ಕನ್ನಡಪ್ರಭ ವಾರ್ತೆ ಮೈಸೂರು
- ಹೀಗೆ ಸಂತಸ ಹಂಚಿಕೊಂಡವರು ಸತತ 5ನೇ ಬಾರಿ ಚಿನ್ನದ ಅಂಬಾರಿಯನ್ನು ಅಭಿಮನ್ಯು ಆನೆ ಮೇಲೆ ಹೊರಿಸಿದ ಮಾವುತ ವಸಂತ. ಅಂಬಾರಿ ಹೊತ್ತ ಆನೆ ಮೇಲಿಂದ ಜಂಬೂಸವಾರಿಯಲ್ಲಿ ತಾನು ಕಂಡಂತಹ ದೃಶ್ಯಾವಳಿಗಳನ್ನು ಮೇಲಿನಂತೆ ವಿವರಿಸಿದರು.
ಮೈಸೂರು ಅರಮನೆ ಆವರಣದ ಆನೆ ಬಿಡಾರದಲ್ಲಿ ಭಾನುವಾರ ಖುಷಿಯಿಂದ ಓಡಾಡಿಕೊಂಡಿದ್ದ ಮಾವುತ ವಸಂತ ಅವರ ಮುಖದಲ್ಲಿ ಜಂಬೂಸವಾರಿ ಯಶಸ್ವಿಗೊಳಿಸಿದ ಸಾರ್ಥಕತೆ ಇತ್ತು. ದಸರಾ ವಿಜಯದಶಮಿ ಮೆರವಣಿಗೆಯಲ್ಲಿ ಅಭಿಮನ್ಯು ಅಂಬಾರಿ ಹೊತ್ತು ಕರ್ನಾಟಕದಲ್ಲೇ ಮಾತ್ರವಲ್ಲದೇ ಇಡೀ ಇಂಡಿಯಾದಲ್ಲೇ ಫೇಮಸ್ ಆಗಿದೆ ಎಂದು ವಸಂತ ಹರ್ಷ ವ್ಯಕ್ತಪಡಿಸಿದರು.ಕೊರೋನಾ ಕಾರಣ 2020 ಮತ್ತು 2021ನೇ ಸಾಲಿನಲ್ಲಿ ಅರಮನೆ ಆವರಣದಲ್ಲೇ ಅಭಿಮನ್ಯು ಮೇಲೆ ಅಂಬಾರಿ ಹೊರಿಸಿದೆ. ಕಳೆದ 3 ವರ್ಷಗಳಿಂದ ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಅರಮನೆಯಿಂದ ಬನ್ನಿಮಂಟಪದವರೆಗೆ ಮೆರವಣಿಗೆಯಲ್ಲಿ ಅಂಬಾರಿ ಹೊರಿಸಿದ್ದೇನೆ ಎಂದರು.
ಮೈಸೂರಿಗೆ ಕರೆದುಕೊಂಡು ಬಂದಾಗಲೇ ಅಭಿಮನ್ಯು ಆನೆಗೆ ಯಾವ ಕಾರಣಕ್ಕಾಗಿ ಇಲ್ಲಿಗೆ ಬಂದಿದ್ದೇವೇ ಎಂಬುದು ಗೊತ್ತು. ಹೀಗಾಗಿ, ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ. ಅಂಬಾರಿ ಹೊರಿಸುವ ಮುನ್ನ ಆಯುಧಪೂಜೆ ದಿನದಂದು ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಬಂದಿದ್ದೇವು. ಚಾಮುಂಡೇಶ್ವರಿ ಆಶೀರ್ವಾದದಿಂದ ಜಂಬೂಸವಾರಿ ಯಶಸ್ವಿಯಾಗಿ ನೆರವೇರಿದೆ ಎಂದರು.
ಅಂಬಾರಿ ಹೊತ್ತು ಬನ್ನಿಮಂಟಪ ತಲುಪಿದ ಅಭಿಮನ್ಯು ಆನೆಯನ್ನು ವಾಪಸ್ ಅರಮನೆಗೆ ಕರೆತಂದು ಬಿಸಿ ನೀರು ಸ್ನಾನ ಮಾಡಿಸಿ, ವಿಶೇಷವಾದ ಅವಲಕ್ಕಿ ಕುಸುರೆಯನ್ನು ನೀಡಿದ್ದೇವೆ. ಅಂಬಾರಿ ಹೊತ್ತ ಬಳಿಕ ಅಭಿಮನ್ಯು ರಿಲ್ಯಾಕ್ಸ್ ಆಗಿದೆ ಎಂದು ವಸಂತ ಸಾರ್ಥಕಭಾವದಿಂದ ನುಡಿದರು.