ತಾಕತ್ತಿದ್ರೆ ವಿಜಯೇಂದ್ರಗೆ ಇಳಿಸಲಿ: ರೇಣುಚಾರ್ಯ ಸವಾಲು

KannadaprabhaNewsNetwork |  
Published : Jan 17, 2025, 12:46 AM IST
16ಕೆಡಿವಿಜಿ1, 2, 3-ದಾವಣಗೆರೆಯಲ್ಲಿ ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಜನ್ಮದಿನಕ್ಕೆ ಶುಭಾರೈಸಿ ಸನ್ಮಾನಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಇತರರು. | Kannada Prabha

ಸಾರಾಂಶ

If you have the strength, let it be given to Vijayendra: Renucharya challenges

-ಯಾವ ದೊಣ್ಣೆ ನಾಯಕ ಅಂತಾ ಮಾತಾಡ್ತೀ । ಯತ್ನಾಳ್, ಜಾರಕಿಹೊಳಿ ವಿರುದ್ಧವೂ ರೇಣುಕಾಚಾರ್ಯ ವಾಗ್ದಾಳಿ

-----

ಕನ್ನಡಪ್ರಭ ವಾರ್ತೆ ದಾವಣಗೆರೆ

ಸೂರ್ಯ-ಚಂದ್ರರಿರುವುದು ಎಷ್ಟು ಸತ್ಯವೋ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದೂ ಅಷ್ಟೇ ಸತ್ಯ. ತಾಕತ್ತಿದ್ದರೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸಲಿ ನೋಡೋಣ ಎಂದು ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿಗೆ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.

ನಗರದಲ್ಲಿ ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಜನ್ಮದಿನಕ್ಕೆ ಶುಭಾರೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸವಾಲು ಹಾಕುತ್ತೇನೆ. ನಿಮಗೆ ತಾಕತ್ತಿದ್ದರೆ ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನಿದಂದ ಇಳಿಸಿ ನೋಡೋಣ ಎಂದರು.

ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ ಬಿ.ಎಸ್‌.ಯಡಿಯೂರಪ್ಪ ಬಗ್ಗೆ ಮಾತನಾಡಿದರೆ ಸಹಿಸುವುದಿಲ್ಲ. ವಿಜಯೇಂದ್ರಗೆ ರಾಜ್ಯಾಧ್ಯಕ್ಷನನ್ನಾಗಿ ಮಾಡಿದ್ದು ಯಡಿಯೂರಪ್ಪ ಮಗ ಅನ್ನೋ ಕಾರಣಕ್ಕಾಗಿ ಅಲ್ಲ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್‌ ವಿಜಯೇಂದ್ರಗೆ ರಾಜ್ಯಾಧ್ಯಕ್ಷರಾಗಿ ಮಾಡಿದ್ದೇ ಹೊರತು, ನಾನು, ನೀವುಗಳಲ್ಲ ಎಂದು ಅವರು ತಿರುಗೇಟು ನೀಡಿದರು.

ವಿಧಾನಸಭೆ ಚುನಾವಣೆ-2023ರಲ್ಲಿ ಬಿಜೆಪಿ ಹೀನಾಯ ಸೋತಾಗ ಮರುಭೂಮಿಯಲ್ಲಿ ಓಯಸಿಸ್‌ ಸಿಕ್ಕಂತೆ ಉತ್ಸಾಹಿ ಯುವ ನಾಯಕ ವಿಜಯೇಂದ್ರ ಪಕ್ಷದ ನಾಯಕ ಕಣ್ಣಿಗೆ ಬಿದ್ದರು. ಪಕ್ಷ ಕ್ಕೊಂದು ಎನರ್ಜಿ, ಬೂಸ್ಟ್‌ ಬೇಕಿತ್ತು. ಅಂತಹ ಕೆಲಸವನ್ನು ವಿಜಯೇಂದ್ರ ಮೂಲಕ ವರಿಷ್ಟರು ಮಾಡಿದರು. 66 ಬಿಜೆಪಿ ಶಾಸಕರು ವಿಧಾನಸೌಧದೊಳಗಿದ್ದಾರೆ. ಇನ್ನೂ 148 ಜನ ಮಾಜಿ ಸಚಿವರು, ಮಾಜಿ ಶಾಸಕರು, ಪರಾಜಿತರು ನಾವು ಹೊರಗಿದ್ದೇವೆ. ನಾವೆಲ್ಲರೂ ಸೇರಿಯೇ ಸರ್ಕಾರ ರಚಿಸುವ ನಿರ್ಧಾರ ಮಾಡುತ್ತೇವೆ ಎಂದು ಅವರು ಹೇಳಿದರು.

