ಕನ್ನಡಪ್ರಭ ವಾರ್ತೆ ತುಮಕೂರುವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಸಂಸ್ಥೆಯ ಮೂಲ ಕರ್ತವ್ಯ. ಈ ನಿಟ್ಟಿನಲ್ಲಿ ಗೋಕಲ್ದಾಸ್ ಎಕ್ಸ್ ಪೋರ್ಟ್ ನಂತಹ ಸಂಸ್ಥೆಗಳು ಕೈಜೋಡಿಸುತ್ತಿರುವುದು ಶ್ಲಾಘನೀಯ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಮೋಹನ ಎಚ್.ಎಸ್. ಅಭಿಪ್ರಾಯಪಟ್ಟರು.ತುಮಕೂರು ವಿಶ್ವವಿದ್ಯಾನಿಲಯದ ನೂತನ ಜ್ಞಾನಸಿರಿ ಕ್ಯಾಂಪಸ್ ಆವರಣದಲ್ಲಿ ಬೆಂಗಳೂರಿನಗೋಕಲ್ದಾಸ್ ಎಕ್ಸ್ ಪೋರ್ಟ್ ಫೌಂಡೇಶನ್ನ ಸಿಎಸ್ಆರ್ ಅನುದಾನದಡಿ ಹಮ್ಮಿಕೊಂಡಿದ್ದ ಮಳೆನೀರು ಕೊಯ್ಲು ಮತ್ತು ಪುರಾತನಬಾವಿಯ ಪುನಶ್ಚೇತನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತುಮಕೂರು ವಿವಿ ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಹಿರಿಯ ಡೀನ್ ಪ್ರೊ. ನಾಗಭೂಷಣ್ ಎಚ್., ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶ್ರೀನಿವಾಸ್, ಹಿರಿಯ ಪ್ರಾಧ್ಯಾಪಕ ಪ್ರೊ. ಶೇಟ್ ಪ್ರಕಾಶ್, ಗೋಕಲ್ದಾಸ್ ಎಕ್ಸ÷್ಪರ್ಟ್ ಸಂಸ್ಥೆಯ ಉಪಾಧ್ಯಕ್ಷರಾದ ಅಖಿಲ್ ಪಾಷಾ, ಮಹಾಂತೇಶ್ ಬಂಗಾರಿ, ಸಿದ್ದೇಶ್ವರ ಗೌಡ, ಗಿರೀಶ್ ಬಿ.ಆರ್., ರಾಜೇಂದ್ರ ಪ್ರಸಾದ್, ಸ್ಕೋಡವೆಸ್ ನ ನಿರ್ದೇಶಕರಾದ ಡಾ. ವೆಂಕಟೇಶ್ ನಾಯ್ಕ್, ನಾರಾಯಣ ಹೆಗಡೆ, ಕಲಾನಿಕಾಯದ ಡೀನ್ ಪ್ರೊ. ಕೆ.ಜಿ. ಪರಶುರಾಮ್ ಕಾರ್ಯಕ್ರಮ ನಿರೂಪಿಸಿದರು. ಜ್ಞಾನಸಿರಿ ಕ್ಯಾಂಪಸ್ನ ನಿರ್ದೇಶಕ ಪ್ರೊ. ಸುರೇಶ್ ಡಿ. ವಂದಿಸಿದರು.