಸ್ವಾಮಿ, ರಮೇಶ್ ಕುಮಾರ್, ನಿವೃತ್ತ ಶಿಕ್ಷಕ ಮೋಹನ್ ರಾಜ್, ಗಂಗಾಧರ್, ಎಂಜಿನಿಯರ್ ಸುಪ್ರೀತ್, ಪಿಡಿಒ ಪ್ರಭಾಕರ್, ಮುಖಂಡರಾದ ನಂಜುಂಡೇಗೌಡ, ಚಿಕ್ಕ ಬಸವಪ್ಪ, ಪರಶಿವಮೂರ್ತಿ, ಅಂಕನಾಯಕ, ಚಾಮರಾಜು, ಮುದ್ದು ಮಲ್ಲಯ್ಯ, ಮಲ್ಲೇಶ್, ನಂದೀಶ್, ಕಾಮಿಸ್ವಾಮಿ, ಮಹದೇವ, ಕಂದೇಗಾಲ ಶಿವರಾಜು, ಯಜಮಾನರಾದ ಗೋಪಾಲಯ್ಯ, ಮಹಾದೇವ, ಶಟ್ಟಯ್ಯ, ಹುಚ್ಚಯ್ಯ, ಮಹೇಶ್, ಚನ್ನನಾಯಕ, ಭವನ ಜಾಗದ ದಾನಿಗಳಾದ ಚನ್ನನಾಯಕ ವೆಂಕಟನಾಯಕ, ಸಹಾಯಕ ನಿರ್ದೇಶಕ ರಮೇಶ್, ಮುನಿ ಕುಮಾರ್, ಗೋಪಾಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುಸ್ತಕಗಳಿಗೆ ಸೂಕ್ತ ಮಾರುಕಟ್ಟೆ ರೂಪಿಸಿಲ್ಲ
ಅಭಿವೃದ್ಧಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ತರವಾದದ್ದು