ಜಿಲ್ಲೆಯ ನೀರು ರಾಮನಗರಕ್ಕೆ ಹೋಗುತ್ತದೆ ಎನ್ನುವುದೇ ಸುಳ್ಳು

KannadaprabhaNewsNetwork |  
Published : May 30, 2025, 12:51 AM IST
ಪೋಟೋ ಇದೆ : 29 ಕೆಜಿಎಲ್ 1 :  ಶಾಸಕ ಹೆಚ್ ಡಿ ರಂಗನಾಥ್  ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ | Kannada Prabha

ಸಾರಾಂಶ

ಹೇಮಾವತಿ ನೀರನ್ನು ಮಾಗಡಿ ಅಥವಾ ರಾಮನಗರಕ್ಕೆ ಜಿಲ್ಲೆಯ ಪಾಲಿನ ನೀರು ತೆಗೆದುಕೊಂಡು ಹೋಗುತ್ತಾರೆ ಎಂಬುದು ಸುಳ್ಳು ಎಂದು ಶಾಸಕ ಡಾ. ರಂಗನಾಥ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕುಣಿಗಲ್

ಹೇಮಾವತಿ ನೀರನ್ನು ಮಾಗಡಿ ಅಥವಾ ರಾಮನಗರಕ್ಕೆ ಜಿಲ್ಲೆಯ ಪಾಲಿನ ನೀರು ತೆಗೆದುಕೊಂಡು ಹೋಗುತ್ತಾರೆ ಎಂಬುದು ಸುಳ್ಳು ಎಂದು ಶಾಸಕ ಡಾ. ರಂಗನಾಥ್‌ ಹೇಳಿದರು.ತಾಲೂಕಿನ ಶಾಸಕರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೇಮಾವತಿಯಿಂದ 164 ಕಿಲೋಮೀಟರ್ ದೂರದಿಂದ ಕುಣಿಗಲ್ ಗೆ ನೀರು ತರುವ ಪ್ರಯತ್ನದಲ್ಲಿ ನಮ್ಮ ಪಾಲಿನ 300 ಎಂ ಸಿ ಎಫ್ ಟಿ ನೀರು ಪಡೆಯುವುದು ಕಷ್ಟ ಸಾಧ್ಯ. ನೀರಿನ ವಿಚಾರದಲ್ಲಿ ವೈ ಕೆ ರಾಮಯ್ಯ ಹಾಗೂ ಹುಚ್ಚ ಮಾಸ್ತಿ ಗೌಡ ಹೋರಾಟದ ಫಲವಾಗಿ ತುಮಕೂರು ಜಿಲ್ಲೆಗೆ ನೀರು ಬಂದಿದೆ. ಬಿಜೆಪಿ ಮುಖಂಡರು ಹಾಗೂ ಇಂದಿನ ವಿರೋಧ ಪಕ್ಷದ ನಾಯಕರು ಈ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಕುಣಿಗಲ್ ಭಾಗದ ನೀರನ್ನು ಮಾಗಡಿ ಮತ್ತು ರಾಮನಗರಕ್ಕೆ ಕೊಂಡೊಯ್ಯುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.

ತಾಲೂಕಿಗೆ ಬರಬೇಕಾದ 300 ಟಿಎಂಸಿ ನೀರನ್ನು ಕುಣಿಗಲ್ಲಿಗೆ ಲಿಂಕ್ ಕೆನಲ್ ಮೂಲಕ ತರುವ ಪ್ರಯತ್ನ ನಮ್ಮದು. ವಿನಾಕಾರಣ ರಾಜಕೀಯಕ್ಕಾಗಿ ಯೋಜನೆ ವಿರೋಧಸಿಸುವುದಕ್ಕಿಂತ ಜಿಲ್ಲೆಗೆ ಬರಬೇಕಾದ 24 ಟಿಎಂಸಿ ನೀರನ್ನು ತರಲು ಹೋರಾಟ ಮಾಡಿ ಎಂದು ಮನವಿ ಮಾಡಿದರು.

