ಹೊಸ ಮ್ಯಾನ್‌ಹೋಲ್‌ ಕ್ಯಾಪ್‌ ಅಳವಡಿಸಿ

KannadaprabhaNewsNetwork |  
Published : Jun 05, 2025, 12:48 AM IST
ಮೇಯರ್‌ | Kannada Prabha

ಸಾರಾಂಶ

ಪಾ​ಲಿ​ಕೆಯ ವ್ಯಾ​ಪ್ತಿಯ ವಲಯ ಕ​ಚೇ​ರಿ​ಗ​ಳಲ್ಲಿ ಸಾ​ಕಷ್ಟು ಸಿ​ಬ್ಬಂದಿ ಹಾಗೂ ಅ​ತ್ಯಾ​ಧು​ನಿಕ ಯಂತ್ರೋ​ಪ​ಕ​ರ​ಣ​ಗಳ ವ್ಯ​ವಸ್ಥೆ ಇ​ದ್ದರೂ, ಸಾ​ರ್ವ​ಜ​ನಿ​ಕರ ಸ​ಮ​ಸ್ಯೆ​ಗ​ಳನ್ನು ಅ​ಧಿ​ಕಾ​ರಿ​ಗಳು ಬೇ​ಗನೆ ಪ​ರಿ​ಹ​ರಿ​ಸುವ ಕೆ​ಲಸ ಮಾ​ಡು​ತ್ತಿಲ್ಲ. ಖುದ್ದು ವ​ಲಯ ಅ​ಧಿ​ಕಾ​ರಿ​ಗಳು ತಮ್ಮ ವ್ಯಾ​ಪ್ತಿಯ ಮ್ಯಾನ್‌ಹೋಲ್‌ ಸ​ಮ​ಸ್ಯೆ​ಗ​ಳನ್ನು ಪ​ರಿ​ಶೀ​ಲನೆ ನ​ಡೆಸಿ ಕ್ರ​ಮಕ್ಕೆ ಮುಂದಾ​ಗ​ಬೇಕು. ಇ​ಲ್ಲದೇ ಹೋ​ದಲ್ಲಿ ಮೇ​ಯರ್‌ ಪೋನ್‌ಇನ್‌ ಕಾ​ರ್ಯ​ಕ್ರ​ಮ ವಿ​ಫ​ಲ​ವಾ​ದಂತಾ​ಗು​ತ್ತದೆ.

ಹು​ಬ್ಬ​ಳ್ಳಿ: ಹುಬ್ಬಳ್ಳಿ- ಧಾರವಾಡ ಮಹಾನಗರದ ಬ​ಹು​ತೇಕ ವಾರ್ಡ್‌ ಹಾಗೂ ಕಾಲ​ನಿ​ಯಲ್ಲಿ ಮ್ಯಾನ್‌ಹೋಲ್‌ ಕ್ಯಾಪ್‌ಗಳು ಒ​ಡೆದು ಹೋ​ಗಿದ್ದು, ವಾ​ಹನ ಸ​ವಾ​ರ​ರು ಮತ್ತು ಪಾ​ದ​ಚಾ​ರಿ​ಗ​ಳು ಜೀವ ಕೈ​ಯಲ್ಲಿ ಹಿ​ಡಿ​ದು​ಕೊಂಡು ಸಂಚ​ರಿ​ಸ​ಬೇ​ಕಾದ ದುಃ​ಸ್ಥಿತಿ ನಿ​ರ್ಮಾ​ಣ​ವಾ​ಗಿದೆ. ಕೂಡಲೇ ಅಧಿಕಾರಿಗಳು ಹೊಸ ಮ್ಯಾನ್‌ ಹೋಲ್‌ ಕ್ಯಾಪ್‌ ಅಳವಡಿಸಬೇಕು ಎಂದು ಮೇಯರ್‌ ರಾಮಪ್ಪ ಬಡಿಗೇರ ತಿಳಿಸಿದರು.

ನ​ಗ​ರದ ಮ​ಹಾ​ನ​ಗರ ಪಾ​ಲಿಕೆಯ ಮೇ​ಯರ್‌ ಕ​ಚೇ​ರಿಯ ಸ​ಭಾ​ಭ​ವ​ನ​ದಲ್ಲಿ ಬು​ಧ​ವಾರ ಆ​ಯೋ​ಜಿ​ಸಿದ್ದ ಮೇ​ಯರ್‌ ಜತೆ ಮಾ​ತು​ಕತೆ ನೇರ ಪೋನ್‌ ಇನ್‌ ಕಾ​ರ್ಯ​ಕ್ರ​ಮ​ದಲ್ಲಿ ಸಾ​ರ್ವ​ಜ​ನಿ​ಕರ ಅ​ಹ​ವಾಲು ಆ​ಲಿಸಿ ಅ​ವರು ಮಾ​ತ​ನಾ​ಡಿ​ದ​ರು.

