ಬ್ಯಾಡಗಿ:
ಪಟ್ಟಣದ ಎಸ್.ಜೆ.ಜೆ.ಎಂ. ತಾಲೂಕು ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಕೀಯರು ಕೊಟ್ಟ ಹಿಂಸೆ ಮತ್ತು ಅವಮಾನಗಳಿಂದ ದೇಶದ ಸ್ವಾತಂತ್ರ್ಯ ಚಳವಳಿ ಎಚ್ಚರಗೊಂಡಿತು, ಕೆಚ್ಚೆದೆಯ ಹೋರಾಟಗಾರರ ಸರ್ವೋಚ್ಚ ತ್ಯಾಗಕ್ಕೆ ಭಾರತದಲ್ಲಿನ ದೇಶಭಕ್ತರು ಕೈಜೋಡಿಸಿದರು. ಅವರೆಲ್ಲರ ಪರಿಶ್ರಮ ಹಾಗೂ ತ್ಯಾಗ ಬಲಿದಾನಗಳಿಂದ ವಿಶ್ವದೆಲ್ಲೆಡೆ ಭಾರತೀಯರು ತಲೆ ಎತ್ತಿ ನಿಲ್ಲುವಂತೆ ಮಾಡಿದ್ದು, ಅಂತಹವರನ್ನು ಸ್ಮರಿಸಿಕೊಂಡು ನಮನಗಳನ್ನು ಸಲ್ಲಿಸುತ್ತೇನೆ ಎಂದರು.ಅಡೆತಡೆ ಇಲ್ಲದ ಪಯಣ
ಭಾರತ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ
ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಫೈರೋಜ್ ಸೋಮನಕಟ್ಟಿ, ದೂರದೃಷ್ಟಿ ವಿಚಾರಗಳ ನಾಯಕತ್ವದಿಂದ ಭಾರತ ಇಂದು 5ನೇ ಅತೀದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ರೈತರು, ಕಾರ್ಮಿಕರು ತಮ್ಮ ಪ್ರಾಣವನ್ನು ಪಣಕ್ಕಿಡುವ ನಮ್ಮ ಸಶಸ್ತ್ರ ಪಡೆಗಳ ವೀರಯೋಧರ ದಣಿವರಿಯದ ಪರಿಶ್ರಮ ಇದಕ್ಕೆ ಸಾಥ್ ನೀಡಿದ್ದು ದೇಶದ ಸ್ವಾತಂತ್ರ್ಯ ದಿನಾಚರಣೆ ಈ ಶುಭ ಸಂದರ್ಭದಲ್ಲಿ ಸರ್ವರಿಗೂ ಶುಭಾಶಯಗಳನ್ನು ತಿಳಿಸುತ್ತೇನೆ ಎಂದರು.ಇದಕ್ಕೂ ಮುನ್ನ ಪೊಲೀಸ್, ಎನ್ಸಿಸಿ ಸೇರಿದಂತೆ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಬಳಿಕ ನಿವೃತ್ತ ಸೈನಿಕರೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದವರನ್ನು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸನ್ಮಾನಿಸಲಾಯಿತು. ಬಳಿಕ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.