ಹೆಣ್ಣು ಸುಶಿಕ್ಷಿತಳಾದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಡಿವೈಎಸ್ಪಿ ಮೋಹನ್‌

KannadaprabhaNewsNetwork |  
Published : Jun 14, 2026, 01:45 AM IST
ಚಾಮರಾಜನಗರದ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲಿ ಉಚಿತ ಬಸ್‌ ಪಾಸ್‌ ಶನಿವಾರ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷ ಹೊಂಗನೂರು ಚಂದ್ರು ಸಾಂಕೇತಿಕವಾಗಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಯುವ ಪೀಳಿಗೆ ಮಾದಕ ವಸ್ತುಗಳಿಂದ ದೂರವಿರಬೇಕು. ಈ ನಿಟ್ಟಿನಲ್ಲಿ ಮಹಿಳಾ ಸಂಘದವರಿಗೆ ಮಾದಕ ವಸ್ತುಗಳ ಜಾಲದ ಕುರಿತು ಮಾಹಿತಿ ನೀಡಿದರೆ, ನಾವು ನಿಮ್ಮ ಹೆಸರನ್ನು ಬಹಿರಂಗಪಡಿಸದೆ ದಿಟ್ಟ ಕ್ರಮವಹಿಸುತ್ತೇವೆ. ಆನ್‌ಲೈನ್‌ನಲ್ಲಿ ವಂಚನೆಗೊಳಗಾದ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಎಂದು ಡಿವೈಎಸ್ಪಿ ಮೋಹನ್ ಹೇಳಿದರು.

ಕೊಳ್ಳೇಗಾಲದಲ್ಲಿ ಸಾಮಾಜಿಕ ಆರ್ಥಿಕ ಅಭಿವೃದ್ಧಿ ವರ್ಕ್‌ಶಾಪ್‌

---

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಯುವ ಪೀಳಿಗೆ ಮಾದಕ ವಸ್ತುಗಳಿಂದ ದೂರವಿರಬೇಕು. ಈ ನಿಟ್ಟಿನಲ್ಲಿ ಮಹಿಳಾ ಸಂಘದವರಿಗೆ ಮಾದಕ ವಸ್ತುಗಳ ಜಾಲದ ಕುರಿತು ಮಾಹಿತಿ ನೀಡಿದರೆ, ನಾವು ನಿಮ್ಮ ಹೆಸರನ್ನು ಬಹಿರಂಗಪಡಿಸದೆ ದಿಟ್ಟ ಕ್ರಮವಹಿಸುತ್ತೇವೆ. ಆನ್‌ಲೈನ್‌ನಲ್ಲಿ ವಂಚನೆಗೊಳಗಾದ ತಕ್ಷಣ 1930 ಸಂಖ್ಯೆಗೆ ಕರೆ ಮಾಡಿ ಎಂದು ಡಿವೈಎಸ್ಪಿ ಮೋಹನ್ ಹೇಳಿದರು.

ಕ್ರೆಡಿಟ್ ಆ್ಯಕ್ಸಿಸ್‌ ಗ್ರಾಮೀಣ ಲಿಮಿಟೆಡ್ ಕೊಳ್ಳೇಗಾಲ ಶಾಖೆಯಿಂದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಸ್ತ್ರೀಯರು ಪೋನ್ ಬಳಸುವಾಗ ಜಾಗೃತೆ ವಹಿಸಿ, ಪೋನ್‌ಗಳಿಗೂ ಕಿವಿಯಿದೆ ಎಂಬ ಸತ್ಯವನ್ನು ಅರಿತು ಬಳಕೆ ವೇಳೆ ಜಾಗೃತರಾಗಿರಿ ಎಂದು ಕಿವಿಮಾತು ಹೇಳಿದರು.

ಸಮಾಜದ ಅಭಿವೃದ್ಧಿಯಲ್ಲಿ ಆರ್ಥಿಕ ಸಬಲೀಕರಣ ಪ್ರಮುಖ ಪಾತ್ರ ವಹಿಸುತ್ತದೆ. ಅದರೊಂದಿಗೆ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಜಾಗೃತಿಯೂ ಅಗತ್ಯವಾಗಿದ್ದು, ಇಂಥ ಕಾರ್ಯಾಗಾರಗಳು ಜನರಲ್ಲಿ ಅರಿವು ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ ಎಂದರು.

ಅಪರಿಚಿತರು ನಿಮ್ಮ ಹಿಂಬಾಲಿಸುತ್ತಿದ್ದಾರೆ ಎಂಬುದನ್ನು ಗಮನಿಸಿ ಜಾಗೃತರಾಗಿ, ಕೆಲವರು ನಿಮ್ಮನ್ನು ಹಿಂಬಾಲಿಸಿ ಅಮಾಯಕರಂತೆ ನಂಬಿಸಿ ನಿಮ್ಮ ಚಿನ್ನಾಭರಣ ದೋಚುವ ಸಾಧ್ಯತೆ ಇರುವ ಕಾರಣ ಬಹಳ ಎಚ್ಚರಿಕೆಯಿಂದಿರಿ. ಅಪರಾಧ ಪ್ರಕರಣಗಳ ಬಗ್ಗೆ ನಿಮಗೆ ವಿಚಾರ ತಿಳಿದರೆ ಮಾಹಿತಿ ಇಲಾಖೆಗೆ ನೀಡಿದರೆ ನಿಮ್ಮ ಹೆಸರನ್ನು ಗೌಪ್ಯವಾಗಿಡಲಾಗುವುದು. ನೀವು 3 ದಿನಗಳ ಕಾಲ ಹೊರಗಡೆ ಹೋದಾಗ ಸಂಬಂಧಿಸಿದ ಅಕ್ಕಪಕ್ಕದವರಿಗೆ ಮಾಹಿತಿ ನೀಡಿ ತೆರಳಿ, ಸಮೀಪದ ಪೊಲೀಸ್ ಠಾಣೆಗೆ ಸಹ ಮಾಹಿತಿ ನೀಡಿ ತೆರಳುವುದು ಸೂಕ್ತ ಎಂದು ಸಲಹೆ ನೀಡಿದರು.

ನಾಗರಿಕರು ನಿಮ್ಮ ಸಮಸ್ಯೆಗಳಿದ್ದಲ್ಲಿ ಮನೆ ಮನೆ ಬೀಟ್ ಪೊಲೀಸರ ಬಳಿ ಹೇಳಿ ಬಗೆಹರಿಸಿಕೊಳ್ಳಿ, ಮಹಿಳೆಯರು ಕಲಿತರೆ ಶಾಲೆ ತೆರೆದಂತೆ ಎಂಬ ಮಾತಿನಂತೆ, ಒಬ್ಬ ಕಲಿತ ಹೆಣ್ಣು ಮಗಳು ಮನೆಯಲ್ಲಿದ್ದರೆ ಆ ಮನೆ, ಸಮಾಜ ಸುಶಿಕ್ಷಿತವಾಗಿರಲಿದೆ ಎಂದರು.

ಈ ವೇಳೆ ಸಮುದಾಯ ಆರೋಗ್ಯಾಧಿಕಾರಿ ವರದರಾಜು, ಪ್ರಾಥಮಿಕ ಆರೋಗ್ಯ ಅಧಿಕಾರಿ ಅಂಜಲಿ, ಗ್ರಾಮೀಣ ಲಿಮಿಟೆಡ್ ಪ್ರಾದೇಶಿಕ ವ್ಯವಸ್ಥಾಪಕ ಮುತ್ತುರಾಜು, ವಲಯ ವ್ಯವಸ್ಥಾಪಕ ಕೃಷ್ಣ, ಸಂದೇಶ, ಸುರೇಶ್, ಕಿರಣ್, ಅಶ್ವಥ್, ಉಮೇಶ್, ಸೋಮೇಶ್, ರಂಗರಾಜು, ಮಾದೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತಪಟ್ಟಿ ಪರಿಷ್ಕರಣೆಗೆ ಸಹಕರಿಸಿ: ಡಾ.ಸಿದ್ದರಾಮಯ್ಯ
ಕ್ಷೇತ್ರದ ಅಭಿವೃದ್ಧಿಯೇ ನನ್ನ ಉದ್ದೇಶ ಎಂದ ಶಾಸಕ ಸಿಮೆಂಟ್ ಮಂಜು