ಕನ್ನಡಪ್ರಭ ವಾರ್ತೆ ಜಮಖಂಡಿ
ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ತಾಲೂಕು ವೀರಶೈವ ಪಂಚಮಸಾಲಿ ಸಂಘ, ರಾಣಿ ಚನ್ನಮ್ಮ ವಿವಿಧೋದ್ದೇಶ ಸಹಕಾರಿ ಸಂಘ ನಿ ಆಶ್ರಯದಲ್ಲಿ ಭಾನುವಾರ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಂಡು ಹೆಣ್ಣು ಎಂದು ತಾರತಮ್ಯ ಮಾಡದೆ ಎಲ್ಲ ಮಕ್ಕಳಿಗೂ ಪದವಿವರೆಗೂ ಶಿಕ್ಷಣ ಕೊಡಿಸಬೇಕು. ಇದರಿಂದ ಕೃಷಿ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿದ್ದರೂ ಅದರಲ್ಲಿ ಬಹಳಷ್ಟು ಜ್ಞಾನ ಬೆಳೆಯುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿ, ಸಮಾಜಕ್ಕೆ ಗ್ರಾಮಕ್ಕೆ ಹೆಸರು ತರುವ ಕಾರ್ಯ ಮಾಡಬೇಕು. ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.ಕಷ್ಟಪಟ್ಟು ಶ್ರಮದಿಂದ ದುಡಿದರೆ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ. ನಾನು ಸರ್ಕಾರಿ ಕನ್ನಡ ಶಾಲೆಯಲ್ಲೆ ಕಲಿತ ವಿದ್ಯಾರ್ಥಿ ಎಂಜಿನಿಯರಿಂಗ್ನಲ್ಲಿ ನನಗೆ ಕೆವಲ 9 ಅಂಕ ಕಡಿಮೆ ಬಂದ ಕಾರಣ ಸರ್ಕಾರಿ ನೌಕರಿಯಿಂದ ವಂಚಿತನಾದೆ. ಆದರೆ ನಾನು ₹10 ಲಕ್ಷ ದಿಂದ ಪ್ರಾರಂಭಿಸಿ 500 ಟನ್ ಕಬ್ಬುನುರಿಸುವ ಕಾರ್ಖಾನೆಯಿಂದ ಇಂದು ಇಡೀ ದೇಶದಲ್ಲೆ ಅತೀ ಹೆಚ್ಚು ೧ ಲಕ್ಷ ಟನ್ ಕಬ್ಬು ನುರಿಸುವಷ್ಟರ ಮಟ್ಟಿಗೆ ಬೆಳೆದಿದ್ದೇನೆ. 400 ಎಂ.ವಿ ವಿದ್ಯುತ್ ಉತ್ಪಾದನೆ, ಸಿಎನ್ಜಿ, ಇಥೆನಾಲ್ ಸೇರಿದಂತೆ ಹಲವಾರು ಉತ್ಪನ್ನಗಳು ನಮ್ಮಲ್ಲೆ ಉತ್ಪಾದಿಸುತ್ತಿದ್ದೇವೆ ಎಂದರು.
ವಿಜಯ ಸಂಕೇಶ್ವರ ಅವರು ಕೇವಲ ಒಂದು ಟ್ರಕ್ನಿಂದ ಉದ್ಯೋಗ ಪ್ರಾರಂಭಿಸಿ ಕಷ್ಟ ನೋವುಗಳನ್ನು ಎದುರಿಸಿ ಬೆಳೆಸಿದ ಉದ್ಯಮ ಇಂದು ಜಮಖಂಡಿಯಿಂದ ದೆಹಲಿವರೆಗಿನ ರಸ್ತೆಯಲ್ಲಿ ಪ್ರತಿ ಅರ್ಧ ಗಂಟೆಗೊಂದು ವಾಹನ ಸಂಚರಿಸುತ್ತಿರುತ್ತದೆ. 25 ಸಾವಿರಕ್ಕೂ ಅಧಿಕ ಟ್ರಕ್, ಬಸ್ಗಳನ್ನು ಹೊಂದಿದೆ. ಅಷ್ಟರ ಮಟ್ಟಿಗೆ ವಿಆರ್ಎಲ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ ಎಂದರೆ ಸಣ್ಣ ವಿಷಯವಲ್ಲ ಎಂದು ನಿರಾಣಿ ಹೇಳಿದರು.
ಬಿಡಿಸಿಸಿ ಮಾಜಿ ನಿರ್ದೇಶಕ ಬಿ.ಎಸ್.ಸಿಂಧೂರ ಮಾತನಾಡಿ, ಸಮಾಜ ಒಗ್ಗಟ್ಟಿನಿಂದ ಇರಬೇಕು. ಸಮಾಜದ ಕೆಲಸ ಕಾರ್ಯಗಳಿಗೆ ಕೈ ಜೋಡಿಸಲು ಆಗದಿದ್ದರೆ ಸುಮ್ಮನೆ ಇರಬೇಕು. ವಿರೋಧಿಸುವ ಕಾರ್ಯ ಮಾಡಬಾರದು. ಸಮಾಜದ ಮಕ್ಕಳು ಉನ್ನತ ಹುದ್ದೆ ಅಲಂಕರಿಸಬೇಕು. ಆ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದರು.
---
ಲಕ್ಷ್ಮೀ ಹೆಬ್ಬಾಳಕರ ಅವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 2ಎ ಮೀಸಲಾತಿ ನೀಡಿ ಕುಂದಾ ನೀಡುತ್ತೇವೆ ಎಂದಿದ್ದರು. ಆದರೆ ಸರ್ಕಾರ ಬಂದು 18 ತಿಂಗಳು ಕಳೆದರೂ ಇಲ್ಲಿಯವರೆಗೂ ಸಹೋದರಿ ಲಕ್ಷ್ಮೀ ಹೆಬ್ಬಾಳಕರ್ ಅವರು ಒಂದು ಮಾತು ಆಡುತ್ತಿಲ್ಲ. ಕೇಂದ್ರ ಸರ್ಕಾರದಲ್ಲಿ 2ಎ ಮೀಸಲಾತಿ ಬಗ್ಗೆ ಸಂಬಂಧಪಟ್ಟ ಸಚಿವರ ಗಮನಕ್ಕೆ ತರಲಾಗುವುದು.