ರೈತರ ಹಿತರಕ್ಷಣೆ ನಮ್ಮೆಲ್ಲರ ಕರ್ತವ್ಯ: ಪದ್ಮಾವತಿ ಸಂಜೀವ್ ಕುಮಾರ್

KannadaprabhaNewsNetwork |  
Published : Sep 09, 2024, 01:31 AM IST
ಬಿ.ಜೆ.ಪಿ.ನಾರಿ ಶಕ್ತಿ ಬಳಗದಿಂದ ಭದ್ರಾ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮ | Kannada Prabha

ಸಾರಾಂಶ

ತರೀಕೆರೆ, ರೈತರ ಹಿತರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ತರೀಕೆರೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿಜೆಪಿ ನಾರಿ ಶಕ್ತಿ ಬಳಗದ ಮುಖಂಡರಾದ ಪದ್ಮಾವತಿ ಸಂಜೀವ್ ಕುಮಾರ್ ಹೇಳಿದ್ದಾರೆ.

- ಬಿಜೆಪಿ ನಾರಿ ಶಕ್ತಿ ಬಳಗದಿಂದ ಭದ್ರಾ ನದಿಗೆ ಬಾಗಿನ ಅರ್ಪಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ರೈತರ ಹಿತರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ತರೀಕೆರೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಬಿಜೆಪಿ ನಾರಿ ಶಕ್ತಿ ಬಳಗದ ಮುಖಂಡರಾದ ಪದ್ಮಾವತಿ ಸಂಜೀವ್ ಕುಮಾರ್ ಹೇಳಿದ್ದಾರೆ.

ಭದ್ರಾ ಡ್ಯಾಂ ತುಂಬಿದ ಹಿನ್ನಲೆಯಲ್ಲಿ ಬಿಜೆಪಿ ನಾರಿ ಶಕ್ತಿ ಬಳಗದಿಂದ ಲಕ್ಕವಳ್ಳಿ ಬಳಿ ಬಾಗಿನ ಅರ್ಪಿಸಿ ಮಾತನಾಡಿದರು.

ಈ ಬಾರಿ ರಾಜ್ಯದಲ್ಲಿ ಮಳೆ ಚೆನ್ನಾಗಿ ಆಗಿರುವುದರಿಂದ ಎಲ್ಲಾ ಡ್ಯಾಮ್‌ಗಳು ತುಂಬಿ ರೈತರ ಮುಖದಲ್ಲಿ ಸಂತಸ ತುಂಬಿದೆ. ಹೀಗೆ ಪ್ರತಿ ವರ್ಷ ಡ್ಯಾಮ್ ತುಂಬಿ ರೈತರ ಮುಖದಲ್ಲಿ ನಗು ಕಾಣುವುದು ಸಂತೋಷದ ವಿಚಾರ. ನಮ್ಮ ರಾಜ್ಯದಲ್ಲಿ ಮಹಿಳಾ ರೈತರನ್ನು ಹೆಚ್ಚಾಗಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ ಅವರಿಗೆ ಹೆಚ್ಚಿನ ಆದ್ಯತೆಯನ್ನು ಸರ್ಕಾರ ಮತ್ತು ನಾವೆಲ್ಲರೂ ನೀಡಬೇಕು. ಸಾವಯವ ಕೃಷಿ ಪದ್ಧತಿ ಕಡೆ ಸಾಗಲು ಪ್ರೇರೇಪಿಸ ಬೇಕು ಎಂದು ಹೇಳಿದರು.

ಉತ್ತಮ ಆಹಾರ ಪದ್ಧತಿ ಕಡೆಗೂ ನಾವು ಗಮನ ಹರಿಸಬೇಕಾಗಿದೆ. ಪುರಾಣ ಪುಣ್ಯ ಕಥೆಗಳಲ್ಲೂ ಭದ್ರಗೆ ಹೆಚ್ಚಿನ ಮಹತ್ವದ ಸ್ಥಾನವಿದೆ ಇಂಥ ಭದ್ರೆ ಇಂದು ತುಂಬಿ ಹರಿಯುತ್ತಿರುವುದು ಸಂತೋಷ. ಇದೇ ರೀತಿ ಪ್ರತಿ ವರ್ಷ ಭದ್ರೆ ತುಂಬಲಿ ಎಲ್ಲ ರೈತರ ಮುಖದಲ್ಲಿ ಸಂತಸ ತರಲಿ ಎಂದು ತಿಳಿಸಿದರು.

