ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ಸಣ್ಣ ಕತೆಗಳ ಆಂಗ್ಲ ಭಾಷಾಂತರಕ್ಕೆ ಜವರೇಗೌಡ ಶ್ಲಾಘನೆ

KannadaprabhaNewsNetwork | Published : Jun 12, 2025 1:29 AM

ಚಾಮರಾಜನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಹಿತಿ ಕೆ.ಶ್ರೀಧರ್(ಸಿರಿ) ಅವರ ಕನ್ನಡ ಪುಸ್ತಕಗಳ ಮರು ಲೋಕಾರ್ಪಣೆ ಮತ್ತು ’ದಿ ಬಿಗ್ ಚಂಪಕ್’ ಇಂಗ್ಲಿಷ್‌ ಕಥಾ ಸಂಕಲನವನ್ನು ಗಣ್ಯರು ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಸಣ್ಣ ಕತೆಗಳ ಕತಾ ಸಂಕಲನ ಇಂಗ್ಲೀಷ್‌ಗೆ ಭಾಷಾಂತರಗೊಳ್ಳುತ್ತಿರುವುದು ದೊಡ್ಡ ಸಾಧನೆ ಎಂದು ಅಪರ ಜಿಲ್ಲಾಧಿಕಾರಿ ಜವರೇಗೌಡ ಹೇಳಿದರು.ನಗರದ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಈಶ್ವರಿ ಸೋಶಿಯಲ್ ಟ್ರಸ್ಟ್ ಹಾಗೂ ಕಾವ್ಯ ಸ್ಪಂದನ ಪಬ್ಲಿಕೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಸಾಹಿತಿ ಕೆ.ಶ್ರೀಧರ್ (ಸಿರಿ) ಅವರ ಕನ್ನಡ ಪುಸ್ತಕಗಳ ಮರು ಲೋಕಾರ್ಪಣೆ ಮತ್ತು ’ದಿ ಬಿಗ್ ಚಂಪಕ’ ಇಂಗ್ಲಿಷ್‌ ಕಥಾ ಸಂಕಲನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಂದಾಯ ಇಲಾಖೆಯಲ್ಲಿದ್ದುಕೊಂಡು ಒತ್ತಡದ ಕೆಲಸದ ನಡುವೆಯೂ ಸಾಹಿತ್ಯ ಕೃಷಿಯನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ, ಸಣ್ಣ ಕತೆಗಳ ಜನಕ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಹ ಕಮಿಷನರ್ ಆಗಿ ಸಣ್ಣ ಕತೆಗಳನ್ನು ಹೊರತಂದು ಪ್ರಸಿದ್ಧಿಯಾದರು ಎಂದರು. ಸಣ್ಣ ಕತೆಗಳು ಉತ್ಕೃಷ್ಟವಾಗಿ ಸಮಾಜದ ಮೇಲೆ ಪ್ರಭಾವ ಬೀರುತ್ತವೆ ಅವು ಸಮಾಜಕ್ಕೆ ಸರಳವಾಗಿ ಸಂದೇಶವನ್ನು ಕೊಡುತ್ತವೆ ಎಂದರು.

