ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಚನ್ನಕೇಶವ ಸಭಾಂಗಣದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ. ಬೇಲೂರು ರಘುನಂದನ್ ಅಭಿನಂದನಾ ಸಮಿತಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೇಲೂರು ಮತ್ತಷ್ಟು ಧೃಡಗೊಳ್ಳಬೇಕಿದೆ. ಸಾಹಿತ್ಯದ ಕಡೆಗಿನ ನಿರಾಸಕ್ತಿ ಸಮಾಜದ ಸ್ವಾಸ್ಥ್ಯವನ್ನು ಪುನರ್ ಸ್ಥಾಪಿಸುವಿಕೆಯಲ್ಲಿ ತೊಡಕ್ಕುಂಟು ಮಾಡುತ್ತದೆ ಎಂಬ ಕಿವಿಮಾತಿನೊಟ್ಟಿಗೆ ಸಾಂಸ್ಕೃತಿಕ, ರಾಜಕೀಯದಾಚೆ ಸಾಹಿತ್ಯ ಮತ್ತು ಸಂಸ್ಕೃತಿ ಕಟ್ಟುವ ಕೆಲಸವನ್ನು ಬೇಲೂರು ಸಮರ್ಥವಾಗಿ ನಿರ್ವಹಿಸಲು ಕಂಕಣಬದ್ಧರಾಗುವಂತೆ ಕರೆ ನೀಡಿದರು.ಬೇಲೂರು ರಘುನಂದನ್ ರವರು ವಾಸ್ತವಿಕ ನೆಲೆಗಟ್ಟಿನಲ್ಲಿ ಸಾಹಿತ್ಯ ರಚಿಸುವ ಕವಿ. ಸಮಾಜದ ನಿರೀಕ್ಷೆಗಳ ಜ್ವಲಂತ ಸಾಕ್ಷಿಗಳಾಗಿ ನಾಟಕ ಹೆಣೆಯುವ ಪ್ರೌಢ ಸಾಹಿತಿ ಮತ್ತು ತನ್ನ ತಾಯಿನೆಲಕ್ಕೆ ತನ್ಮೂಲಕ ಸಲ್ಲುವ ಕೀರ್ತಿಯನ್ನು ಶ್ರದ್ಧಾ ಪೂರ್ವಕವಾಗಿ ನೀಡಲು ಹಪಹಪಿಸುತ್ತಿರುವ ಭಾವನಾಜೀವಿ ಎಂಬುದನ್ನು ಅವರ ಸಹೃದಯತೆಯ ಹಲವು ಮಜಲುಗಳನ್ನು ಅನಾವರಣಗೊಳಿಸುವ ಮುಖೇನ ಸಾಕ್ಷೀಕರಿಸಿದ್ದಾರೆ ಎಂದರು.
ಸಾಹಿತಿ, ಸಮಾಜಮುಖಿ ಚಿಂತಕರು, ೯ನೇ ಬೇಲೂರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರು ಆಗಿದ್ದ ಇಂದಿರಮ್ಮನವರು ಮಾತನಾಡಿ, ಬೇಲೂರಿನ ನಮ್ಮ ರಘು ದೇಶವೇ ತಿರುಗಿನೋಡುವ ಮಟ್ಟಕ್ಕೆ ಬೆಳೆದಿರುವುದು ಹೆಮ್ಮೆಯ ವಿಚಾರ. ತನ್ನ ಪ್ರತಿಭೆಯ ಮೇಲೆ ತನಗಿರುವ ಅಚಲ ನಂಬಿಕೆ, ಸತತ ಅಧ್ಯಯನ, ಗುರಿಯತ್ತ ನಡೆಸಿದ ಹಠಭರಿತ ಪರಿಶ್ರಮ, ಅಗಾಧವಾದ ಜೀವನ ಚೈತನ್ಯ ಮತ್ತು ಸಾಧಿಸುವ ಛಲ ಇಂದು ಅವರನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ. ನಾವು ಕಂಡ ರಘು ಇಂದು ದೇಶಾದ್ಯಂತ ರಘುನಂದನ್ ಆಗುವ ಜೊತೆಗೆ ತನ್ನೊಂದಿಗೆ ಬೇಲೂರಿನ ಹಿರಿಮೆಯನ್ನು ಬೆಳೆಸುತ್ತಿರುವುದು ಪ್ರಶಂಸನೀಯವೆಂದು ತಿಳಿಸಿದರು.
ಡಾ. ಬೇಲೂರು ರಘುನಂದನ್ ಅಭಿನಂದನಾ ಸಮಿತಿಯ ಅಧ್ಯಕ್ಷ, ಮಾಜಿ ಪುರಸಭೆ ಅಧ್ಯಕ್ಷ, ಶ್ರೀ ಸಿ.ಎನ್ ದಾನಿಯವರು ಮಾತನಾಡಿ, ತಮ್ಮ ಶಿಕ್ಷಕರಾಗಿ ಕಂಡಿದ್ದ ರಘುನಂದನ್ ರವರು ಇಂದಿನ ಶ್ರೇಷ್ಠ ಕವಿ, ಸಾಹಿತಿ, ನಾಟಕಕಾರ, ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ರಂಗಸಾಹಿತ್ಯದ ರಚನಕಾರ ಮತ್ತು ಗಾಯಕನಾಗಿಯೂ ತಮ್ಮ ಅಖಂಡ ಪ್ರತಿಭೆಯನ್ನು ದೇಶಾದ್ಯಂತ ಪಸರಿಸುವಾಗ ಅವರ ಶಿಷ್ಯರಾದ ನಮಗೆ ಧನ್ಯಭಾವ ಮೂಡುತ್ತಿದೆ. ಇವರಿಂದ ಮತ್ತಷ್ಟು ಸಾಹಿತ್ಯ ರಚಿತವಾಗಲಿ, ಅವು ವಿಶ್ವ ಮಾನ್ಯ ಕೀರ್ತಿಗೆ ಭಾಜನವಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬೇಲೂರು ಕಸಾಪದ ಮಾಜಿ ಅದ್ಯಕ್ಷ ಶ್ರೀ ರಾಜೇಗೌಡ, ಸಾಹಿತಿಗಳಾದ ಶ್ರೀ ಹಾಡ್ಲಹಳ್ಳಿ ನಾಗರಾಜ್ , ಸಾಹಿತಿಗಳಾದ ಶ್ರೀಮತಿ ದಯಾಗಂಗನಘಟ್ಟ, ಹಿರಿಯರಾದ ಮಾ.ಶಿವಮೂರ್ತಿಯವರು ಉಪಸ್ಥಿತಿ ಇದ್ದರು.