ಕನ್ನಡಪ್ರಭ ವಾರ್ತೆ ಶಹಾಬಾದ
ಅವರು ಗ್ರಾಪಂ ಕಚೇರಿಗೆ ಭೇಟಿ ನೀಡಿ ಗ್ರಾಪಂ ಸದಸ್ಯ ಲಕ್ಷ್ಮೀಕಾಂತ ಕಂದಗೋಳ ಅವರು ಸ್ಮಶಾನ ಭೂಮಿ ಅಭಿವೃದ್ಧಿಗೆ ರಸ್ತೆ ಹಾಗೂ ತಂತಿ ಬೇಲಿ ನಿರ್ಮಿಸಲು 3 ಬಾರಿ ಟೆಂಡರ್ ಕರೆಯದೇ ಇರುವ ಬಗ್ಗೆ ಲೋಕಾಯುಕ್ತರ ಗಮನಕ್ಕೆ ತಂದರು. ಪಿಡಿಒ ರೇವಣಸಿದ್ದಪ್ಪ ಕಲಶೆಟ್ಟಿ ಅವರು 32 ಸಾವಿರ ರು. ಹಣವನ್ನು ತಂತಿ ಬೇಲಿಗಾಗಿ ನೀಡಲಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತರು ಟೆಂಡರ್ ಕರೆಯದೇ ಇಷ್ಟು ಹಣ ಹೇಗೆ ನೀಡಿದ್ದಿರಿ ಎಂದು ಪ್ರಶ್ನಿಸಿದರು.
ಗ್ರಾಪಂ ವ್ಯಾಪ್ತಿಯ ಭಂಕೂರ ವಾಡಾ ಹಾಗೂ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಮುಸ್ಲಿಂ ಸಮಾಜದ ಸ್ಮಶಾನ ಭೂಮಿ ಅಭಿವೃದ್ಧಿಗೆ ಕಾಮಗಾರಿ ಪಟ್ಟಿ ಕರೆದಿದ್ದೀರಿ, ಒಂದೇ ಸಮಾಜಕ್ಕೆ ಎರಡು ರುದ್ರಭೂಮಿ ಅಭಿವೃದ್ಧಿ ಮಾಡಲಾಗುತ್ತಿದ್ದು, ಹಿಂದೂ ಸ್ಮಶಾನ ಭೂಮಿ ಅಭಿವೃದ್ಧಿಗೆ ಏಕೆ ಕಾಮಗಾರಿ ಪಟ್ಟಿ ಕರೆದಿಲ್ಲ ಎಂದು ಪ್ರಶ್ನಿಸಿದರು.ಅಧ್ಯಕ್ಷ ಶರಬಸಪ್ಪ ಧನ್ನಾ ಮಧ್ಯ ಪ್ರವೇಶಿಸಿ, ಆಟದ ಮೈದಾನದಲ್ಲಿ ವಾಲಿಬಾಲ್, ಕಬ್ಬಡ್ಡಿ, ಖೋ ಖೋ ಮೈದಾನದ ಅಭಿವೃದ್ಧಿಗೆ ರು.3.47 ಲಕ್ಷ ಮೀಸಲಿಟ್ಟಿರುವುದಾಗಿ ಮಾಹಿತಿ ನೀಡಿದರು. ಪತ್ರಿಕೆಯಲ್ಲಿ ಪ್ರಕಟಿತ ಕಾಮಗಾರಿ ದರಪಟ್ಟಿ ವಿಕ್ಷೀಸಿದಾಗ ಖೋ ಖೋ ಆಟದ ಮೈದಾನಕ್ಕೆ ರು.1.73 ಲಕ್ಷ. ಪ್ರತ್ಯೇಕ ದರ ಪಟ್ಟ ಕರೆದಿರುವುದನ್ನು ಕಂಡ ಲೋಕಾಯುಕ್ತರು ಸಣ್ಣ ಗ್ರಾಮದಲ್ಲಿ ಅದೆಂತಹ ಆಟದ ಮೈದಾನವಿದೆ ಎಂದು ಪ್ರಶ್ನಿಸಿ, ಈಗಲೇ ಸ್ಥಳ ಪರಿಶೀಲನೆ ನಡೆಸುತ್ತೇನೆ, ಇದರಲ್ಲಿ ತಪ್ಪು ಮಾಹಿತಿ, ತನಿಖೆಗೆ ದಿಕ್ಕು ತಪ್ಪಿಸಲು ಪ್ರಯತ್ನಿಸಿದರೆ, ಕ್ರಿಮಿನಲ್ ಪ್ರಕರಣ ದಾಖಲಿಸಿ, ಪಿಡಿಒ, ಅಧ್ಯಕ್ಷರಿಗೆ ಕೊರಳ ಪಟ್ಟಿ ಹಿಡಿದುಕೊಂಡು ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಲೋಕಾಯುಕ್ತ ಪಿಐ ಅಕ್ಕಮಹಾದೇವಿ, ತಹಶೀಲ್ದಾರ ಮಲಶೆಟ್ಟಿ ಚಿದ್ರಾಯಿ, ತಾಪಂ.ಇಒ ಮಲ್ಲಿನಾಥ ರಾವೂರ ಇದ್ದರು.