ಗ್ರಾಮ ಆಡಳಿತಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಧರ್ ಪ್ರವೃತ್ತಿಯಲ್ಲಿ ಸಾಹಿತಿಯಾಗಿ ಜಿಲ್ಲೆಯ ಭಾಷೆಯ ಸೊಗಡನ್ನು ಬಳಕೆ ಮಾಡಿಕೊಂಡು ಕತೆಗಳನ್ನು ಬರೆದಿರುವ ದೊಡ್ಡ ಸಂಪಿಗೆ ಕಥಾ ಸಂಕಲನ ಚಂಪಕ್ ಆಗಿ ಇಂಗ್ಲೀಷ್ ಭಾಷೆಗೆ ಭಾಷಾಂತರಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ, ಈ ಮೂಲಕ ಈ ಜೆಲ್ಲೆಯ ಸಂಸ್ಕೃತಿ, ಪರಂಪರೆ ಜಾಗತಿಕಗೊಳ್ಳುತ್ತಿದೆ ಇವರಿಂದ ಮತ್ತಷ್ಟು ಕೃತಿಗಳು ಹೊರ ಪ್ರಸಿದ್ಧಿಯಾಗಲಿ ಎಂದು ಹಾರೈಸಿದರು.ಪುಸ್ತಕಗಳ ಲೋಕಾರ್ಪಣೆಗೊಳಿಸಿ ಪುಸ್ತಕಗಳ ಬಗ್ಗೆ ಮಾತನಾಡಿದ ಸಾಹಿತಿ ಮಹೇಶ್ ಹರವೆ ಮೂಲತಃ ಬಳ್ಳಾರಿ ಜಿಲ್ಲೆಯವರಾಗಿರುವ ಶ್ರೀಧರ್ ಅವರು ಗ್ರಾಮ ಅಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಚಾಮರಾಜನಗರದ ಗ್ರಾಮೀಣ, ಜಾನಪದ ಸೊಗಡನ್ನು ಕಥೆಯಾಗಿಸಿ, ನೈಜತೆಯನ್ನು ಕೊಟ್ಟು ಈ ಭಾಗದ ಸಂಸ್ಕೃತಿ ಪರಂಪರೆಯನ್ನು ಹೊರ ಜಗತ್ತಿಗೆ ತೋರ್ಪಡಿಸಲು ಹೊರಟಿದ್ದಾರೆ ಎಂದರು.ನೈಜ ಘಟನೆಗಳಿಗೆ ಕಥೆಯ ಸ್ವರೂಪ ನೀಡುತ್ತಿರುವ ಅವರು ಒಡಪಾಡು ಮತ್ತು ದೊಡ್ಡಸಂಪಿಗೆ ಎಂಬ ಕಥಾ ಸಂಕಲವನ್ನು ಹೊರತಂದಿದ್ದಾರೆ. ಬಾಲ್ಯವನ್ನು ನೆನಪಿಸುವ ಗೌರಿ ಮಕ್ಕಳು ಕಥಾ ಸಂಕಲನ ಹಾಗೂ ಪಂಚಮುಖಿ ಎಂಬ ಕವನ ಸಂಕಲವನ್ನು ಪ್ರಕಟಿಸಿದ್ದಾರೆ. ಇವರೊಬ್ಬ ವೈಚಾರಿಕತೆಯ ಲೇಖಕರಾಗಿ ಹೊರ ಹೊಮ್ಮುತ್ತಿದ್ದಾರೆ ಎಂದರು.ದೊಡ್ಡ ಸಂಪಿಗೆ ಕಥಾ ಸಂಕಲನ ಚಂಪಕ್ ಆಗಿ ಇಂಗ್ಲೀಷ್ ಭಾಷೆಗೆ ಭಾಷಾಂತರಗೊಳಿಸಿರುವ ತೀರ್ಥಹಳ್ಳಿಯ ಕವಯತ್ರಿ, ಅನುವಾದಕಿ ಪದ್ಮಜಾ ಜೋಯ್ಸ್ ಮಾತನಾಡಿ, ಸಾಹಿತ್ಯ ವಿವಿಧತೆಯಲ್ಲಿ ಏಕತೆಯನ್ನು ಸಾರಿ, ಸಹೋದರತೆ, ಸಹಕಾರವನ್ನು ಬೆಸೆಯುತ್ತದೆ ಎಂದರು. ಸ್ಥಳೀಯ ಭಾಷೆಯನ್ನು ಸದ್ಬಳಕೆ ಮಾಡಿಕೊಂಡು ಇಲ್ಲಿನ ಕಲೆ, ಸಂಸ್ಕೃತಿ ಪರಂಪರೆಯ ಬಗ್ಗೆ ತಿಳಿಸಿಕೊಡುವ ದೊಡ್ಡ ಸಂಪಿಗೆ ಕಥಾ ಸಂಕಲನಾ ಬಹಳ ಮಹತ್ತರವಾಗಿದೆ ಇದನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡುವುದೇ ದೊಡ್ಡ ಸವಾಲಾಗಿತ್ತು ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಸಂಸ್ಕೃತಿ ಚಿಂತಕ ಮಹಾದೇವ ಶಂಕನಪುರ ಮಾತನಾಡಿ, ದೊಡ್ಡ ಸಂಪಿಗೆ ಕಥಾ ಸಂಕಲನ ಇಂಗ್ಲೀಷ್‌ಗೆ ಅನುವಾದಗೊಂಡು ವಿಶ್ವಕ್ಕೆ ಈ ನೆಲದ ಭಾಷೆ, ಸಂಸ್ಕೃತಿ ಪರಂಪರೆಯನ್ನು ಪರಿಚಯಿಸುತ್ತಿರುವುದು ಸಂತೋಷದ ಸಂಗತಿ ಎಂದರು. ಸಣ್ಣ ಕತೆಗಳ ಅನುವಾದಗಳು ಈಗೆ ಹೆಚ್ಚು ಮಹತ್ವವನ್ನು ಪಡೆದುಕೊಂಡಿವೆ, ಭಾಷೆಯ ಸೃಜನ ಶೀಲತೆ ಅತಿ ಮುಖ್ಯ ಲೇಖಕ ಕತೆಗಳಲ್ಲಿ ಲೀನವಾಗಿ ಅಧ್ಯಯನಗೊಂಡಾಗ ಉತ್ತಮ ಕತೆಗಳು ಹೊರಬರುತ್ತವೆ ಎಂದರು.

ಸಾಹಿತಿ ಕೆ.ಶ್ರೀಧರ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಈ ನೆಲ ಮಂಟೇಸ್ವಾಮಿ, ಮಹದೇಶ್ವರ, ಬಿಳಿಗಿರಿರಂಗಪ್ಪ ಅವರ ಮಹಾ ಕಾವ್ಯಗಳನ್ನು ಒಳಗೊಂಡ ಪುಣ್ಯ ಭೂಮಿ, ಇದು ಕತ್ತಲ ರಾಜ್ಯವಲ್ಲ, ಪರಂಜ್ಯೋತಿ, ಆದಿ ಜ್ಯೋತಿ ಇರುವ ಬೆಳಕಿನ ರಾಜ್ಯ ಎಂದರು.ಈ ವೇಳೆ ಸಾಹಿತಿ ಅನಿಲ್‌ಕುಮಾರ್ ಹೊಸೂರು, ಪರಿಸರ ಪ್ರೇಮಿ ವೆಂಕಟೇಶ್ ಉಪಸ್ಥಿತರಿದ್ದರು.