ಜಗಜ್ಜನಿಯಾಗುವತ್ತ ಭಾರತ ಹೆಜ್ಜೆ:ಪ್ರಕಾಶ ಮಲ್ಪೆ

KannadaprabhaNewsNetwork |  
Published : Sep 28, 2025, 02:01 AM IST
ಬಿಜೆಪಿಯಿಂದ ಭಾರತ ದರ್ಶನ: ಆರೋಗ್ಯ ಅರಿವು ಉಪನ್ಯಾಸ | Kannada Prabha

ಸಾರಾಂಶ

ಭಾರತ ತಲೆ ತಗ್ಗಿಸುವ ಸ್ಥಿತಿ ಇಲ್ಲ. ಜಗತ್ತೇ ಭಾರತಕ್ಕೆ ತಲೆ ಬಾಗುತ್ತಿದ್ದು, ಭಾರತ ಜಗತ್ತಿನ ಜಗಜ್ಜನಿಯಾಗುವತ್ತ ಸಾಗುತ್ತಿದೆ ಎಂದು ಉಡುಪಿಯ ಪ್ರಕಾಶ ಮಲ್ಪೆ ಹೇಳಿದರು. ನಗರದ ಬಿ.ವಿ.ವಿ.ಸಂಘದ ನೂತನ ಸಭಾಭವನದಲ್ಲಿ ಶುಕ್ರವಾರ ಭಾರತೀಯ ಜನತಾ ಪಾರ್ಟಿ ಬಾಗಲಕೊಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಪ್ರಧಾನಿ ನರೇಂದ್ರ ಮೋದಿಯವರ 75ನೇ ವರ್ಷದ ಹುಟ್ಟುಹಬ್ಬ ನಿಮಿತ್ತ ಭಾರತ ದರ್ಶನ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಬೌದ್ಧಿಕ ಪ್ರಮುಖರಾಗಿ ಭಾರತ ದರ್ಶನದ ಬಗ್ಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಭಾರತ ತಲೆ ತಗ್ಗಿಸುವ ಸ್ಥಿತಿ ಇಲ್ಲ. ಜಗತ್ತೇ ಭಾರತಕ್ಕೆ ತಲೆ ಬಾಗುತ್ತಿದ್ದು, ಭಾರತ ಜಗತ್ತಿನ ಜಗಜ್ಜನಿಯಾಗುವತ್ತ ಸಾಗುತ್ತಿದೆ ಎಂದು ಉಡುಪಿಯ ಪ್ರಕಾಶ ಮಲ್ಪೆ ಹೇಳಿದರು.

ನಗರದ ಬಿ.ವಿ.ವಿ.ಸಂಘದ ನೂತನ ಸಭಾಭವನದಲ್ಲಿ ಶುಕ್ರವಾರ ಭಾರತೀಯ ಜನತಾ ಪಾರ್ಟಿ ಬಾಗಲಕೊಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಪ್ರಧಾನಿ ನರೇಂದ್ರ ಮೋದಿಯವರ 75ನೇ ವರ್ಷದ ಹುಟ್ಟುಹಬ್ಬ ನಿಮಿತ್ತ ಭಾರತ ದರ್ಶನ ಹಾಗೂ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ ಮುಖ್ಯ ಬೌದ್ಧಿಕ ಪ್ರಮುಖರಾಗಿ ಭಾರತ ದರ್ಶನದ ಬಗ್ಗೆ ಮಾತನಾಡಿದರು.

ಶಿಕ್ಷಣ ಪಡೆದ ನಂತರ ತಂದೆ-ತಾಯಿ ಖುಷಿ ಪಡಿಸುವುದೇ ಶಿಕ್ಷಣದ ಮೊದಲ ಹೆಜ್ಜೆಯಾಗಿದೆ. ರಾಮಾಯಣ ಕಾಲದಲ್ಲಿ ಇಡೀ ಜಗತ್ತಿನ ನದಿ ಪರ್ವತಗಳು ಸಂಸ್ಕೃತ ಹೆಸರಿನಿಂದ ಕರೆಯಲ್ಪಡುತ್ತಿದ್ದವು. ರಾಮಾಯಣ ಕಾಲದಿಂದಲೂ ಭಾರತ ಜಗತ್ತನ್ನು ಸಾಂಸ್ಕೃತಿಕವಾಗಿ ಆಳುತ್ತಿತ್ತು. ವಿದೇಶಗಳಿಲ್ಲರದ ಎಲ್ಲ ನೈಸರ್ಗಿಕ, ಪ್ರಾಕೃತಿಕ ಸಂಪತ್ತು ಭಾರತದಲ್ಲಿದೆ. ಭಾರತ ಜಗತ್ತಿಗೆ ಸೊನ್ನೆ ನೀಡಿದೆ. ಸೊನ್ನೆಯ ಇನ್ನೊಂದು ಹೆಸರೇ ಪೂಜ್ಯ ಎಂದು, ಸೊನ್ನೆಯಿಲ್ಲದೆ ಹೋದರೆ ಗಣಿತಶಾಸ್ತ್ರಕ್ಕೆ ಅರ್ಥವೇ ಇರಲ್ಲ ಎನ್ನುವ ಸತ್ಯ ಎಲ್ಲರಿಗೆ ಗೊತ್ತಿದೆ. ಮಹಾಭಾರತದಲ್ಲಿ ಜಗತ್ತಿನ ಎಲ್ಲ ಸಂಗತಿಗಳು ಇವೆ. ಇಂದು ಭಾರತ ಮತ್ತೆ ವಿಶ್ವಗುರುವಾಗಲು ವಿದ್ಯಾರ್ಥಿಗಳು ದೇಶದೊಂದಿಗೆ ಅನುಸಂಧಾನ ಮಾಡಿಕೊಂಡು ಅಭಿವೃದ್ಧಿಗೆ ಶ್ರಮಿಸಬೇಕು. ಮತ್ತೆ ಜಗತ್ತಿನ ಜಗಜ್ಜನನಿಯಾಗಲಿ ಎಂದು ಹೇಳಿದರು.