ಈ ಕು​ರಿತು ಸಾ​ರ್ವ​ಜ​ನಿ​ಕ​ರಿಂದ ನಿತ್ಯ ಅ​ನೇಕ ದೂ​ರು​ಗಳು ಬ​ರು​ತ್ತಿದ್ದು, ಕೂ​ಡಲೇ ಅ​ಧಿ​ಕಾ​ರಿ​ಗಳು ಹೊಸ ಮ್ಯಾನ್‌ಹೋ​ಲ್‌ ಕ್ಯಾಪ್‌ ಅ​ಳ​ವ​ಡಿ​ಸುವ ಕೆ​ಲಸ ಮಾ​ಡ​ಬೇಕು ಎಂದು ಸೂಚಿಸಿದರು.

ಪಾ​ಲಿ​ಕೆಯ ವ್ಯಾ​ಪ್ತಿಯ ವಲಯ ಕ​ಚೇ​ರಿ​ಗ​ಳಲ್ಲಿ ಸಾ​ಕಷ್ಟು ಸಿ​ಬ್ಬಂದಿ ಹಾಗೂ ಅ​ತ್ಯಾ​ಧು​ನಿಕ ಯಂತ್ರೋ​ಪ​ಕ​ರ​ಣ​ಗಳ ವ್ಯ​ವಸ್ಥೆ ಇ​ದ್ದರೂ, ಸಾ​ರ್ವ​ಜ​ನಿ​ಕರ ಸ​ಮ​ಸ್ಯೆ​ಗ​ಳನ್ನು ಅ​ಧಿ​ಕಾ​ರಿ​ಗಳು ಬೇ​ಗನೆ ಪ​ರಿ​ಹ​ರಿ​ಸುವ ಕೆ​ಲಸ ಮಾ​ಡು​ತ್ತಿಲ್ಲ. ಖುದ್ದು ವ​ಲಯ ಅ​ಧಿ​ಕಾ​ರಿ​ಗಳು ತಮ್ಮ ವ್ಯಾ​ಪ್ತಿಯ ಮ್ಯಾನ್‌ಹೋಲ್‌ ಸ​ಮ​ಸ್ಯೆ​ಗ​ಳನ್ನು ಪ​ರಿ​ಶೀ​ಲನೆ ನ​ಡೆಸಿ ಕ್ರ​ಮಕ್ಕೆ ಮುಂದಾ​ಗ​ಬೇಕು. ಇ​ಲ್ಲದೇ ಹೋ​ದಲ್ಲಿ ಮೇ​ಯರ್‌ ಪೋನ್‌ಇನ್‌ ಕಾ​ರ್ಯ​ಕ್ರ​ಮ ವಿ​ಫ​ಲ​ವಾ​ದಂತಾ​ಗು​ತ್ತದೆ ಎಂದು ಎ​ಚ್ಚ​ರಿ​ಸಿದ​ರು.

ಅ​ವಳಿ ನ​ಗ​ರದ ಸ​ಮಗ್ರ ಅ​ಭಿ​ವೃದ್ಧಿ ಹಾಗೂ ಸ್ಥ​ಳೀಯ ಸ​ಮ​ಸ್ಯೆ​ಗ​ಳನ್ನು ಸ್ವತಃ ಆ​ಲಿ​ಸಿದ ಮೇ​ಯರ್‌, ಕೆ​ಲ​ವೊಂದಿಷ್ಟು ಸ​ಮ​ಸ್ಯೆ​ಗ​ಳಿಗೆ ತ​ಕ್ಷ​ಣವೇ ಪ​ರಿ​ಹಾರ ಕ​ಲ್ಪಿ​ಸು​ವಂತೆ ಅ​ಧಿ​ಕಾ​ರಿ​ಗ​ಳಿಗೆ ಸೂ​ಚನೆ ನೀ​ಡಿ​ದರು.

ಅದಕ್ಕೂ ಮುನ್ನ ನ​ಡೆದ ಪೋನ್‌ ಇನ್‌ ಕಾರ್ಯಕ್ರಮದಲ್ಲಿ ಒಟ್ಟು 21 ದೂರುಗಳು ಬಂದಿದ್ದು, ಎ ವಿಭಾಗದಲ್ಲಿ 6, ಬಿ ವಿಭಾಗದಲ್ಲಿ 3, ಸಿ ವಿಭಾಗದಲ್ಲಿ 12 ದೂರುಗಳು ಬಂದಿವೆ. ಅ​ದ​ರಲ್ಲಿ ರಸ್ತೆ, ನೀರು, ವಿದ್ಯುತ್‌ ದೀಪ, ನಾಲಾಗಳ ಸ್ವಚ್ಛತೆ, ಕಸದ ವಾಹನಗಳ ಸಮಸ್ಯೆ ಬೀದಿನಾಯಿಗಳ ಹಾವಳಿ, ನೀರಿನ ಘಟಗಳ ದುರಸ್ತಿ, ಬಸ್‌ ನಿಲ್ದಾಣಗಳ ಸಮಸ್ಯೆಗಳ ಕುರಿತು ಸಾರ್ವಜನಿಕರು ಮೇಯರ್‌ ಅವರಿಗೆ ದೂರುಗಳನ್ನು ಸಲ್ಲಿಸಿದರು. ದೂರುಗಳನ್ನು ಆ​ದಷ್ಟುಬೇ​ಗನೆ ಬಗೆಹರಿಸು​ವಂತೆ ಅಧಿಕಾರಿಗಳಿಗೆ ಸೂಚಿಸಿದ​ರು.