ಕಾವೇರಿ ಕೊಳ್ಳದ ನೀರಾವರಿಯಿಂದ ತುರುವೇಕೆರೆ, ಗುಬ್ಬಿ ಹಾಗೂ ತುಮಕೂರು ಭಾಗಗಳಿಗೆ, ಅದೇ ರೀತಿ ಕೃಷ್ಣ ಕೊಳ್ಳದ ನೀರಾವರಿ ಭಾಗದಿಂದ ಚಿಕ್ಕನಾಯಕನಹಳ್ಳಿ ನೀರು ಹರಿಸಲಾಗುತ್ತಿದೆ. ಆದರೆ ಕುಣಿಗಲ್ ಪಾಲಿನ ನೀರನ್ನು ಸರಿಯಾದ ರೀತಿ ಬಳಸಿಕೊಳ್ಳಲು ಇಲ್ಲಿನ ಆಡಳಿತ ವ್ಯವಸ್ಥೆಯಿಂದ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಡಿಕೆ ಶಿವಕುಮಾರ್ ಮಂತ್ರಿಯಾಗಿದ್ದು ಅಂದು ಇದ್ದ ಸರ್ಕಾರ 614 ಕೋಟಿ ರು. ಅಂದಾಜು ವೆಚ್ಚದಲ್ಲಿ ಕುಣಿಗಲ್ ಲಿಂಕ್ ಕೆನಾಲಿಗೆ ಅನುಮತಿ ನೀಡಲಾಗಿತ್ತು. ನಂತರ ಆದ ರಾಜಕೀಯ ಬದಲಾವಣೆಯಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ 990 ಕೋಟಿ ಅಂದಾಜು ವೆಚ್ಚದಲ್ಲಿ ಪುನಃ ಲಿಂಕ ಕೆನಲ್ ಕಾಮಗಾರಿಯನ್ನು ಪ್ರಾರಂಭಿಸಿ ರೈತರ ಹಿತ ಕಾಯಲು ಮುಂದಾಗಿದೆ ಹೊರತು ಇಲ್ಲಿ ಯಾವುದೇ ಪ್ರತಿಷ್ಠೆ ಅಥವಾ ಬೇರೆಯವರ ಪಾಲಿನ ನೀರನ್ನು ಬಳಿಸಿಕೊಳ್ಳುವ ಹುನ್ನಾರ ಇಲ್ಲ ಎಂದರು.

ನೀರಾವರಿ ವಿಚಾರದಲ್ಲಿ ರಾಜಕೀಯವನ್ನು ಬದಿಗೊತ್ತು ರೈತರ ಹಿತದೃಷ್ಟಿ ಕಾಪಾಡುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಗೆ ಬರಬೇಕಾಗಿರುವ ನೀರಿನ ಬಗ್ಗೆ ಒಟ್ಟಾಗಿ ಹೋರಾಟ ಮಾಡಬೇಕಿದೆ. ಅದನ್ನು ಬಿಟ್ಟು ಲಿಂಕ್ ಕೆನಾಲ್ ಬಗ್ಗೆ ಸಾರ್ವಜನಿಕರಿಗೆ ರೈತರಿಗೆ ದಾರಿ ತಪ್ಪಿಸ ಬೇಕಾಗಿಲ್ಲ ಕೈಮುಗಿದು ಬೇಡಿಕೊಳ್ಳುತ್ತೇನೆ ಪ್ರತಿಯೊಬ್ಬರೂ ಕೂಡ ಸಹಕಾರ ನೀಡಿ ಎಂದು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರಸಹಿತ ಇತಿಹಾಸಕಾರರನ್ನು ಪರಿಚಯಿಸಿ
ಬಿಜೆಪಿಯವರಿಗೆ ದ್ವೇಷ ಭಾಷಣ ಬೇಕಾ?: ಪದ್ಮರಾಜ್‌ ಪ್ರಶ್ನೆ