ಕನ್ನಡಪ್ರಭ ವಾರ್ತೆ ಜಗಳೂರು
ಸಂಘದ ತಾಲೂಕು ಅಧ್ಯಕ್ಷ ಚಿರಂಜೀವಿ ಮಾತನಾಡಿ, ಸರ್ಕಾರ ಉದ್ದೇಶ ಪೂರ್ವಕವಾಗಿಯೇ ಜಗಳೂರು ತಾಲೂಕಿಗೆ ಅನ್ಯಾಯ ಮಾಡಿದೆ. ಈ ಧೋರಣೆ ಖಂಡಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಾಲೂಕನ್ನು ಬರಪೀಡಿತ ಎಂದು ಘೋಷಿಸುವವರೆಗೆ ಸ್ಥಳದಿಂದ ಕದಲುವುದಿಲ್ಲ. ರಾತ್ರಿ ಇಲ್ಲೇ ಮಲಗಿ ಹೋರಾಟ ಮುಂದುವರಿಸುತ್ತೇವೆ. ಸರ್ಕಾರ ಸ್ಪಂದಿಸದಿದ್ದರೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು. ಯಾರ ಪ್ರಾಣ ಹೋದರೂ ಧರಣಿ ಹಿಂಪಡೆಯುವುದಿಲ್ಲ ಎಂದು ಎಚ್ಚರಿಸಿದರು.
ಉಪಗ್ರಹ ಸರ್ವೇಯಿಂದ ವಾಸ್ತವ ತಿಳಿಯದು:ತಾಲೂಕು ಕಾರ್ಯದರ್ಶಿ ರಾಜು ಭೈರನಾಯಕನಹಳ್ಳಿ ಮಾತನಾಡಿ, ತಾಲೂಕಿನಲ್ಲಿ ತೀವ್ರ ಅಭಾವವಿದ್ದರೂ ಬರಪೀಡಿತ ಪಟ್ಟಿಯಿಂದ ಕೈ ಬಿಟ್ಟಿರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹಾಗೂ ತಹಸೀಲ್ದಾರ್ ಕೆ.ಗುರುಬಸವರಾಜ್ ನೇರ ಹೊಣೆ. ಜಗಳೂರು ತಾಲೂಕಿನಲ್ಲಿ ಮಳೆ ಬಾರದೇ ಕೆಲ ರೈತರು ಮೆಕ್ಕೆಜೋಳ ಬೆಳೆ ನಾಶ ಮಾಡಿದ್ದಾರೆ. ಅಳಿದುಳಿದ ಮೆಕ್ಕೇಜೋಳ, ರಾಗಿ ಬೆಳೆಗಳೂ ಬಿಸಿಲಿನ ಝಳಕ್ಕೆ ಒಣಗಿಹೋಗಿವೆ. ನದಿ ಮೂಲವಿರುವ ಹರಿಹರ ತಾಲೂಕನ್ನು ಎರಡನೇ ಪಟ್ಟಿಯಲ್ಲಿ ಸೇರಿಸಲಾಗಿದೆ. ಆದರೆ ಯಾವುದೇ ನದಿ ಮೂಲವಿಲ್ಲದ ಜಗಳೂರನ್ನು ನಿರ್ಲಕ್ಷಿಸಲಾಗಿದೆ. ಕೇವಲ ಸ್ಯಾಟಲೈಟ್ ಸರ್ವೇಯಿಂದ ವಾಸ್ತವ ತಿಳಿಯುವುದಿಲ್ಲ. ಅಧಿಕಾರಿಗಳ ತಂಡ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ನೈಜ ಪರಿಸ್ಥಿತಿ ಅರಿಯಬೇಕು ಎಂದು ಆಗ್ರಹಿಸಿದರು.
- - -
-17ಜೆ.ಜಿ.ಎಲ್.4: ಜಗಳೂರು ತಾಲೂಕಿನಲ್ಲಿ ಮೆದಗಿನಕೆರೆ ಗ್ರಾಮದ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಸಂಪೂರ್ಣ ಒಣಗಿರುವುದು.