ಅರಿಸಿಕೇರಿ ಸ್ವದೇಶ ದಿಶಾದ ಮ್ಯಾನೇಜಿಂಗ್ ಡೈರೆಕ್ಟರ್‌ ಕೆ.ಪಿ. ಗುರಲಿಂಗಯ್ಯ ಅವರು ಆರೋಗ್ಯ ಅರಿವು ಕುರಿತು ಮಾತನಾಡಿ, ಆರೋಗ್ಯವಂತ ವ್ಯಕ್ತಿ ಮಾತ್ರ ಏನಾದರೂ ಸಾಧಿಸಬಲ್ಲ. ಮುಂಚೆ ಆರೋಗ್ಯವಂತ ಸಮಾಜ ನಮ್ಮದಾಗಿತ್ತು. ನಮ್ಮ ಪಾರಂಪರಿಕ ಆರೋಗ್ಯ ಪದ್ಧತಿ ಹಾಗೂ ಮನೆ ಅಡುಗೆಯಲ್ಲಿನ ಆರೋಗ್ಯದ ಅರಿವು ಇಂದಿನ ಪೀಳಿಗೆಗೆ ಅಗತ್ಯವಾಗಿದೆ. ಮನೆಯಲ್ಲಿ ಅಡುಗೆಗೆ ಬಳಸುವ ಎಣ್ಣೆಯ ಶುದ್ಧತೆ ಪರೀಕ್ಷಿಸಬೇಕು. ಭಾರತದ ಅಹಾರ ಪದ್ಧತಿ ಜಗತ್ತಿನಲ್ಲಿಯೇ ಶ್ರೇಷ್ಠ ಅಹಾರ ಪದ್ಧತಿಯಾಗಿದೆ. ನಮ್ಮ ಅಡುಗೆ ಮನೆ ಕೇವಲ ಅಹಾರ ಉತ್ಪಾದನೆ ಮಾಡುವುದಲ್ಲದೆ, ನಮ್ಮ ವಂಶ ಉದ್ಧಾರ ಮಾಡುವುದುದಾಗಿದೆ. ಭಾರತದ ಯುವ ಜನತೆ ಸೋಸಿಯಲ್ ಮಿಡಿಯಾ ಮೂಲಕ ಶಕ್ತಿಹೀನರನ್ನಾಗಿ ಮಾಡುವ ಜಾಲದ ಬಗ್ಗೆ ಯುವ ಪೀಳಿಗೆ ಜಾಗೃತಗೊಳ್ಳಬೇಕು. ಭಾರತದ ಪ್ರತಿ ಯುವಕ ಯುವತಿಯರಲ್ಲಿ ಅದ್ಭುತ ಚೈತನ್ಯ ಅಡಗಿದೆ ಅದು ದೇಶಕ್ಕೆ ಉಪಯೋಗವಾಗಲಿ ಎಂದರು.

ಮುಖ್ಯ ಅತಿಥಿಗಳಾಗಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಆಗಮಿಸಿದ್ದರು. ಮಾಜಿ ಶಾಸಕರಾದ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕೊಣ್ಣೂರ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ ಇದ್ದರು. ಜಿ.ಎನ್. ಪಾಟೀಲ, ಡಾ.ಎಂ.ಎಸ್. ದಡ್ಡೇನ್ನವರ, ಮಹೇಶ ಅಂಗಡಿ, ಪ್ರಭುಸ್ವಾಮಿ ಸರಗಣಾಚಾರಿ, ಸಂಗಣ್ಣ ಕಲಾದಗಿ, ಶ್ರೀಧರ ನಾಗರಬೆಟ್ಟ, ಉಮೇಶ ಹಂಚಿನಾಳ, ಕಲ್ಲಪ್ಪ ಭಗವತಿ, ಮಲ್ಲೇಶ ವಿಜಾಪುರ, ವೈಧ್ಯಕೀಯ ಪ್ರಕೋಷ್ಟದ ಸಂಚಾಲಕ ರವಿ ಕೋಟೆನ್ನವರ, ವಿಜಯ ಚೌಧರಿ ಇತರರು ಇದ್ದರು. ಬಿಜೆಪಿ ವೈದ್ಯಕೀಯ ಪ್ರಕೋಷ್ಟ ಹಾಗೂ ಬಿ.ವಿ.ವಿ.ಎಸ್. ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯವರಿಂದ ಕಾರ್ಯಕರ್ತರಿಗೆ ರಕ್ತ ಸಕ್ಕರೆ ಹಾಗೂ ರಕ್ತದೊತ್ತಡ ತಪಾಸಣೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