ಬಾವಿಕೆರೆ ಗ್ರಾಪಂ ಅಧ್ಯಕ್ಷೆ ರೂಪ ಮಾತನಾಡಿ, ನಾವು ಈ ದಿನ ಶ್ವೇತಾ ಮತ್ತು ಜ್ಯೋತಿ ಇವರ ಹುಟ್ಟು ಹಬ್ಬವನ್ನ ಆಚರಿಸುವ ಜೊತೆಗೆ, ಭದ್ರ ಡ್ಯಾಮ್ ಗೆ ಬಾಗಿನ ಅರ್ಪರ್ಪಿಸಿರುವುದು ಸಂತೋಷದ ವಿಚಾರ. ಈಗ ಮಳೆ ಬಂದು ಭದ್ರ ಡ್ಯಾಮ್ ತುಂಬಿದ ಹಿನ್ನೆಲೆಯಲ್ಲಿ ಈ ಭಾಗದ ಎಲ್ಲ ರೈತರು ಎರಡು ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಈ ಭಾಗದ ರೈತರ ಸಂಕಷ್ಟ ದೂರಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಧ್ಯ. ಇದೇ ರೀತಿ ಪ್ರತಿ ವರ್ಷ ಮಳೆ ಬಂದು ಡ್ಯಾಮ್ ತುಂಬಿ ಪ್ರಾಣಿ ಪಕ್ಷಿ, ಕುಡಿವ ನೀರಿನ ಜೊತೆಗೆ ರೈತರಿಗೆ ಅನುಕೂಲವಾಗಲಿ ಎಂದು ತಿಳಿಸಿದರು.

ಕೆಂಚಿಕೊಪ್ಪ ಗ್ರಾಪಂ ಸದಸ್ಯೆ ಶ್ವೇತ ಮಾತನಾಡಿ ಈ ದಿನ ನನ್ನ ಹುಟ್ಟುಹಬ್ಬ ಮತ್ತು ನನ್ನ ಸ್ನೇಹಿತೆ ಜ್ಯೋತಿ ಅವರ ಹುಟ್ಟು ಹಬ್ಬ ವನ್ನು ಭದ್ರಗೆ ಬಾಗಿನ ಅರ್ಪಿಸಿ ರೈತರಿಗೆ ಹಿತ ಕಾಪಾಡುವ ನಿಟ್ಟಿನಲ್ಲಿ ಆಚರಿಸಿರುವುದು ತುಂಬಾ ಸಂತೋಷದ ವಿಚಾರ ಎಂದು ತಿಳಿಸಿದರು.

ಬಿಜೆಪಿ ನಾರಿ ಶಕ್ತಿಯ ಅರುಂಧತಿ ಮಾತನಾಡಿ ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆ ಪ್ರತೀಕವೇ ನಮ್ಮ ನದಿಗಳು, ಭದ್ರಾ ನದಿ ತುಂಬಿ ಹರಿಯುತ್ತಿರುವುದು ನಮ್ಮೆಲ್ಲರಿಗೂ ಸಂತಸ. ಇಂಥ ದೇವತೆ ಸ್ವರೂಪದ ಭದ್ರಗೆ ನಾರಿ ಶಕ್ತಿಯಿಂದ ಈ ದಿನ ಬಾಗಿನ ಅರ್ಪಿಸಿರುವುದು ಖುಷಿ ತಂದಿದೆ ಎಂದರು.

ತಾಪಂ ನಿವೃತ್ತ ಕಾರ್ಯ ನಿರ್ವಹಣಾಧಿಕಾರಿ ವಿಶಾಲಾಕ್ಷಮ್ಮ, ಅಜ್ಜಂಪುರ ತಾಪಂ ಮಾಜಿ ಅಧ್ಯಕ್ಷ ಪ್ರತಿಮಾ, ದೋರನಾಳು ಗ್ರಾಪಂ ಸದಸ್ಯೆ ಶೀಲಾವತಿ, ಎಂ.ಸಿ ಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷೆ ಜ್ಯೋತಿ, ಉಡೇವಾ ಗ್ರಾಪಂ ಮಾಜಿ ಉಪಾಧ್ಯಕ್ಷ ಸುಜಿತ ಮತ್ತು ಸುಧಾ ಶ್ರೀನಿವಾಸ್ ಮೋನಿಷ, ಶ್ರೀನಿವಾಸ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.-

8ಕೆಟಿಆರ್.ಕೆ.2ಃ

ಬಿಜೆಪಿ ನಾರಿ ಶಕ್ತಿ ಬಳಗದಿಂದ ಲಕ್ಕವಳ್ಳಿ ಬಳಿ ಭದ್ರಾ ನದಿಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ತಾಪಂ ಮಾಜಿ ಅಧ್ಯಕ್ಷರು, ಬಿಜೆಪಿ ನಾರಿಶಕ್ತಿ ಬಳಗದ ಮುಖಂಡರಾದ ಪದ್ಮಾವತಿ ಸಂಜೀವ್ ಕುಮಾರ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು