ಕನ್ನಡಪ್ರಭ ವಾರ್ತೆ ಆನವಟ್ಟಿ
ಆನವಟ್ಟಿಯ ವೀರಶೈವ ಸಮುದಾಯ ಭವನದಲ್ಲಿ ಮಂಗಳವಾರ ತಾಲೂಕು ಹಾಗೂ ಜಿಲ್ಲಾ ವೀರಶೈವ ಮಹಿಳಾ ಘಟಕದ ಆಶ್ರಯದ ಮಹಿಳಾ ದಿನಾಚರಣೆ ಹಾಗೂ ವಿವಿಧ ಕ್ಷೇತ್ರದ ಸಾಧಕಿಯರಿಗೆ ಸನ್ಮಾನ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
ಹೆಣ್ಣುಮಕ್ಕಳಿಗೆ ಮದುವೆ ಮಾಡಿದರೇ ಮುಗಿಯಿತು ಎಂಬ ತಾತ್ಸರದ ಭಾವನೆ ಬಿಟ್ಟು, ಅವಳಿಗೆ ಉನ್ನತ ಶಿಕ್ಷಣ ಕಲಿಸಬೇಕು. ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆಗೆ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಕೆಲವರು 18 ವಯಸ್ಸು ಆಗುವುದರೊಳಗೆ ಮದುವೆ ಮಾಡುತ್ತಾರೆ. ಸಮಾಜ ಅರಿತುಕೊಳ್ಳುವ ಮೊದಲೇ ಸಂಸಾರ ನೌಕೆಗೆ ಹೆಣ್ಣುಮಕ್ಕಳನ್ನು ನೂಕಿದರೇ ಹೇಗೆ ಜೀವನ ನಡೆಸುತ್ತಾರೆ. ಪೋಷಕರು ಮಗಳ ಮನಸ್ಥಿತಿಯನ್ನು ಅರಿಯುವ ಜೊತೆಗೆ ಕಾನೂನನ್ನು ಪರಿಪಾಲಿಸಬೇಕು ಎಂದರು.ಕವಿಯತ್ರಿ ರೇಣುಕಮ್ಮ ಗೌಳಿ ಅವರು 12ನೇ ಶತಮಾನದಿಂದ ಇಂದಿನವರೆಗೂ ವಿವಿಧ ರೂಪದಲ್ಲಿ ಹೆಣ್ಣಿನ ಮಹತ್ವ ಕುರಿತು ಉಪನ್ಯಾಸ ಹಾಗೂ ಕವನಗಳನ್ನು ಹೇಳಿದರು.
ಹೆರಿಗೆಗಾಗಿ, ಗರ್ಭಿಣಿಯರು ದೂರದ ತಾಲೂಕುಗಳಿಗೆ ಹೋಗಬೇಕಾಗಿತ್ತು. ಅದನ್ನು ತಪ್ಪಿಸಿ ಆನವಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಜೇರಿನ್ ವ್ಯವಸ್ಥೆ ಕಲ್ಪಿಸಿಕೊಂಡು, ತಿಂಗಳಿಗೆ ಅಂದಾಜು 25 ಹೆರಿಗೆ ಮಾಡಿಸುವ ಮೂಲಕ ಗ್ರಾಮೀಣ ಮಹಿಳೆಯರಿಗೆ ವರವಾಗಿರುವ ಪ್ರಸೂತಿ ತಜ್ಞೆ ಸುಪ್ರಿಯಾ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ, ಹೆಡ್ ನರ್ಸ್ ಸುನೀತಾ ಡಿಸೋಜಾ, ಗಣಿತ ಶಿಕ್ಷಕಿ ರೇಷ್ಮಾ ಕಿಣಿ, ಪೌರಕಾರ್ಮಿಕ ಮಹಿಳೆ ನಾಗಮ್ಮ ಅವರನ್ನು ಗೌರವಿಸಲಾಯಿತು.
- - --19ಎಎನ್ಟಿ1ಇಪಿ:
ಆನವಟ್ಟಿ ವೀರಶೈವ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕಿಯರನ್ನು ಸನ್ಮಾನಿಸಲಾಯಿತು.