ಸ​ಮ​ಸ್ಯೆಗೆ ಪ​ರಿ​ಹಾರ ಕ​ಲ್ಪಿ​ಸೋ​ಣ: ಮಹಾನ​ಗ​ರ​ದ​ಲ್ಲಿನ ಸ​ಮ​ಸ್ಯೆ​ಗ​ಳನ್ನು ಪ​ರಿ​ಹ​ರಿ​ಸುವ ನಿ​ಟ್ಟಿ​ನಲ್ಲಿ ನಾನು ಪ್ರಾ​ಮಾ​ಣಿ​ಕ​ವಾದ ಕೆ​ಲಸ ಮಾ​ಡು​ತ್ತಿ​ದ್ದೇ​ವೆ. ಮೇ​ಯರ್‌ ಆಗಿ ಅ​ಧಿ​ಕಾರ ಸ್ವೀ​ಕ​ರಿ​ಸಿದ ನಂತರ ಒಟ್ಟು ಐದು ಪೋನ್‌ ಇನ್‌ ಕಾ​ರ್ಯ​ಕ್ರ​ಮ​ಗ​ಳನ್ನು ಮಾ​ಡ​ಲಾ​ಗಿದೆ. ನಾಲ್ಕು ಕಾ​ರ್ಯ​ಕ್ರ​ಮ​ಗ​ಳಲ್ಲಿ ಒಟ್ಟು 203 ದೂ​ರು​ಗಳು ಬಂದಿದ್ದು, ಅ​ವು​ಗ​ಳಲ್ಲಿ ಎ ವಿ​ಭಾ​ಗ​ದಲ್ಲಿ 110, ಬಿ ವಿ​ಭಾ​ಗ​ದಲ್ಲಿ 10 ಹಾಗೂ ಸಿ ವಿ​ಭಾ​ಗ​ದಲ್ಲಿ 83 ದೂ​ರು​ಗಳು ಬಂದಿ​ದ್ದವು. ಅ​ವು​ಗ​ಳನ್ನು ಪ​ರಿ​ಹ​ರಿ​ಸುವ ಕೆ​ಲಸ ಮಾ​ಡ​ಲಾ​ಗಿದ್ದು, ಸದ್ಯ ಸಿ ವಿ​ಭಾ​ಗ​ದಲ್ಲಿ 70 ದೂ​ರು​ಗಳು ಮಾತ್ರ ಬಾಕಿ ಉ​ಳಿ​ದಿವೆ. ಅ​ವು​ಗ​ಳನ್ನು ಹಂತ ಹಂತ​ವಾಗಿ ಪ​ರಿ​ಹ​ರಿ​ಸ​ಲಾ​ಗು​ವುದು. ಪೋನ್‌ ಇನ್‌ ಕಾರ್ಯಕ್ರಮದ ಮೂಲಕ ಅವಳಿ ನಗರದಲ್ಲಿ ಒಟ್ಟು ₹7.92 ಕೋಟಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಸದ್ಯ ವಿ​ವಿಧ 35 ಕಾ​ಮ​ಗಾ​ರಿ​ಗ​ಳಿಗೆ ಹಣ ಬಿ​ಡು​ಗಡೆ ಮಾ​ಡ​ಲಾ​ಗಿದೆ ಎಂದು ತಿ​ಳಿ​ಸಿ​ದ​ರು.

ಉ​ಪ​ಮೇ​ಯರ್‌ ದು​ರ್ಗಮ್ಮ ಬಿ​ಜ​ವಾಡ ಸೇ​ರಿ​ದಂತೆ ಪಾ​ಲಿಕೆ ವಲಯ ಅ​ಧಿ​ಕಾ​ರಿ​ಗಳು, ಆ​ರೋಗ್ಯ ಅ​ಧಿ​ಕಾ​ರಿ​ಗಳು ಹಾಗೂ ಎಂಜಿನೀಯರ್‌ಗಳು, ಸಿ​ಬ್ಬಂದಿ ಉ​ಪ​ಸ್ಥಿ​ತ​ರಿ​ದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