ಸಮಸ್ಯೆಗಳಿದ್ದರೆ ಫೇಸ್‌ಬುಕ್‌, ವಾಟ್ಸಾಪ್‌ಗೆ ಹಾಕಿ

KannadaprabhaNewsNetwork |  
Published : Jun 18, 2025, 11:49 PM IST
ಸಮಸ್ಯೆಗಳಿದ್ದರೆ,ಫೇಸ್‌ ಬುಕ್‌,ವಾಟ್ಸಾಪ್‌ಗೆ ಹಾಕಿ | Kannada Prabha

ಸಾರಾಂಶ

ಪುರಸಭೆ ವ್ಯಾಪ್ತಿಯಲ್ಲಿ ಕಸ, ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆ ಎದುರಾದರೆ ಇನ್ಮುಂದೆ ಪುರಸಭೆ ಕಚೇರಿಗೆ ನಾಗರಿಕರು ಅಲೆಯುವುದನ್ನು ತಪ್ಪಿಸಲು ಪುರಸಭೆ ನೂತನ ಮುಖ್ಯಾಧಿಕಾರಿ ಎಸ್.ಶರವಣ ಫೇಸ್‌ ಬುಕ್‌ ಹಾಗೂ ವಾಟ್ಸಾಪ್‌ಗೆ ಮಾಹಿತಿ ನೀಡಿದರೆ ಸಮಸ್ಯೆಗೆ ಸ್ಪಂದಿಸಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ರಂಗೂಪುರ ಶಿವಕುಮಾರ್‌

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪುರಸಭೆ ವ್ಯಾಪ್ತಿಯಲ್ಲಿ ಕಸ, ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇನ್ನಿತರ ಮೂಲಭೂತ ಸಮಸ್ಯೆ ಎದುರಾದರೆ ಇನ್ಮುಂದೆ ಪುರಸಭೆ ಕಚೇರಿಗೆ ನಾಗರಿಕರು ಅಲೆಯುವುದನ್ನು ತಪ್ಪಿಸಲು ಪುರಸಭೆ ನೂತನ ಮುಖ್ಯಾಧಿಕಾರಿ ಎಸ್.ಶರವಣ ಫೇಸ್‌ ಬುಕ್‌ ಹಾಗೂ ವಾಟ್ಸಾಪ್‌ಗೆ ಮಾಹಿತಿ ನೀಡಿದರೆ ಸಮಸ್ಯೆಗೆ ಸ್ಪಂದಿಸಲು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.ʼಸ್ವಚ್ಛ ಗುಂಡ್ಲುಪೇಟೆʼ ಎಂಬ ಫೇಸ್‌ ಬುಕ್‌ ಖಾತೆಯ ಜೊತೆಗೆ ʼವಾಟ್ಸಾಪ್‌ ನಂಬರ್‌ʼ ತೆರೆದು ಪಟ್ಟಣದ ನಾಗರೀಕರಿಗೆ ಕೊಡಲು ಸಿದ್ದತೆಯನ್ನು ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ನಡೆಸಿದ್ದಾರೆ.

ಪಟ್ಟಣದಲ್ಲಿ ಕುಡಿವ ನೀರಿನ ಸಮಸ್ಯೆ, ಬೀದಿ ದೀಪ ಕೆಟ್ಟಿರುವುದು ಮತ್ತು ಹಗಲು ಉರಿಯುವುದು, ಕಸ ಬಿದ್ದಿರುವುದು, ನೀರಿನ ಪೈಪ್‌ ಒಡೆದು ನೀರು ಪೋಲಾಗುವುದು, ಚರಂಡಿ ತುಂಬಿರುವುದು, ಸ್ವಚ್ಛತೆ ಇಲ್ಲದಿರುವುದು ಇನ್ನಿತರ ಸಮಸ್ಯೆಗಳನ್ನು ಸಾರ್ವಜನಿಕರು ಸ್ವಚ್ಛ ಗುಂಡ್ಲುಪೇಟೆ ಫೇಸ್‌ ಬುಕ್‌ ಖಾತೆ ಹಾಗು ವಾಟ್ಸಾಪ್‌ ನಂಬರಿಗೆ ಸಂದೇಶ ಕಳುಹಿಸಿದರೆ ೨೪ ಗಂಟೆ ಅಥವಾ ಮೂರು ದಿನಗಳಲ್ಲಿ ಸಮಸ್ಯೆಗಳಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಪುರಸಭೆ ಮುಖ್ಯಾಧಿಕಾರಿ ಮುಂದಾಗಿದ್ದಾರೆ.ಸಮಸ್ಯೆಗಳ ಜೊತೆಗೆ ಪಟ್ಟಣದ ಸ್ವಚ್ಛತೆಗೆ ಹೆಚ್ಚು ಗಮನ ಹರಿಸಲು ಹೊಸ ಸಲಹೆ ಸೂಚನೆಗಳನ್ನು ಪಟ್ಟಣದ ನಾಗರಿಕರು ನೀಡಲಿ ಎಂದು ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ಕನ್ನಡಪ್ರಭಕ್ಕೆ ತಿಳಿಸಿದರು.

ಪ್ಲಾಸ್ಟಿಕ್‌ ತ್ಯಜಿಸಲಿ:ಪಟ್ಟಣದ ನಾಗರಿಕರು ಹಾಗೂ ವರ್ತಕರು ನಿಗದಿತ ಪ್ರಮಾಣದ ಪ್ಲಾಸ್ಟಿಕ್‌ ಬಳಸಲಿ ಆದರೆ ಕಡಿಮೆ ಗುಣ ಮಟ್ಟದ ಪ್ಲಾಸ್ಟಿಕ್‌ ಬಳಸಬೇಡಿ, ಸಾರ್ವಜನಿಕರು ಪ್ಲಾಸ್ಟಿಕ್‌ ಬದಲು ಬಟ್ಟೆ ಬ್ಯಾಗ್‌ ಬಳಸಿ ಪ್ಲಾಸ್ಟಿಕ್‌ ಮುಕ್ತ ಮಾಡಲು ಪುರಸಭೆಯೊಂದಿಗೆ ಸಹಕರಿಸಲಿ ಎಂದರು. ಪಟ್ಟಣದ ನಾಗರಿಕರು ಮನೆಯ ಕಸವನ್ನು ವಿಂಗಡಿಸಿ, ಒಣ ಮತ್ತು ಹಸಿ ಕಸ ಬೇರ್ಪಡಿಸಿ ಮನೆ ಮುಂದೆ ಬರುವ ಕಸ ಸಾಗಿಸುವ ವಾಹನಕ್ಕೆ ನೀಡುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಫೇಸ್‌ಬುಕ್‌ ಹಾಗೂ ವಾಟ್ಸಾಪ್‌ಗೆ ಪುರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಸಂದೇಶದ ಮೂಲಕ ಗಮನಕ್ಕೆ ತಂದರೆ ಮೂರ್ನಾಲ್ಕು ದಿನಗಳಲ್ಲಿ ಬಗೆ ಹರಿಸುವ ಕೆಲಸ ಮಾಡುತ್ತದೆ. ಈ ಹೊಸ ಪ್ರಯೋಗಕ್ಕೆ ಪಟ್ಟಣದ ನಾಗರಿಕರು ಸಹಕರಿಸಲಿ.

-ಎಸ್.ಶರವಣ, ಮುಖ್ಯಾಧಿಕಾರಿ, ಪುರಸಭೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