------....ಬಾಕ್ಸ್....

ನಮ್ಮಶಕ್ತಿ, ಸಾಮರ್ಥ್ಯ, ವರ್ಚಸ್ಸು ಕುಂದಿಲ್ಲ: ರೇಣುಕಾರ್ಯ

ನಮ್ಮ ಶಕ್ತಿ, ಸಾಮರ್ಥ್ಯ, ವರ್ಚಸ್ಸು ಕಡಿಮೆಯಾಗಿಲ್ಲ. 17 ಜನ ಕರೆ ಮಾಡಿದ್ದರು ಅಂತಾ ಯಾರೋ ಮಹಾನ್‌ ನಾಯಕ ಹೇಳಿದ್ದಾನೆ. ನೀನು ಯಾವ ದೊಣ್ಣೆ ನಾಯಕ ಅಂತಾ ಹೇಳ್ತಿಯಾ? ನಿನಗೆ ಯಾರು ಕರೆ ಮಾಡಿದ್ದರು? ನೀನು ಯಾವ ದೊಣ್ಣೆ ನಾಯಕ ಅಂತಾ ನಿನ್ನ ಅನುಮತಿ ಪಡೆಯಬೇಕಾ? ವಕ್ಫ್‌ ವಕ್ಫ್‌ ಅಂತಾ ಕೂಗಿಗೊಳ್ಳುವ ನಿಮ್ಮಂತಹ ಮೂರು-ನಾಲ್ಕು ಜನರಿಗೆ ನಾಚಿಕೆಯಾಗಲ್ವಾ? ಎಂದು ಯತ್ನಾಳ ಟೀಂ ವಿರುದ್ಧ ಅವರು ಹರಿಹಾಯ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮುಖಂಡರಾದ ಲೋಕಿಕೆರೆ ನಾಗರಾಜ, ಮಾಡಾಳ್ ಮಲ್ಲಿಕಾರ್ಜುನ, ಬಿ.ಜಿ.ಅಜಯಕುಮಾರ, ಚಂದ್ರಶೇಖರ ಪೂಜಾರ, ಪಿ.ಸಿ.ಶ್ರೀನಿವಾಸ ಭಟ್‌, ಐರಣಿ ಅಣ್ಣೇಶ, ಪ್ರವೀಣ ಜಾಧವ್, ರಾಜು ವೀರಣ್ಣ, ಕೆಟಿಜೆ ನಗರ ಬಿ.ಆನಂದ, ಲೋಕೇಶ, ಕೆ.ಎನ್.ವೆಂಕಟೇಶ ಇದ್ದರು. ...........................................

...ಬಾಕ್ಸ್‌...

2023ರ ಸ್ಥಿತಿ ಮತ್ತೆ ಬಾರದೆಂದೇ ವಿಜಯೇಂದ್ರಗೆ ನಾಯಕತ್ವ

2023ಕ್ಕಿಂತ ಮುಂಚಿನ ಐದಾರು ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ ವಿಜಯೇಂದ್ರ ಸಾಮರ್ಥ್ಯ ನೋಡಿಯೇ ರಾಷ್ಟ್ರೀಯ ನಾಯಕರು ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ಕೊಂಡಿ ಮಂಚಣ್ಣ, ಮಲ್ಲಪ್ಪ ಶೆಟ್ಟಿಯಂತಹ ಕಿತಾಪತಿ ಮಾಡುತ್ತಿರುವ ಮೂರು ಮತ್ತೊಂದು ಎಂಬಂತಿರುವ ತಂಡವು ವಿಜಯೇಂದ್ರ ವ್ಯಕ್ತಿಯಲ್ಲ, ಪಕ್ಷದ ರಾಜ್ಯಾಧ್ಯಕ್ಷ ಅಂತಾ ಅರಿಯಲಿ. ಇಂತಹವರಿಗೆ ವಿಜಯೇಂದ್ರ ಹೆಸರು ಹೇಳುವುದಕ್ಕೂ ಯೋಗ್ಯತೆ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.

..........................

ಕ್ಯಾಪ್ಷನ್

16ಕೆಡಿವಿಜಿ1, 2, 3

ದಾವಣಗೆರೆಯಲ್ಲಿ ಜಗಳೂರು ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಜನ್ಮದಿನಕ್ಕೆ ಶುಭಾರೈಸಿ ಸನ್ಮಾನಿಸಿದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಹಾಳು ಮಾಡುತ್ತಿರುವ ಪ್ರೇಮಿಗಳ ದಿನ
ರಾಜಕೀಯ ಬದುಕಿಗೆ ಜನ್ಮ ನೀಡಿದ್ದು ಗ್ರಾಮೀಣ ಕ್ಷೇತ್ರ