ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ಇಲ್ಲಿನ ಹಳೇಯೂರು ಆಂಜನೇಯ ದೇವಸ್ಥಾನದ ಬಳಿ ತೆಂಗಿನಕಾಯಿ ‘ಈಡುಗಾಯಿ’ ಒಡೆಯುವ ವಿಶೇಷ ಚಳುವಳಿ ವೇಳೆ ಮಾತನಾಡಿದ ಅವರು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಳು ಇವೆಂಟ್ ಮ್ಯಾನೇಜರ್ಗಳಂತೆ ವರ್ತಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಶಾಪದಿಂದ ಮುಕ್ತಿ ಸಿಗಲಿ ಹಾಗೂ ದಕ್ಷ ಅಧಿಕಾರಿಗಳು ಜಿಲ್ಲೆಗೆ ಬರಲಿ ಎಂದು ನಾವು ಭಗವಂತನಿಗೆ ಇಡುಗಾಯಿ ಸೇವೆ ಸಲ್ಲಿಸಿದ್ದೇವೆ, ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಲ್ಲಿಕಾರ್ಜುನ್ ಅವರನ್ನು ಬಂಧಿಸಿ ಕರೆದೊಯ್ದರು. ಸಂಜೆ ಬಿಡುಗಡೆ ನಂತರ ಮಾತನಾಡಿದ ಅವರು ಪೊಲೀಸರ ದಬ್ಬಾಳಿಕೆಗೆ ಹೆದರಲ್ಲ. ಇದು ಗೃಹ ಸಚಿವರ ಆದೇಶದಿಂದಾಗಿರುವ ಘಟನೆ. ಇಂತಹ 100 ಕೇಸು ಹಾಕಿದರೂ ಹೋರಾಟ ನಿರಂತರ ಎಂದು ಕಿಡಿ ಕಾರಿದರು. ಈ ಸಂದರ್ಭದಲ್ಲಿ ಕೆ ಆರ್ ಎಸ್ ಪಕ್ಷದ ಮುಖಂಡ ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.