-ಬಂಧನಕ್ಕೆ ತೆರಳಿದ್ದ ಪೊಲೀಸ್ ತಂಡದ ಮೇಲೆ ಹಲ್ಲೆಗೆ ಯತ್ನಿಸಿದ್ದ ಸಜಾ ಕೈದಿ । ಆತ್ಮರಕ್ಷಣೆಗೆ ಪೊಲೀಸರು ಕೈದಿ ಮೇಲೆ ಗುಂಡು, ಬಂಧನ
ಕನ್ನಡಪ್ರಭ ವಾರ್ತೆ ಕಲಬುರಗಿ
ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಕಲಬುರಗಿ ಕೇಂದ್ರ ಕಾರಾಗೃಹದಿಂದ ಸಜಾ ಕೈದಿಗಳು ಮೂವರು ಪರಾರಿಯಗಿರುವ ಪ್ರರಣದಲ್ಲಿ ಸಂತೋಷ ಎಂಬ ಕೈದಿಯ ಕಾಲಿಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಪೊಲೀಸರು ಬುಧವಾರ ನಸುಕಿನಲ್ಲಿ ಕಾಲಿಗೆ ಗುಂಡು ಹೊಡೆದು ಕೈದಿಯೋರ್ವನನ್ನು ಬಂಧಿಸಿದ್ದಾರೆ.
ಇನ್ನೋರ್ವ ಸಜಾ ಕೈದಿ ಸಂತೋಷ ಈತ ಕಪನೂರಲ್ಲಿದ್ದಾನೆಂಬ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ಬಂಧನನಕ್ಕೆ ತೆರಳಿದಾಗ ಆತ ಪೊಲೀಸ್ ತಂಡದ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಈ ಹಂತದಲ್ಲಿ ಪೊಲೀಸರ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಕೈದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪರರಾರಿಯಾಗಿದ್ದ ಸಜಾ ಕೈದಿಗಳ ಪತ್ತೆಗೆ ಬೀದರ್, ಯಾದಗಿರಿ, ಕಲಬುರಗಿ ಪೊಲೀಸ್ ಅಂತರ್ ಜಿಲ್ಲಾ ತಂಡ ರಚಿಸಿ ಬೆನ್ನು ಹತ್ತಲಾಗಿತ್ತು. ಇದೀಗ ಕಲಬುರಗಿ ಪೊಲೀಸರಿಗೆ ದೊರಕಿದ ಖಚಿತ ಮಾಹಿತಿಯನ್ನಾಧರಿಸಿ ನಡೆದ ಕಾರ್ಯಾಚರಣೆಯಲ್ಲಿ ಕಪನೂರ್ನಲ್ಲಿ ಅವಿತಿದ್ದ ಸಜಾಕೈದಿ ಸಂತೋಷನನ್ನು ಕಾಲಿಗೆ ಗುಂಟು ಹೊಡೆದು ಬಂಧಿಸಲಾಗಿದೆ.
ಗುಂಡು ಹೊಡೆದ ಸ್ಥಳಕ್ಕೆ ಕಮೀಷನರ್ ಡಾ. ಶರಣಪ್ಪ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಕೈದಿಗಳು ಜೈಲಿನ ಭದ್ರತಾ ಗೋಡೆ ಹಾರಿ ಪರಾರಿಯಾಗಿರೋದೆ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು, ಹೀಗೂ ಪರಾರಿಯಾಗಬಹುದೆ ಎಂದು ಅಚ್ಚರಿಪಡುವಂತಿದೆ. ಸೆಂಟ್ರಲ್ ಜೈಲಿನಿಂದ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮೂವರು ಕೈದಿಗಳು ಮಂಗಳವಾರ ನಸುಕಿನ ಜಾವ ಪರಾರಿಯಾಗಿರುವ ಘಟನೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ವಿಪಕ್ಷಗಳು ಗೃಹ ಸಚಿವರ ಮೇಲೆ ಟೀಕೆ ಮಾಡುತ್ತ ಮುಗಬಿದ್ದಿದ್ದವು. ಸ್ವತಃ ಗೃಹ ಸಚಿವರ ತವರಿನಲ್ಲೇ ಇಂತಹ ಲೋಪ ಎರಡನೇ ಬಾರಿ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಜೈಲು ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪರಾರಿಯಾದ ಕೈದಿಗಳ ಬಂಧನ ಮಾಡಲಾಗಿದ್ದು ಇನ್ನೋರ್ವ ಕೈದಿ ಶೋಧಕ್ಕೆ ಕಾರ್ಯಾಚರಣೆ ತೀವ್ರಗೊಂಡಿದೆ.
ಕಾರಾಗೃಹಕ್ಕೆ ಕಮೀಷನರ್ ಡಾ. ಶರಣಪ್ಪ ಭೇಟಿ- ಪರಿಶೀಲನೆ
------
ಫೋಟೋ- ಕೇಂದ್ರ 1ಕಲಬುರಗಿ ನಗರ ಪೊಲೀಸ್ ಕಮೀಷನರ್ ಡಾ. ಶರಣಪ್ಪ ಅವರು ಕೇಂದ್ರ ಕಾರಾಗೃಹದಲ್ಲಿನ ಭದ್ರತೆ, ಊಟೋಪಚಾರದ ವ್ಯವಸ್ಥೆ ಪರಿಶೀಲಿಸಿದರು.
ಫೋಟೋ- ಕೇಂದ್ರ 2ಕೇಂದ್ರ ಕಾರಾಗೃಹದ ಎತ್ತರದ ಗೋಡೆಯಿಂದ ಪರಾರಿಯಾಗಲು ಕೈದಿಗಳು ಜಮಖಾನಾ, ಧೋತಿಯಂತಹ ಬಟ್ಟೆಗಳನ್ನು ಬಳಸಿ ಗೋಡೆ ಮೇಲಿನ ಬೇಲಿ ಕಂಬಕ್ಕೆ ಕಟ್ಟಿರುವ ನೋಟ. ಕೈದಿ ಪರಾರಿ ನೋಟಗಳ ಸಿಸಿಟಿವಿಗಳಲ್ಲಿ ಸೆರೆಯಾಗಿದ್ದು ವೈರಲ್ ಆಗಿವೆ.
ಫೋಟೋ- ಕೇಂದ್ರ 3ಕಲಬುರಗಿ ಕಾರಾಗೃಹದಲ್ಲಿರುವ ಕೈದಿಗಳೊಂದಿಗೆ ಮುಖಾಮುಖಿಯಾದ ಕಮೀಷನರ್ ಡಾ. ಶರಣಪ್ಪ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.